Get Updates
Get notified of breaking news, exclusive insights, and must-see stories!

ಇವಿಎಂ ಯಂತ್ರಗಳನ್ನೇ ಮರೆತು ಹೋದ ಅಧಿಕಾರಿಗಳು; ಸ್ಥಳೀಯರಿಂದ ಆಕ್ರೋಶ

ಚಿಕ್ಕಮಗಳೂರು, ಮೇ 11: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಬುಧವಾರ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ. ಸದ್ಯ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದ್ದು, ಸ್ಟ್ರಾಂಗ್ ರೂಮ್ ಸೇರಿಕೊಂಡಿದೆ.

ಶಾತಿಯುತವಾಗಿ ಮತದಾನ ನಡೆಸಲು ಚುನಾವಣಾ ಆಯೋಗ ಸಕಲ ರೀತಿಯಲ್ಲೂ ಸಿದ್ದತೆಯನ್ನ ಮಾಡಿಕೊಂಡಿತ್ತು. ಚುನಾವಣಾ ಮತದಾನ ಆರಂಭಗೊಂಡ ಕ್ಷಣದಿಂದ ಮುಕ್ತಾಯದ ನಂತರ ಅಭ್ಯರ್ಥಿಗಳ ಭವಿಷ್ಯ ಅಡಗಿರುವ ಇವಿಎಂ ಯಂತ್ರಗಳನ್ನ ಸ್ಟ್ರಾಂಗ್‌ ರೂಮ್‌ ತಲುಪುವವರೆಗೂ ಚುನಾವಣಾಧಿಕಾರಿಗಳು ಫುಲ್ ಅಲರ್ಟ್ ಆಗಿರಬೇಕು. ಆದರೆ ಬುಧವಾರ ಸಂಜೆ 6 ಗಂಟೆಗೆ ಮತದಾನ ಮುಗಿದ ಮೇಲೆ ಇವಿಎಂ ಯಂತ್ರವನ್ನ ಮತಗಟ್ಟೆಯಲ್ಲಿ ಬಿಟ್ಟು ಹೋಗಿದ್ದಾರೆ.

evm machines

ಹೌದು, ಚಿಕ್ಕಮಗಳೂರು ನಗರದ ಮತಗಟ್ಟೆಯಲ್ಲಿ ಅಧಿಕಾರಿಗಳು ಇವಿಎಂ ಯಂತ್ರಗಳನ್ನು ಮರೆತು ಹೋಗಿರುವ ಘಟನೆ ನಡೆದಿದೆ ಎಂದು ವಿಜಯವಾಣಿ ವರದಿ ಮಾಡಿದೆ. ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾದ 168ರಲ್ಲಿ ಮತಯಂತ್ರಗಳನ್ನು ಬಿಟ್ಟು ಹೋಗಿದ್ದರು. ಇದನ್ನ ಗಮನಿಸಿದ ಪಕ್ಷದ ಚುನಾವಣಾ ಏಜೆಂಟ್​ಗಳು ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇನ್ನೂ ಪಕ್ಷದ ಚುನಾವಣಾ ಏಜೆಂಟ್‌ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾದ 168ರ ಮತಗಟ್ಟೆಗೆ ಬಂದು ಇವಿಎಂ ಯಂತ್ರಗಳನ್ನು ತೆಗೆದುಕೊಂಡು ತೆರಳಿದ್ದಾರೆ. ಇನ್ನೂ ಅಭ್ಯರ್ಥಗಳ ಭವಿಷ್ಯ ಅಡಗಿರುವ ಇವಿಎಂ ಯಂತ್ರಗಳನ್ನ ಬಿಟ್ಟು ಹೋದ ಹಿನ್ನೆಲೆ ಚುನಾವಣಾ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರಾಜಕೀಯ ಪಕ್ಷದ ಏಜೆಂಟ್​​​ರು ಆಕ್ರೋಶ ಹೊರ ಹಾಕಿದ್ದಾರೆ.

evm machines

ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾದ ಕಾಲೇಜಿನಲ್ಲಿ 168 ಮತ್ತು 169 ಎರಡು ಮತಗಟ್ಟೆ ಸ್ಥಾಪಿಸಲಾಗಿತ್ತು. ಮತದಾನದ ಬಳಿಕ 169ರ ಮತಗಟ್ಟೆಯ ಇವಿಎಂಗಳನ್ನು ಮಾತ್ರ ತೆಗೆದುಕೊಂಡು ಹೋಗಲಾಗಿತ್ತು. 168 ಮತಗಟ್ಟೆಯ ಇವಿಎಂಗಳನ್ನು ಮರೆತು ಹೋಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಪಕ್ಷದ ಏಜೆಂಟ್‌ ಮಾಹಿತಿ ತಿಳಿಸಿದ ನಂತರ ಬಂದು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಫಲಿತಾಂಶದ ದಿನ ಇಲ್ಲಿಯ ಯಂತ್ರಗಳಲ್ಲಿ ಯಾವುದೇ ಮೋಸ ನಡೆಯಬಾರದು ಎಂದು ಪಕ್ಷದ ಚುನಾವಣಾ ಏಜೆಂಟ್​​ಗಳು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ವಿಜಯಪುರದಲ್ಲಿ ಇವಿಎಂ ಯಂತ್ರಗಳನ್ನು ಕಂಡು ರೊಚ್ಚಿಗೆದ್ದ ಜನರು

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 58,282 ಮತಗಟ್ಟೆಗಳಿವೆ. ಚುನಾವಣಾ ಭದ್ರತೆಗಾಗಿ 1.56 ಲಕ್ಷ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಚುನಾವಣೆ ಶಾಂತಿಯುತವಾಗಿ ನಡೆಯಲು ಚುನಾವಣಾ ಆಯೋಗ ಸಕಲ ಸಿದ್ದತೆಯನ್ನ ಮಾಡಿಕೊಂಡಿತ್ತು, ಆದರೆ, ವಿಜಯಪುದಲ್ಲಿ ಇವಿಎಂ, ವಿವಿಪ್ಯಾಟ್‌ ಯಂತ್ರಗಳನ್ನು ಜನರು ಎತ್ತಿ ನೆಲಕ್ಕೆ ಹಾಕಿ ಕುಕ್ಕಿರುವ ಘಟನೆ ನಡೆದಿದೆ.

ವಿಜಯಪುರ; ಇವಿಎಂ ಒಡೆದ ಗ್ರಾಮಸ್ಥರು, 30 ಜನರು ಪೊಲೀಸ್ ವಶಕ್ಕೆ
ಹೌದು, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಮತಯಂತ್ರಗಳನ್ನ ಒಡೆದು ಪುಡಿಪುಡಿ ಮಾಡಿರುವ ಘಟನೆ ಬುಧವಾರ ನಡೆದಿದೆ. ಇವಿಎಂ, ವಿವಿಪ್ಯಾಟ್‌ ಯಂತ್ರಗಳನ್ನು ಜನರು ಎತ್ತಿ ಕುಕ್ಕಿದ್ದಾರೆ.

ಕಾಯ್ದಿರಿಸಿದ್ದ ಮತಯಂತ್ರಗಳನ್ನು ಗ್ರಾಮಸ್ಥರು ಪುಡಿಪುಡಿ ಮಾಡಿದ್ದು, ಮಸಬಿನಾಳ, ಡೋಣುರ ಗ್ರಾಮದಿಂದ ಮತಯಂತ್ರಗಳನ್ನು ಚುನಾವಣಾ ಸಿಬ್ಬಂದಿಯು ವಾಪಸ್‌ ತೆಗೆದುಕೊಂಡು ವಿಜಯಪುರಕ್ಕೆ ಹೋಗುವಾಗ ಈ ಘಟನೆ ಸಂಭವಿಸಿದೆ. ಇವಿಎಂ ಯಂತ್ರಗಳನ್ನು ಕಂಡು ರೊಚ್ಚಿಗೆದ್ದ ಜನರು ಅವುಗಳನ್ನು ರಸ್ತೆಯಲ್ಲೇ ಒಡೆದು ಪುಡಿ ಮಾಡಿದ್ದಾರೆ.

ಮತಯಂತ್ರಗಳ ಬಗ್ಗೆ ಸಿಬ್ಬಂದಿಯಿಂದ ಸರಿಯಾದ ಉತ್ತರ ಸಿಗದಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು, ತಪ್ಪು ಭಾವಿಸಿ ಯಂತ್ರಗಳನ್ನು ವಾಹನದಿಂದ ತೆಗೆದು ರಸ್ತೆಗೆ ಎತ್ತಿ ಹಾಕಿದ್ದಾರೆ. ಈ ವೇಳೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ಜಟಾಪಟಿ ನಡೆದು, ಸಿಬ್ಬಂದಿಗೂ ಥಳಿಸಿರುವುದು ವರದಿಯಾಗಿದೆ. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+