ಕರ್ನಾಟಕ ಬಜೆಟ್ ಅಧಿವೇಶನ LIVE: ನಿಲ್ಲದ ಗಲಾಟೆ, ಕಲಾಪ ನಾಳೆಗೆ ಮುಂದೂಡಿಕೆ
ಬೆಂಗಳೂರು, ಫೆಬ್ರವರಿ 07: ಬುಧವಾರದಿಂದ ನಡೆಯುತ್ತಿರುವ ಕರ್ನಾಟಕ ಬಜೆಟ್ ಅಧಿವೇಶನ ಇಂದು(ಗುರುವಾರ) ಸಹ ಮುಂದುವರಿಯಲಿದ್ದು,ಬಿಜೆಪಿ ಶಾಸಕರು ಸದನದಲ್ಲಿ ಇಂದೂ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ನಿನ್ನೆ ಅಧಿವೇಶನದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಅವರ ಭಾಷಣ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು. ಸರ್ಕಾರದ ಬಳಿ ಬಹುಮತವಿಲ್ಲ ಎಂದು ಘೋಷಣೆ ಕೂಗಿದ್ದರು.
ಈ ಬೆಳವಣಿಗೆಯ ನಂತರ ತಮ್ಮ 22 ಪುಟಗಳ ಭಾಷಣವನ್ನು ಮೊಟಕುಗೊಳಿಸಿದ ರಾಜ್ಯಪಾಲರು ಕೇವಲ ಮೊದಲ ಮತ್ತು ಕೊನೆಯ ಪುಟಗಳನ್ನಷ್ಟೇ ಓದಿ ಭಾಷಣ ಮುಗಿಸಿ, ವಾಪಸ್ಸಾಗಿದ್ದರು.
ನಿನ್ನೆಯ ಅಧಿವೇಶನಕ್ಕೆ ಕಾಂಗ್ರೆಸ್ ನ 8, ಬಿಜೆಪಿಯ 3 ಮತ್ತು ಜೆಡಿಎಸ್ ನ ಓರ್ವ ಶಾಸಕರು ಗೈರಾಗಿದ್ದರು ಎನ್ನಲಾಗಿತ್ತು.

ಕಾಂಗ್ರೆಸ್ ತನ್ನ ಅತೃಪ್ತ ಶಾಸಕರಿಗೆ ಈಗಾಗಲೇ ವ್ಹಿಪ್ ಜಾರಿಗೊಳಿಸಿದ್ದರೂ, ಕೆಲವರು ವ್ಹಿಪ್ ಉಲ್ಲಂಘಿಸಿ ಸದನಕ್ಕೆ ಹಾಜರಾಗಿರಲಿಲ್ಲ.
ಇಂದು ಸಹ ಮುಂದುವರಿಯಲಿರುವ ಅಧಿವೇಶನದ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.
Bengaluru: Protest in Karnataka Assembly by BJP MLAs alleging that the present state government is a minority government and it doesn't have the required numbers. pic.twitter.com/HLSM2WeqLb
— ANI (@ANI) February 7, 2019












Click it and Unblock the Notifications