ಆದಿಚುಂಚನಗಿರಿ ಶ್ರೀಗಳಿಗೆ ಕೊಡಬಾರದ ಕಷ್ಟ ಕೊಟ್ಟಿದ್ದ ಎಚ್ಡಿಕೆ?
ಬೆಂಗಳೂರು, ಜುಲೈ 21: ಒಕ್ಕಲಿಗ ಸಮುದಾಯದ ಇಬ್ಬರು ಪ್ರಭಾವಿ ರಾಜಕೀಯ ಮುಖಂಡರಾದ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ನಡುವಿನ ರಾಜಕೀಯ ಮೇಲಾಟ ಇಂದು ನಿನ್ನೆಯದಲ್ಲ.
ಇವರಿಬ್ಬರ ನಡುವಿನ ವಾಗ್ಯುದ ವೈಯಕ್ತಿಕ ಮಟ್ಟಕ್ಕೂ ಹೋದ ಉದಾಹರಣೆ ಪ್ರತೀ ಅಸೆಂಬ್ಲಿ ಅಧಿವೇಶನದಲ್ಲೂ ನಡೆಯುತ್ತದೆ. ಮಾತಿನ ಭರಾಟೆಯಲ್ಲಿ ತಮ್ಮ ತಮ್ಮ ಕುಟುಂದವರನ್ನೂ ಎಳೆದು ತರುತ್ತಾರೆ.[ಎಚ್ಡಿಕೆ vs ಡಿಕೆಶಿ ಡುಶುಂ ಡುಶಂ ಸದನ 'ಬಲಿ' ಚಿತ್ರ]
ಇತ್ತೀಚೆಗೆ ಮುಕ್ತಾಯಗೊಂಡ ಬೆಳಗಾವಿ ಅಧಿವೇಶನದಲ್ಲೂ ಇಬ್ಬರ ನಡುವೆ ಮಾತಿನ ಸಮರವೇ ನಡೆದಿತ್ತು. ಪ್ರಸಕ್ತ ಮಳೆಗಾಲದ ಅಧಿವೇಶನದಲ್ಲೂ ವಿದ್ಯುತ್ ಇಲಾಖೆಗೆ ಸಂಬಂಧಪಟ್ಟ ಚರ್ಚೆ, ವೈಯಕ್ತಿಕ ಮಟ್ಟಕ್ಕಿಳಿದು ಸಮಾಜ, ಮಠ, ಮಠಾಧೀಶರ ಕಡೆ ಹೊರಳಿತ್ತು. (ಆದಿಚುಂಚುನಗಿರಿ ಸ್ವಾಮೀಜಿ ವಿಧಿವಶ)
ನಮ್ಮ ಸಮಾಜದ ಸ್ವಾಮೀಜಿಯವರಿಗೆ ಒಸಿ ತೊಂದ್ರೆ ಕೊಟ್ಟಿದ್ದೀರಾ ನೀವು ಎಂದು ಡಿ ಕೆ ಶಿವಕುಮಾರ್, ಕುಮಾರಸ್ವಾಮಿ ವಿರುದ್ದ ಗಂಭೀರ ಆರೋಪ ಹೊರಿಸಿದ್ದಾರೆ.
ಆದಿಚುಂಚನಗಿರಿ ಮಠದ ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳು ಜನವರಿ 13, 2013ರಂದು ಕೊನೆಯುಸಿರೆಳೆದಿದ್ದರು.
ಕುಮಾರಸ್ವಾಮಿ ಮತ್ತು ಡಿಕೆಶಿ ನಡುವೆ ಸೋಮವಾರ (ಜು 20) ಅಸೆಂಬ್ಲಿಯಲ್ಲಿ ಮಾತಿನ ಚಕಮಕಿ ತಾರಕ್ಕೇರಿದಾಗ ಮುಗುಳ್ನಗುತ್ತಾ ಸಿಎಂ ಸಿದ್ದರಾಮಯ್ಯ ಗಮನಿಸುತ್ತಿದ್ದದ್ದು ವಿಶೇಷವಾಗಿತ್ತು.

ಆದಿಚುಂಚನಗಿರಿ ಸ್ವಾಮೀಜಿ
ನಮ್ಮ ಸಮಾಜದ ಸ್ವಾಮೀಜಿ (ಶಿವೈಕ್ಯರಾದ ಬಾಲಗಂಗಾಧರನಾಥ ಸ್ವಾಮೀಜಿ) ಅವರಿಗೆ ಕೊಟ್ಟ ತೊಂದರೆ ಒಂದೆರಡಲ್ಲ. ನೀವು ಏನು ಮಾಡಿದ್ದೀರಿ ಎಂದು ಎಲ್ಲವೂ ನಮಗೆ ತಿಳಿದಿದೆ ಎಂದು ಡಿಕೆಶಿ, ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡರು.

ಕೊರಗಿನಲ್ಲೇ ಸ್ವಾಮೀಜಿ ನಿಧನರಾಗಿದ್ದು
ಸ್ವಾಮೀಜಿಗಳ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದಿರಿ. ಸ್ವಾಮೀಜಿಯವರನ್ನು ರಾಜಕಾರಣಿ ಮಾಡಲು ಹೊರಟಿದ್ದು, ನಾನಾ ನೀವಾ? ಸ್ವಾಮೀಜಿಯವರ ಮೇಲೆ ಮೊಕದ್ದಮೆ ದಾಖಲಿಸಿದಿರಿ. ಈ ಕೊರಗಿನಿಂದಲೇ ಸ್ವಾಮೀಜಿ ನಿಧನರಾಗಿದ್ದು ಎಂದು ಡಿಕೆಶಿ, ಎಚ್ಡಿಕೆ ವಿರುದ್ದ ಹರಿಹಾಯ್ದರು.

ಮಾತಿನ ಚಕಮಕಿ ನಡುವೆ ಕಾಲೆಳೆದ ರಮೇಶ್ ಕುಮಾರ್
ಇಬ್ಬರು ಒಕ್ಕಲಿಗ ಸಮುದಾಯದವರ ಮಾತಿನ ಸಮರ ಜೋರಾಗಿದ್ದಾಗ ಸಿದ್ದರಾಮಯ್ಯ ಅದನ್ನು ನೋಡಿ ನಗುತ್ತಿದ್ದರು. ಇದನ್ನು ಗಮನಿಸಿದ ಶಾಸಕ ರಮೇಶ್ ಕುಮಾರ್, ಸಿದ್ದರಾಮಯ್ಯನವರಿಗೆ ತಾನು ಸಿಎಂ ಆದ ದಿನಕ್ಕಿಂತಲೂ ಇಂದು ಬಹಳ ಸಂತೋಷ ತಂದ ದಿನವಾಗಿರ ಬಹುದು ಎಂದು ಲೇವಡಿ ಮಾಡಿದರು.

ವಿಫಲವಾದ ಕುಮಾರಸ್ವಾಮಿ
ಸರಕಾರದ ವಿರುದ್ದ ಅವಿಶ್ವಾಸ ಗೊತ್ತುವಳಿ ಸಂಬಂಧ ನಡುವೆ ನಡೆದ ಚರ್ಚೆಯಲ್ಲಿ ಜೆಡಿಎಸ್ ಮುಖಂಡರು ಸುಮಾರು ಮೂರು ತಾಸು ಮಾತಾನಾಡಿದರೂ, ಸಿದ್ದರಾಮಾಯ್ಯ ಸರಕಾರವನ್ನು ಮುಜುಗರಕ್ಕೀಡು ಮಾಡುವಲ್ಲಿ ವಿಫಲರಾದರು.

ಡಿ ಕೆ ಶಿವಕುಮಾರ್ ಮತ್ತು ಅವರ ಹೆಂಡತಿ
ಬಳ್ಳಾರಿಯಲ್ಲಿ ನನ್ನ ಹೆಂಡತಿ ಗಣಿಗಾರಿಕೆ ಮಾಡಿದ್ದಾಳೆಂದು ಕೇಸು ದಾಖಲಿಸಿದ್ದೀರಾ. ಅವಳು ಅಲ್ಲಿ ಬಳ್ಳಾರಿಗೆ ಹೋಗಿ ಗಣಿಗಾರಿಕೆ ಮಾಡಿದ್ಲಾ ಎಂದು ಡಿಕೆಶಿ ಖಾರವಾಗಿ ಪ್ರಶ್ನಿಸುತ್ತಿರಬೇಕಾದರೆ, ನಿಮ್ಮ ಹೆಂಡತಿ ಗಣಿಗಾರಿಕೆ ಮಾಡಿರುವುದಕ್ಕೆ ರೆಕಾರ್ಡ್ ಇದೆ. ಸರಕಾರಿ ಕಚೇರಿಯನ್ನು ನಿಮ್ಮ ಲಾಭಕ್ಕೆ ಬಳಸಿಕೊಂಡಿರುವುದಕ್ಕೆ ನಮ್ಮಲ್ಲಿ ಪ್ರೂಫ್ ಇದೆ ಎಂದು ಕುಮಾರಸ್ವಾಮಿ ಬೆಳಗಾವಿ ಅಧಿವೇಶನದಲ್ಲಿ ಪ್ರತ್ಯುತ್ತರ ನೀಡಿದ್ದರು.
-
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ












Click it and Unblock the Notifications