ವಿಧಾನ ಪರಿಷತ್ ಚುನಾವಣೆ: 6 ರಲ್ಲಿ ಎರಡು ಜೆಡಿಎಸ್, 1 ಬಿಜೆಪಿ ಗೆಲುವು
ಮೈಸೂರು, ಜೂನ್ 12: ಇಂದು ನೆಡಯುತ್ತಿರುವ ವಿಧಾನಪರಿಷತ್ ಚುನಾವಣೆ ಮತ ಎಣಿಕೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಫಲಿತಾಂಶ ಹೊರ ಬಿದ್ದಿದ್ದು ಜೆಡಿಎಸ್ನ ಮರಿತಿಬ್ಬೇಗೌಡ ಗೆದ್ದಿದ್ದಾರೆ.
ಈ ಗೆಲುವಿನ ಮೂಲಕ ನಾಲ್ಕನೇ ಬಾರಿ ಮರಿತಿಬ್ಬೇಗೌಡ ಅವರು ಪರಿಷತ್ಗೆ ಆಯ್ಕೆ ಆದಂತಾಗಿದೆ. ಅವರು ತಮ್ಮ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್ನ ಎಂ.ಲಕ್ಷ್ಮಣ್ ಅವರನ್ನು 360 ಮತಗಳ ಅಂತರದಿಂದ ಸೋಲಿಸಿದ್ದಾರೆ.
ವಿಧಾನಪರಿಷತ್ ಚುನಾವಣೆ: ಇಂದು ಫಲಿತಾಂಶ
ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ನ ರಮೇಶ್ ಬಾಬು ಅವರು ಸೋಲನ್ನಪ್ಪಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಮಪ್ಪ ಅವರು ಸ್ಪರ್ಧಿಸಿದ್ದರು.
ಭೋಜೆಗೌಡ
ಅವರು
907
ಮತಗಳ
ಮುನ್ನೆಡೆ
ಕಾಯ್ದುಕೊಂಡಿದ್ದಾರೆ.
8ನೇ
ಸುತ್ತಿನ
ಅಂತ್ಯಕ್ಕೆ
ಅವರಿಗೆ
6329
ಮತಗಳು
ದೊರೆತಿವೆ.
ಬಿಜೆಪಿಯ
ಅಭ್ಯರ್ಥಿ
ಗಣೇಶ್
ಕಾರ್ಣಿಕ್
5407
ಮತಗಳನ್ನು
ಪಡೆದಿದ್ದಾರೆ,
ಕಾಂಗ್ರೆಸ್
ಅಭ್ಯರ್ಥಿ
ಕೆ.ಕೆ.ಮಂಜುನಾಥ್
2450
ಮತಗಳನ್ನು
ಪಡೆದಿದ್ದಾರೆ.
ಒಟ್ಟು
16479
ಮತಗಳು
ಚಲಾವಣೆಯಾಗಿದ್ದು
ಗೆಲುವಿಗೆ
7847
ಮತಗಳು
ಬೇಕಿದೆ.
ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 2ನೇ ಸುತ್ತಿನ ಪ್ರಾಶಸ್ತ್ಯದ ಮತಗಳ ಎಣಿಕೆ ಮುಗಿದಿದ್ದು, ಜೆಡಿಎಸ್ನ ಪ್ರತಾಪ್ ರೆಡ್ಡಿ ಅವರು 8,176 ಮತಗಳು ಗಳಿಸಿದ್ದಾರೆ. ಬಿಜೆಪಿಯ ಶ್ರೀನಿವಾಸ್ ಅವರಿಗೆ 7,876 ಮತಗಳು ಪಡೆದಿದ್ದಾರೆ. ಪ್ರತಾಪ್ ರೆಡ್ಡಿ ಅವರು 270 ಮತಗಳು ಮುಂದೆ ಇದ್ದಾರೆ.
ಕಾಂಗ್ರೆಸ್ನ ಚಂದ್ರಶೇಖರ ಪಾಟೀಲ್ ಅಷ್ಟೇನು ಉತ್ತಮ ಸ್ಥಿತಿಯಲ್ಲಿಲ್ಲ ಅಲ್ಲದೆ ನಿರೀಕ್ಷೆ ಹುಟ್ಟಿಸಿದ್ದ ಹೋರಾಟಗಾರ ಡಾ.ರಝಾಕ್ ಉಸ್ತಾದ್ ಹಾಗೂ ವಾಟಾಳ್ ನಾಗರಾಜು ಅವರು ಹಿಂದೆ ಬಿದ್ದಿದ್ದಾರೆ.
ಒಟ್ಟು ಆರು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ ಫಲಿತಾಂಶ ಹೊರಬೀಳಲಿದೆ. ನೈರುತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ ಹಾಗೂ ಈಶಾನ್ಯ ಪದವೀಧರ ಕ್ಷೇತ್ರ, ನೈರುತ್ಯ ಪದವೀಧರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರಗಳಿಗೆ ಜೂನ್ 8ರಂದು ಮತದಾನ ನಡೆದಿತ್ತು.