ಪ್ರವಾಸೋದ್ಯಮ ಇಲಾಖೆ ಜತೆ ಸಿಎಂ ಸಭೆ, ಭಾರತ್ ಜೋಡೋ ಪಾದಯಾತ್ರೆಯಲ್ಲಿ ಡಿಕೆಶಿ
ಬೆಂಗಳೂರು ಆಗಸ್ಟ್ 18: ಕರ್ನಾಟಕದ ಪ್ರಮುಖ ರಾಜಕೀಯ ವಿದ್ಯಮಾನಗಳು. ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರುಗಳ ಕಾರ್ಯಕ್ರಮ, ರಾಜಕೀಯ ಬೆಳವಣಿಗೆ ಕುರಿತು ಇಲ್ಲಿ ತಿಳಿದುಕೊಳ್ಳಬಹುದು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಧ್ಯಾಹ್ನ 12: ಪ್ರವಾಸೋದ್ಯಮ ಇಲಾಖೆ ಪರಿಶೀಲನಾ ಸಭೆ, ಸ್ಥಳ: ಮುಖ್ಯಮಂತ್ರಿ ಗೃಹ ಕಚೇರಿ, ಕುಮಾರಕೃಪಾ ರಸ್ತೆ, ಬೆಂಗಳೂರು.
ಮಧ್ಯಾಹ್ನ 01: ಕೈಗಾರಿಕಾ ಟೌನ್ಶಿಪ್ ಚಾಲನೆ, ಸ್ಥಳ: ಮುಖ್ಯಮಂತ್ರಿ ಗೃಹ ಕಚೇರಿ, ಕುಮಾರಕೃಪಾ ರಸ್ತೆ, ಬೆಂಗಳೂರು.

ಮಧ್ಯಾಹ್ನ 01.45: ಬಿಐಎಎಲ್ ಕಾರ್ಪೋರೇಟ್ ವ್ಯವಹಾರಗಳ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್.ವೆಂಕಟರಾಮನ್ ಜತೆ ಮಾತುಕತೆ, ಸ್ಥಳ: ಮುಖ್ಯಮಂತ್ರಿ ಗೃಹ ಕಚೇರಿ, ಕುಮಾರಕೃಪಾ ರಸ್ತೆ, ಬೆಂಗಳೂರು.
ಕಾಂಗ್ರೆಸ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಳಗ್ಗೆ 10: ಚಿತ್ರದುರ್ಗ, ತುಮಕೂರು ಮತ್ತು ಮಂಡ್ಯ ಪ್ರವಾಸ ಕೈಗೊಳ್ಳಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್.
ಬೆಳಗ್ಗೆ 11: ಚಿತ್ರದುರ್ಗದ ಚಳ್ಳಕೆರೆಯಲ್ಲಿ 'ಭಾರತ್ ಜೋಡೋ ಪಾದಯಾತ್ರೆ'ಯಲ್ಲಿ ಭಾಗಿ. ನಂತರ ಮಧ್ಯಾಹ್ನ 2.30ಕ್ಕೆ ತುಮಕೂರಿಗೆ ಆಗಮನ. 'ಭಾರತ್ ಜೋಡೋ ಪಾದಯಾತ್ರೆ'ಯಲ್ಲಿ ಭಾಗಿ. ಸಂಜೆ 04ಕ್ಕೆ ಮಂಡ್ಯ ಜಿಲ್ಲೆಗೆ ಭೇಟಿ, ಅಲ್ಲಿನ ಕರ್ನಾಟಕ ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ಮಧು ಜಿ.ಮಾದೇಗೌಡರ ಅಭಿನಂದನಾ ಸಮಾರಂಭ, ನಂತರ ರಸ್ತೆ ಮೂಲಕ ಬೆಂಗಳೂರಿಗೆ ವಾಪಸ್.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ಗುರುವಾರ ಬೆಳಗ್ಗೆ ಚಿಕ್ಕಮಗಳೂರಿಗೆ ಭೇಟಿ ನೀಡಿರುವ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಭೇಟಿ, ಶೃಂಗೇರಿ ಮಠ ಜಗದ್ಗುರುಗಳ ಭೇಟಿ, ನಂತರ ಶೃಂಗೇರಿ ನೇರಲಕೂಡಿಗೆ ಭೂ ಕುಸಿತದ ಸ್ಥಳ ಹಾಗೂ ಕೊಪ್ಪದ ಕೊಗ್ರೆಯಲ್ಲಿ ಕುಸಿದ ಸೇತುವೆ ಪರಿಶೀಲನೆ, ಶೃಂಗೇರಿಯ ಗೌರಿಶಂಕರ ಸಭಾ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜತೆ ಸಭೆ, ಮಧ್ಯಾಹ್ನ ಬಾಳೆಹೊನ್ನೂರಿನ ರಂಭಾಪುರೀ ಮಠದ ಜಗದ್ಗುರುಗಳ ಭೇಟಿ, ಮರ ಬಿದ್ದು ಮೃತಪಟ್ಟವರ ಮನೆಗೆ ತೆರಳಲಿರುವ ಸಿದ್ದರಾಮಯ್ಯ, ಬಳಿಕ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಿರಾಶ್ರಿತರ ಭೇಟಿ. ಮೂಡಿಗೆರೆ ಐ.ಬಿ.ಯಲ್ಲಿ ಬೆಳೆಗಾರರ ಜೊತೆ ಸಭೆ.
ಮಧ್ಯಾಹ್ನ 12.30: ಆಮ್ ಆದ್ಮಿ ಪಕ್ಷದಿಂದ 'ಸರ್ಕಾರಿ ಶಾಲೆ ಮಾರಾಟಕ್ಕಿದೆ- ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್ ಪಾತ್ರವೇನು?' ಬಗ್ಗೆ ಸುದ್ದಿಗೋಷ್ಠಿ, ಎಎಪಿ ರಾಜ್ಯ ಮಾಧ್ಯಮ ವಕ್ತಾರ ಕೆ. ಮಥಾಯಿ ಭಾಗಿ, ಸ್ಥಳ: ಆಮ್ ಆದ್ಮಿ ಪಕ್ಷದ ಕೇಂದ್ರ ಕಚೇರಿ , ಕುಮಾರಪಾರ್ಕ್ ರೈಲ್ವೆ ಪ್ಯಾರಲಲ್ ರಸ್ತೆ, ಬೆಂಗಳೂರು.












Click it and Unblock the Notifications