ಸದನದಲ್ಲಿ ಎಸಿಬಿ ರಚನೆ ಚರ್ಚೆ, ಸಚಿವ ರಮಾನಾಥ ರೈ ನಿದ್ದೆ
ಬೆಂಗಳೂರು, ಮಾರ್ಚ್ 21 : ಬಜೆಟ್ ಅಧಿವೇಶನದ ಮೊದಲ ದಿನದ ಕಲಾಪ ಆರಂಭವಾಗಿದ್ದು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಮಾಡಿರುವ ಸರ್ಕಾರದ ಕ್ರಮದ ವಿರುದ್ಧ ಪ್ರತಿಪಕ್ಷ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಎಸಿಬಿ ರಚನೆ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದೆ.
ಸೋಮವಾರ
ಬೆಳಗ್ಗೆ
11
ಗಂಟೆಗೆ
ಅಧಿವೇಶನ
ಆರಂಭವಾಗುತ್ತಿದ್ದಂತೆ
ಅಗಲಿದ
ಗಣ್ಯರಿಗೆ
ಸಂತಾಪ
ಸೂಚಿಸಲಾಯಿತು.
ಬಳಿಕ
ಎಸಿಬಿ
ರಚನೆ
ಬಗ್ಗೆ
ಚರ್ಚೆ
ನಡೆಸಲು
ಅವಕಾಶ
ನೀಡಬೇಕು
ಎಂದು
ಪ್ರತಿಪಕ್ಷ
ಬಿಜೆಪಿ
ಸ್ಪೀಕರ್
ಕಾಗೋಡು
ತಿಮ್ಮಪ್ಪ
ಅವರಿಗೆ
ಮನವಿ
ಮಾಡಿತು.
[ಸಿದ್ದರಾಮಯ್ಯ
ಬಜೆಟ್:
ಯಾವುದು
ಏರಿಕೆ?
ಯಾವುದು
ಇಳಿಕೆ?]
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಮಾತನಾಡಿ, 'ಎಸಿಬಿ ರಚನೆ ಕುರಿತು ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ. ಎಸಿಬಿ ರಚನೆ ಮಾಡಿರುವುದು ಸರ್ಕಾರವಲ್ಲ ಕರಪ್ಷನ್ ಪ್ರೊಡಕ್ಷನ್ ಬ್ಯೂರೋ ಎಂದು ಆರೋಪಿಸಿದರು. [ಎಸಿಬಿ ರಚನೆ : ಕೃಷ್ಣ ಕೊಟ್ಟ ಸಲಹೆ ಕೇಳ್ತಾರಾ ಸಿದ್ದು?]
ನಿದ್ದೆಗೆ ಜಾರಿದ ರೈ : ಎಸಿಬಿ ರಚನೆ ಬಗ್ಗೆ ಸದನದಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದ್ದರೆ ಅರಣ್ಯ ಸಚಿವ ರಮಾನಾಥ ರೈ ಅವರು ನಿದ್ರೆಗೆ ಜಾರಿದ್ದಾರೆ. [ಸಂದರ್ಶನ : ಲೋಕಾಯುಕ್ತದ ಅಧಿಕಾರ ಮೊಟಕುಗೊಳ್ಳುವುದಿಲ್ಲ]
ಸ್ಪಷ್ಟನೆ ನೀಡಿದ ಜಯಚಂದ್ರ : 'ಲೋಕಾಯುಕ್ತ ಪೊಲೀಸರಿಗಿದ್ದ ಅಧಿಕಾರವನ್ನು ಸರ್ಕಾರ ಕಸಿದಿಲ್ಲ, ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವಂತೆ ಮಾಡಿದೆ' ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸದನದಲ್ಲಿ ಸ್ಪಷ್ಟನೆ ನೀಡಿದ್ದಾರೆ. 'ಕಾನೂನು ಸಚಿವರಿಗೆ ಕಾನೂನಿನ ಅರಿವಿಲ್ಲ' ಎಂದು ಬಿಜೆಪಿ ಸದಸ್ಯ ಬಸವರಾಜ್ ಬೊಮ್ಮಾಯಿ ಹೇಳಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಇಂದಿನಿಂದ ಎಸಿಬಿ ಕಾರ್ಯಾರಂಭ : ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇಂದಿನಿಂದ ಕಾರ್ಯಾರಂಭ ಮಾಡಿದೆ. ಎಸಿಬಿಯ ಎಡಿಜಿಪಿಯಾಗಿ ಗಗನ್ ದೀಪ್ ಮತ್ತು ಐಜಿಪಿಯಾಗಿ ಎಂ.ಎ.ಸಲೀಂ ಅಧಿಕಾರವಹಿಸಿಕೊಂಡಿದ್ದಾರೆ. ಖನಿಜಭವನದಲ್ಲಿ ಎಸಿಬಿ ಕಚೇರಿ ತೆರೆಯುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂದು ನಡೆಯುವ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.