ಏ 4ರಂದು ಕಾಂಗ್ರೆಸ್‌ನಿಂದ ಎರಡನೇ ಪಟ್ಟಿ ಬಿಡುಗಡೆ: ಕೇಂದ್ರ ಸಮಿತಿಗೆ ಶಿಫಾರಸು ಮಾಡಿದ ಪ್ರಮುಖ ಹೆಸರುಗಳನ್ನು ತಿಳಿಯಿರಿ

ಬೆಂಗಳೂರು, ಮಾರ್ಚ್‌ 01: ಕಾಂಗ್ರೆಸ್ ( Congress ) ಪಕ್ಷವು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಏಪ್ರಿಲ್ 4 ರಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ 124 ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ( DK Shivakumar ), ಮಾಜಿ ಸಿಎಂ ಸಿದ್ದರಾಮಯ್ಯರಂತ ( Siddaramaiah ) ಪ್ರಮುಖ ನಾಯಕರ ಹೆಸರುಗಳನ್ನು ಘೋಷಣೆ ಮಾಡಿದೆ.

ಕೋಲಾರ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಮೇದುವಾರಿಕೆ ಸೇರಿದಂತೆ 52 ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಕರ್ನಾಟಕ ಘಟಕವು ಒಂದೇ ಹೆಸರನ್ನು ಅಂತಿಮಗೊಳಿಸಿದ್ದು, ಅದನ್ನು ಪಕ್ಷದ ವರಿಷ್ಠರಿಗೆ ಅನುಮೋದನೆಗಾಗಿ ಕಳುಹಿಸಿದೆ ಎಂದು ತಿಳಿದುಬಂದಿದೆ.

Karnataka Elections: Congress likely to release its second list of candidates on April 4

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯು ಏಪ್ರಿಲ್‌ 4 ರಂದು ಚರ್ಚೆಗೆ ಒಳಪಡಲಿದೆ. ಈ ಸಮಿತಿಯಲ್ಲಿ ರಾಹುಲ್ ಗಾಂಧಿ, ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೆವಾಲಾ ಸೇರಿದಂತೆ ಹಲವು ಪ್ರಮುಖರಿದ್ದಾರೆ.

ಉಳಿದ 48 ಕ್ಷೇತ್ರಗಳಿಗೆ ಪಕ್ಷದ ರಾಜ್ಯ ಸ್ಕ್ರೀನಿಂಗ್ ಸಮಿತಿ ಪ್ರತಿ ಕ್ಷೇತ್ರಕ್ಕೆ ಇಬ್ಬರ ಹೆಸರನ್ನು ಅಂತಿಮಗೊಳಿಸಿದೆ. ಈ ಕ್ಷೇತ್ರಗಳಲ್ಲಿ ಮೊದಲ ಪ್ರಾಶಸ್ತ್ಯದಂತೆ ಒಬ್ಬ ಅಭ್ಯರ್ಥಿಯನ್ನು ತೆಗೆದುಹಾಕಿ ಕೇಂದ್ರ ಚುನಾವಣಾ ಆಯೋಗಕ್ಕೆ ಪಟ್ಟಿ ಸಲ್ಲಿಸುವಂತೆ ಕೇಂದ್ರ ನಾಯಕರು ರಾಜ್ಯ ನಾಯಕರನ್ನು ಕೇಳಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.

Karnataka Elections: Congress likely to release its second list of candidates on April 4

52 ಕ್ಷೇತ್ರಗಳ ಟಿಕೆಟ್‌ಗೆ ಏಪ್ರಿಲ್ 4 ರಂದು ಅನುಮೋದನೆ ನೀಡಲಾಗುವುದು. ಆದರೆ, ಉಳಿದ 48 ಕ್ಷೇತ್ರಗಳಿಗೆ ಪಕ್ಷದ ಮುಖಂಡರು ಹೆಚ್ಚಿನ ಚರ್ಚೆ ನಡೆಸಬಹುದು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಕಾಂಗ್ರೆಸ್ ಈಗಾಗಲೇ 224 ಸ್ಥಾನಗಳ ಪೈಕಿ 124 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

2018 ರ ವಿಧಾನಸಭಾ ಚುನಾವಣೆಯಲ್ಲಿ 4,000 ಕ್ಕಿಂತ ಕಡಿಮೆ ಮತಗಳನ್ನು ಅಂತರದಿಂದ ಸೋತಿರುವ 9 ಅಭ್ಯರ್ಥಿಗಳನ್ನು ಮರುನಾಮಕರಣ ಮಾಡಲು ಪಕ್ಷವು ನಿರ್ಧರಿಸಿದೆ.

ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರನ್ನು ಎರಡನೇ ಟಿಕೆಟ್‌ಗೆ ರಾಜ್ಯ ಘಟಕ ಶಿಫಾರಸು ಮಾಡಿದೆ. ವರುಣಾ ಕ್ಷೇತ್ರಕ್ಕೆ ಈಗಾಗಲೇ ಸಿದ್ದರಾಮಯ್ಯ ಹೆಸರನ್ನು ಪಕ್ಷ ಘೋಷಿಸಿದೆ.

Karnataka Elections: Congress likely to release its second list of candidates on April 4

ಹಾಲಿ ಶಾಸಕ ಹರಿಹರ ರಾಮಪ್ಪ ( ಹರಿಹರ ಕ್ಷೇತ್ರ ) ಅವರಿಗೆ ಮತ್ತೆ ಟಿಕೆಟ್‌ ನೀಡಲು ಕಾಂಗ್ರೆಸ್‌ ತೀರ್ಮಾನಿಸಿದೆ. ಹಾಲಿ ಶಾಸಕ ವೆಂಕಟರಮಣಪ್ಪ ಅವರ ಪುತ್ರ ಎಚ್‌ವಿ ವೆಂಕಟೇಶ್ ಅವರನ್ನು ಪಾವಗಡ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.

ಯಾದಗಿರಿ ಕ್ಷೇತ್ರದಿಂದ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಎಬಿ ಮಾಲಕ ರೆಡ್ಡಿ ಅವರ ಪುತ್ರ ಅನುರಾಗ್ ಮಾಲಕ ರಡ್ಡಿ ಹೆಸರನ್ನು ಕಾಂಗ್ರೆಸ್‌ ಪಕ್ಷ ಸೂಚಿಸಿದೆ. ಮಾಲಕ ರೆಡ್ಡಿ ಶೀಘ್ರದಲ್ಲೇ ಕಾಂಗ್ರೆಸ್ ಸೇರುವ ನಿರೀಕ್ಷೆಯಿದೆ. ಬಿಜೆಪಿ ಕೂಡ ಯಾದಗಿರಿ ಕ್ಷೇತ್ರದಿಂದ ಅನುರಾಗ್ ರೆಡ್ಡಿಗೆ ಟಿಕೆಟ್ ನೀಡಬಹುದು ಎಂಬ ಮಾತುಗಳು ಕೇಳಿಬಂದಿವೆ. ಇದು ಕುತೂಹಲ ಮೂಡಿಸಿದೆ.

ರಾಜ್ಯ ಘಟಕವು ಶಿಫಾರಸು ಮಾಡಿದ ಕೆಲವು ಹೆಸರುಗಳು ಇಲ್ಲಿವೆ:

ಕ್ಷೇತ್ರ ಅಭ್ಯರ್ಥಿ
ಗುರುಮಿಟ್ಕಲ್ ಬಾಬುರಾವ್ ಚಿಂಚನಸೂರ್
ಹೊನ್ನಾಳಿ ಡಿ ಜಿ ಶಾಂತನಗೌಡ
ಬಾದಾಮಿ ಭೀಮಸೇನ ಚಿಮ್ಮನಕಟ್ಟಿ
ಸಿಂದನೂರು ಹಂಪನಗೌಡ ಬಾದರ್ಲಿ
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮೋಹನ್ ಲಿಂಬಿಕಾಯಿ
ಮೊಳಕಾಲ್ಮುರು ಎನ್ ವೈ ಗೋಪಾಲಕೃಷ್ಣ
ಕಡೂರು ವೈ ಎಸ್ ವಿ ದತ್ತ
ತರಿಕೆರೆ ಶ್ರೀನಿವಾಸ್
ಕಲಘಟಗಿ ಸಂತೋಷ್ ಲಾಡ್‌
ಮೂಡಗೆರೆ ನಯನಾ ಮೋಟಮ್ಮ
ಚಿಕ್ಕಮಗಳೂರು ಹೆಚ್ ಡಿ ತಮ್ಮಯ್ಯ
ಅರಸೀಕೆರೆ ಕೆ ಎಂ ಶಿವಲಿಂಗೇಗೌಡ
ಗುಬ್ಬಿ ಎಸ್ ಆರ್ ಶ್ರೀನಿವಾಸ್
ಪುಲಕೇಶಿನಗರ ಆರ್ ಅಖಂಡ ಶ್ರೀನಿವಾಸ್ ಮೂರ್ತಿ
ಸಿ ವಿ ರಾಮನಗರ ಆರ್ ಸಂಪತ್‌ ರಾಜ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+