Get Updates
Get notified of breaking news, exclusive insights, and must-see stories!

ಭೂ ಕಂದಾಯ ಕಾಯ್ದೆ ತಿದ್ದುಪಡಿ- 2022 ವಿಧಾನ ಪರಿಷತ್ತಿನಲ್ಲಿ ಅಂಗೀಕಾರ, ಏನಿದು?

ಬೆಂಗಳೂರು, ಸೆಪ್ಟೆಂಬರ್ 19: ವಿಧಾನ ಪರಿಷತ್ತಿನ ಮುಂಗಾರು ಅಧಿವೇಶನದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ- 2022" ಅಂಗೀಕಾರವನ್ನು ಸೋಮವಾರದಂದು ಪಡೆಯಲಾಗಿದೆ. ಕಾನೂನು ಸಚಿವ ಮಾಧುಸ್ವಾಮಿ ವಿಧಾನಪರಿಷತ್ತಿ ಮುಂಗಾರು ಅಧಿವೇಶನದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ- 2022 ಅನ್ನು ಮಂಡನೆಯನ್ನು ಮಾಡಿದರು. ಈ ವೇಳೆ ಬಗರ್ ಹುಕುಂ ಅರ್ಜಿ ಹಾಕಲು ಸಮಯಾವಧಿ ವಿಸ್ತರಣೆ ಮಾಡಿ ಬಿಲ್ ತರಲಾಗಿದೆ. ಅನಧಿಕೃತ ಸಾಗುವಳಿ ಭೂಮಿಗಳನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ ಎಂದು ಸದನಕ್ಕೆ ತಿಳಿಸಿದರು.

ಈ ವೇಳೆ ವಿಧಾನ ಪರಿಷತ್ತಿನ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಮಾತನಾಡಿ, 7,15,700 ಅಪ್ಲಿಕೇಶನ್ ಗಳು ಪೆಂಡಿಂಗ್ ಇವೆ. ಅಕ್ರಮ-ಸಕ್ರಮ ಮಾಡುವುದರ ಪರಿಣಾಮವನ್ನು ಬೆಂಗಳೂರಲ್ಲಿ ಅನುಭವಿಸಿದ್ದೇವೆ. ಅರಣ್ಯ ಕಾಯ್ದೆ ಬಂದ ನಂತರ ಲಕ್ಷಾಂತರ ಜನ ಸಾಗುವಳಿ ಮಾಡ್ತಿರುವವರ ಮೇಲೆ ತೂಗುಗತ್ತಿ ನೇತಾಡ್ತಾ ಇದೆ. ಈ ಬಗ್ಗೆ ಯೋಚಿಸಬೇಕು. ಗೋಮಾಳದಲ್ಲೂ ಅಕ್ರಮವಾಗಿ ಸಾಗುವಳಿ ನಡೆಯುತ್ತಿದೆ. ಮಠ, ಸಂಸ್ಥೆಗೂ ಕೊಟ್ಟಿರುವ ಗೋಮಾಳ ಜಾಗವನ್ನು ಸಕ್ರಮ ಮಾಡುವ ಮೊದಲು ಯೋಚಿಸಬೇಕು. ಗೋಮಾಳ ಗೋಮಾಳವಾಗಿಯೇ ಇರಬೇಕು. ಕೋಟ್ಯಾಂತರ ರೂ ಬೆಲೆಬಾಳುವ ಜಾಗವನ್ನು ಸಾವಿರಾರು ರುಪಾಯಿಗೆ ಕೊಡಲಾಗಿದೆ. ಅಕ್ರಮ - ಸಕ್ರಮ ಮಾಡುವಾಗ ಎಷ್ಟು ಅಕ್ರಮ ನಡೆಯುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು.

ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಮಂಡಿಸಿದ್ದ ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ- 2022 ಅಂಗೀಕಾರವನ್ನು ಪಡೆಯಲಾಯಿತು.

Karnataka Land Revenue Amendment Act-2022 was passed in the Legislative Council

ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ- 2022ಯಲ್ಲಿ ಏನಿದೆ?

ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ ಮಂಡಿಸಿ ದಿನಾಂಕ 1-1-2005 ರ ಹಿಂದಿನಿಂದ ಸಾಗುವಳಿ ಮಾಡಲಾಗುತ್ತಿರುವ 17-3-2018 ರಿಂದ 16-3-2019 ರವರೆಗೆ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಗಳನ್ನು ಸಕ್ರಮಗೊಳಿಸಲು ನಮೂನೆ-57 ನ್ನು ಸಲ್ಲಿಸುವುದಕ್ಕೆ ಒಂದು ವರ್ಷ ಕಾಲಾವಕಾಶ ನೀಡುವ ಸಲುವಾಗಿ ಈ ತಿದ್ದುಪಡಿ ವಿಧೇಯಕದಲ್ಲಿ ಸೇರಿಸಲಾಗಿದೆ.

Karnataka Land Revenue Amendment Act-2022 was passed in the Legislative Council

ಸಂಸತ್ತಿನ ಸಾರ್ವತ್ರಿಕ ಚುನಾವಣೆ ಮಾದರಿ ನೀತಿ ಸಂಹಿತೆ ಕಾರಣ 10-3-2019 ರಿಂದ ಅರ್ಜಿಗಳನ್ನು ಸ್ವೀಕರಿಸಿರುವುದಿಲ್ಲ ಮತ್ತು ಶಾಸಕರು ಹಾಗೂ ಸಾರ್ವಜನಿಕರಿಂದ ಈ ಬಗ್ಗೆ ಹಲವು ಮನವಿಗಳು ಸ್ವೀಕೃತಗೊಂಡಿವೆ. ಹಾಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ-1964 ರ 94 ಎ ಪ್ರಕರಣವನ್ನು ತಿದ್ದುಪಡಿ ಮಾಡುವುದರ ಮೂಲಕ ನಮೂನೆ-57 ನ್ನು ಸಲ್ಲಿಸುವುದಕ್ಕಾಗಿ ಸಮಯ ವಿಸ್ತರಿಸಲು ಕಂದಾಯ ಅಧಿನಿಯಮಕ್ಕೆ ತಿದ್ದುಪಡಿ ಅವಶ್ಯವೆಂದು ಪರಿಗಣಿಸಿ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗಿತ್ತು. ಇದೀಗ ವಿಧಾನ ಪರಿಷತ್ತಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ- 2022ಕ್ಕೆ ಅಂಗೀಕಾರ ಸಿಗುವ ಮೂಲಕ ಉಭಯ ಸದನದಲ್ಲಿ ವಿಧೇಯಕ ಅಂಗೀಕಾರಗೊಂಡಂತೆ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+