Karnataka Budget 2023 Key Highlights: ಸಿದ್ದರಾಮಯ್ಯ ಮಂಡಿಸಿದ 14ನೇ ಬಜೆಟ್ನ ಮುಖ್ಯಾಂಶಗಳು
ಬೆಂಗಳೂರು, ಜುಲೈ 07: ಸಿಎಂ ಸಿದ್ದರಾಮಯ್ಯ ಅವರು ಇಂದು 3 ಗಂಟೆಗಳ ಸುದೀರ್ಘ ಐತಿಹಾಸಿಕ ಬಜೆಟ್ ಮಂಡಿಸಿದರು. ಮುಖ್ಯಾಂಶಗಳೆಂದರೆ, ಆಸ್ಪತ್ರೆಗಳ ಉನ್ನತೀಕರಣ, ಡಯಾಲಿಸಿಸ್ ವ್ಯವಸ್ಥೆಗೆ ಒತ್ತು, ಹಠಾತ್ ಸಾವು ತಡೆಗೆ ಅಪ್ಪು ಹೆಸರಲ್ಲಿ ಯಂತ್ರ ಅಳವಡಿಕೆಗೆ ಸರ್ಕಾರ ನಿರ್ಧರಿಸಿದೆ. ಯುವಕರಿಗೆ ಬೆನ್ನೆಲುಭಾಗಿ 'ಯುವನಿಧಿ' ಜಾರಿ, ಹಸಿವು ಮುಕ್ತ ರಾಜ್ಯಕ್ಕಾಗಿ 'ಅನ್ನಭಾಗ್ಯ' ಜಾರಿಗೊಳಿಸುತ್ತಿದೆ. ಕೃಷಿ ಉತ್ಪನ್ನಗಳ ಸಂಸ್ಕರಣೆ, ರೈತರ ಸಾಲ ಮೀತಿ ಏರಿಕೆ ಮಾಡಿದೆ. ನಮ್ಮ ಮೆಟ್ರೋಗೆ ಯೋಜನೆ ಜತೆ 'ಬ್ರಾಂಡ್ ಬೆಂಗಳೂರು' ಉಪಕ್ರಮವನ್ನು ಸರ್ಕಾರ ಉತ್ತೇಜಿಸಿತ್ತಿದೆ. 5 ಗ್ಯಾರಂಟಿಗಳಿಗೆ ಭರಪೂರ ಹಣ ಒದಗಿಸಲಿದೆ. ಇವುಗಳ ನಿರ್ವಹಣೆಗೆ ಅಬಕಾರಿ, ಕಂದಾಯ, ನೋಂದಣಿ ಮುದ್ರಾಂಕ, ವಾಣಿಜ್ಯ ತೆರಿಗೆ ಹೆಚ್ಚಿಸಲು ಸರ್ಕಾರ ಆಸಕ್ತಿ ತೋರಿದೆ.
ಕರ್ನಾಟಕ ರಾಜ್ಯ ಬಜೆಟ್ 2023-24ರ ಪ್ರಮುಖಾಂಶಗಳು
- 1. ಪಂಚ ಗ್ಯಾರಂಟಿಗೆ ವಾರ್ಷಿಕ 52ಸಾವಿರ ಕೋಟಿ ತಗುಲಲಿದ್ದು, 1.3ಕೋಟಿ ಜನರಿಗೆ ಉಪಯೋಗವಾಗಲಿದೆ. ಮಾಸಿಕ 4-5ಸಾವಿರ ಕೋಟಿ ಇದಕ್ಕಾಗಿ ಮೀಸಲಿಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
- 2. ಅಬಕಾರಿ ಸುಂಕವನ್ನು ಬಜೆಟ್ ನಲ್ಲಿ ಶೇ. 20 ರಷ್ಟು ಹೆಚ್ಚಿಸಲಾಗಿದೆ, ಬಿಯರ್ ಮೇಲಿನ ಸುಂಕವನ್ನು ಶೇಕಡಾ 175 ರಿಂದ ಶೇ.185 ರಷ್ಟು ಗೆ ಏರಿಸಲಾಗಿದೆ.
- 3. ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ಕನಸಾದ 'ಬ್ರಾಂಡ್ ಬೆಂಗಳೂರು' ಉಪಕ್ರಮ ಅನುಷ್ಠಾನಕ್ಕಾಗಿ ಒಟ್ಟು 45 ಸಾವಿರ ಕೋಟಿ ರೂಪಾಯಿ ಒದಗಿಸಲಾಗಿದೆ. ನಮ್ಮ ಮೆಟ್ರೋ ಯೋಜನೆಗಳಿಗೆ ಒಟ್ಟು 30 ಸಾವಿರ ಕೋಟಿ ಹಣ ನೀಡಲು ಸರ್ಕಾರ ನಿರ್ಧರಿಸಿದೆ.
- 4. ಎಸ್ಸಿ, ಎಸ್ಟಿ ವರ್ಗದ ವಿದ್ಯಾರ್ಥಿಗಳು, ಬಿಸಿಯೂಟ ಯೋಜನೆ ಮುಂದುವರಿಕೆಯ ಭಾಗವಾಗಿ ಒಟ್ಟಾರೆ ಶಿಕ್ಷಣ ವಲಯಕ್ಕೆ ಕಾಂಗ್ರೆಸ್ ಸರ್ಕಾರ 37,587 ಕೋಟಿ ರೂಪಾಯಿ ಮೀಸಲಿಟ್ಟಿದೆ.
- 5. ಕೃಷಿಗೆ ಪೂರಕವಾದ ಯೋಜನೆಗಳಿಗೆ ವೇಗ ನೀಡಲು ಪ್ರಸಕ್ತ ಸಾಲಿನಲ್ಲಿ ಸರ್ಕಾರ 19,044 ನೀಡಲಿದೆ. ಇದರಲ್ಲಿ 940 ಕೋಟಿ ರೂ. ಬಾಕಿ ಮೊತ್ತದ 10 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸಲಿದೆ.
- 6. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 172 ಯೋಜನೆ ರೂಪಿಸಲಾಗಿದೆ. ಅದರಡಿ 19 ಹಾಗೂ ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳ 899 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
- 7. ಕೇಂದ್ರ ಸರ್ಕಾರ 2023-24ನೇ ಸಾಲಿನ ಆಯವ್ಯಯದಲ್ಲಿ ಭದ್ರಾ ಯೋಜನೆಗೆ 5,300 ಕೋಟಿ ರೂ. ಅನುದಾನ ಘೋಷಿಸಿದೆ. ಆ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಲಿದೆ.
- 8. ಕಂದಾಯ ಇಲಾಖೆಗೆ ಒಟ್ಟು 16,167 ಕೋಟಿ ರೂ. ಮೀಸಲಿಟ್ಟಿರುವ ರಾಜ್ಯ ಸರ್ಕಾರವು ಈ ವಿಭಾಗದಿಂದ ಹೆಚ್ಚು ತರಿಗೆ ಸಂಗ್ರಹಕ್ಕೆ ಮುಂದಾಗಿದೆ.
- 9. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವೆಚ್ಚ ಸರ್ಕಾರ ಭರಿಸಲಿದೆ, ಹೀಗಿದ್ದರೂ ಒಳಾಡಳಿತ ಮತ್ತು ಸಾರಿಗೆ 16,638 ಕೋಟಿ ಒಗಿದಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
- 10. ಅನ್ನಭಾಗ್ಯ ಯೋಜನೆಗೆ ಸುಮಾರು 10,000 ಕೋಟಿ ರೂ. ವೆಚ್ಚವಾಗಲಿದೆ. 4.42 ಕೋಟಿ ಬಿಪಿಎಲ್ ಫಲಾನುಭವಿಗಳು ಇದರ ಲಾಭ ಪಡೆಯಲಿದ್ದಾರೆ. ಕೇಂದ್ರ ಸರ್ಕಾರ ಗುರುತಿಸದ ಪಡಿತರಿಗೂ ಸರ್ಕಾರ ತಲಾ 10 ಕೇಜಿ ಅಕ್ಕಿ ನೀಡಲಿದೆ.
- 11. ರಾಜ್ಯದ GSDP ಬೆಳವಣಿಗೆ ದರವನ್ನು ಶೇ. 13 ರಿಂದ ಶೇ.17ಕ್ಕೆ ಹೆಚ್ಚಿಸುವ ಮೂಲಕ ರಾಜ್ಯವನ್ನು 1 ಟ್ರಿಲಿಯನ್ ಡಾಲರ್ ಎಕಾನಮಿಯಾಗಿ ಏರಿಸುವ ಗುರಿ ಕಾಂಗ್ರೆಸ್ ಸರ್ಕಾರ ಹೊಂದಿದೆ.
- 12. ಸಹಕಾರ ಮತ್ತು ರೇಷ್ಮೆ ವಲಯಕ್ಕೆ ಬಂದರೆ, 30 ಲಕ್ಷಕ್ಕೂ ಹೆಚ್ಚು ರೈತರಿಗೆ 25,000 ಕೋಟಿ ರೂ. ಸಾಲ ವಿತರಣೆ ಗುರಿ ಇಟ್ಟುಕೊಳ್ಳಲಾಗಿದೆ.
- 13. ರೈತರಿಗೆ ನೀಡಲಾಗುವ ಮಧ್ಯಮ ಮತ್ತು ದೀರ್ಘಾವಧಿ ಸಾಲ ಮೀತಿ ಹೆಚ್ಚಿಸಲಾಗಿದೆ. ಒಟ್ಟಾರೆ ಕೃಷಿಗೆ 5,860 ಕೋಟಿ ರೂ. ಅನುದಾನ ನಿಗದಿ ಮಾಡಲಾಗಿದೆ. ಜೊತೆಗೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಕ್ರಮ ಕೈಗೊಳ್ಳಲಾಗಿದೆ.
- 14. ಆರೋಗ್ಯ ಇಲಾಖೆಗೆ ಒತ್ತು ನೀಡಿರುವ ಸರ್ಕಾರ ಕೆಲವು ಆಸ್ಪತ್ರೆಗಳನ್ನು ಉನ್ನತೀಕರಿಸಲಿದೆ. ದಿ.ಡಾ.ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಹಠಾತ್ ನಿಧನ ತಡೆಗೆ ಜಿಲ್ಲಾ ವ್ಯಾಪ್ತಿಯಲ್ಲಿ AED ಚಿಕಿತ್ಸಾ ಯಂತ್ರ ಅಳವಡಿಸುತ್ತಿದೆ. ಆರೋಗ್ಯ ಇಲಾಖೆಗೆ 14,950 ಕೋಟಿ ನಿಗದಿ ಮಾಡಿದೆ.
- 15. ಇನ್ನೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24,166 ಕೋಟಿ ರೂ, ಇಂಧನ ಇಲಾಖೆಗೆ 22,773 ಕೋಟಿ ರೂಪಾಯಿ, ಗ್ರಾಮೀಣಾಭಿವೃದ್ಧಿ ಇಲಾಖೆ 18,038 ಕೋಟಿ ರೂ, ಲೋಕೋಪಯೋಗಿ ಇಲಾಖೆ 10,143 ಕೋಟಿ ರೂ. ಹಾಗೂ ಪಶುಸಂಗೋಪನೆ ಮತ್ತು ಮೀನುಗಾರಿಕೆ ವಲಯಕ್ಕೆ 3,024 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ.

ಮಾಸಿಕ 2000 ರೂ. ಆಗಸ್ಟ್ 15ಕ್ಕೆ ಜಮೆ
ರಾಜ್ಯ ಆರ್ಥಿಕ ದಿವಾಳಿಯಾಗದಂತೆ ಮಾಡಿದ್ದೇವೆ: ಸಿಎಂ
ಸಿಎಂ ಸುದ್ದಿಗೋಷ್ಠಿ ಆರಂಭ
ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ
ಸದನಕ್ಕೆ ಅನಾಮಧೇಯ ವ್ಯಕ್ತಿ ಎಂಟ್ರಿ
ಬಜೆಟ್ ಅಂತ್ಯ: 4 ಗಂಟೆಗೆ ಸಿಎಂ ಸುದ್ದಿಗೋಷ್ಠಿ
ಸಿದ್ದರಾಮಯ್ಯನವರ ಐತಿಹಾಸಿಕ ಬಜೆಟ್ ಮಂಡನೆ ಅಂತ್ಯ
ಎಟಿಎಂ ಸರ್ಕಾರದ ಕಲೆಕ್ಷನ್ ಬಜೆಟ್: ಸಾಲ-ತೆರಿಗೆ ಬರೆ: ಬಿಜೆಪಿ
#ATMSarkara ದ ಕಲೆಕ್ಷನ್ ಬಜೆಟ್!
— BJP Karnataka (@BJP4Karnataka) July 7, 2023
ರಾಜ್ಯದಲ್ಲಿ @siddaramaiah ರವರು ಮಂಡಿಸಿರುವ 2023-24ರ ಸಾಲಿನ ಬಜೆಟ್ನಿಂದ ಸಿಕ್ಕಿರುವುದು ಎರಡೇ, “ಸಾಲದ ಹೊರೆ - ತೆರಿಗೆಯ ಬರೆ”
🅰️ ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನದ ಹೆಸರಿನಲ್ಲಿ ಕರ್ನಾಟಕಕ್ಕೆ ಅನಿಯಮಿತ ಸಾಲದ ಹೊರೆ.
🅱️ ಗ್ಯಾರಂಟಿಗಳನ್ನು ನಂಬಿ ಮೋಸ ಹೋದ ಕನ್ನಡಿಗರಿಗೆ ತೆರಿಗೆಯ ಬರೆ. pic.twitter.com/HBklSLF9sl
ಈ ವಲಯಕ್ಕೆ ತೆರಿಗೆ ಹೆಚ್ಚಳದ ಬರೆ?
ಕೇಂದ್ರ ಗುರುತಿಸದ ಪಡಿತರಿಗೂ 'ಅನ್ನಭಾಗ್ಯ' ವಿಸ್ತರಣೆ

ಸುಧೀರ್ಘ ಬಜೆಟ್ನಲ್ಲಿ 5 ಗ್ಯಾರಂಟಿಗಳಿಗೆ ಸಿಕ್ಕಿದ್ದೆಷ್ಟು?

ವಿವಿಧ ಇಲಾಖೆಗಳಿಗೆ ಸಿಕ್ಕ ಅನುದಾನವೆಷ್ಟು?

ಮನೆಬಾಗಿಲಿಗೆ ಔಷಧ: 8 ಜಿಲ್ಲೆಗಳಲ್ಲಿ ಜಾರಿ
"ಆರೋಗ್ಯವೇ ಭಾಗ್ಯ"
— CM of Karnataka (@CMofKarnataka) July 7, 2023
• ಕ್ಷಯ ರೋಗ ಪತ್ತೆಗೆ ಕೈಚಾಲಿತ-ಕ್ಷ-ಕಿರಣ (Hand Held X-Ray) ಉಪಕರಣ ಒದಗಿಸಲು 3 ಕೋಟಿ ರೂ. ಅನುದಾನ.
• ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ, ಮನೆಬಾಗಿಲಿಗೆ ಔಷಧ ವಿತರಣೆ-ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಜಾರಿ.
• ಆಶಾಕಿರಣ ಕಾರ್ಯಕ್ರಮದಡಿ ರಾಜ್ಯದ 4 ಜಿಲ್ಲೆಗಳಲ್ಲಿ ನೇತ್ರ ಚಿಕಿತ್ಸೆ-21 ಕೋಟಿ ರೂ. ಅನುದಾನ.… pic.twitter.com/TrCmeUyIUL
ವಿದ್ಯಾರ್ಥಿ ವೇತನ ಮರು ಜಾರಿ: ಸರ್ಕಾರ

ರಾಜ್ಯದ GSDP ಶೇ.17ಕ್ಕೆ ಹೆಚ್ಚಿಸಲು ಗುರಿ
ಐದನೇ ಗ್ಯಾರಂಟಿ ಯುವನಿಧಿ ಜಾರಿ: ಸರ್ಕಾರ

Karnataka Budget 2023:ಹಸಿವು ಮುಕ್ತಕ್ಕೆ ಸರ್ಕಾರ ಪಣ
"ಅನ್ನ ಭಾಗ್ಯ"
— CM of Karnataka (@CMofKarnataka) July 7, 2023
•ಹಸಿವು ಮುಕ್ತ ಕರ್ನಾಟಕಕ್ಕೆ ಸರ್ಕಾರದ ಪಣ
•ಎಲ್ಲಾ ಅರ್ಹ ಫಲಾನುಭವಿಗಳಿಗೆ 5 ಕೆ.ಜಿ ಹೆಚ್ಚುವರಿಯಾಗಿ ಅಕ್ಕಿ ವಿತರಣೆ
•ಆಹಾರಧಾನ್ಯ ಲಭ್ಯವಾಗುವ ವರೆಗೆ ಪ್ರತಿ ಫಲಾನುಭವಿಗೆ 170 ರೂ. ನಂತೆ ಡಿಬಿಟಿ ಮೂಲಕ ನಗದು ವರ್ಗಾವಣೆ
•ಅಂದಾಜು 4.42 ಕೋಟಿ ಫಲಾನುಭವಿಗಳಿಗೆ ಅನುಕೂಲ
•ಈ ಯೋಜನೆಗೆ 10,275 ಕೋಟಿ ರೂ. ಅನುದಾನ… pic.twitter.com/MEyHSR1RJv
ಸಹಕಾರ ಮತ್ತು ರೇಷ್ಮೆ ವಲಯಕ್ಕೆ ಸಿಕ್ಕಿದ್ದೇನು?
ಸಹಕಾರ ಮತ್ತು ರೇಷ್ಮೆ:
— CM of Karnataka (@CMofKarnataka) July 7, 2023
•30 ಲಕ್ಷಕ್ಕೂ ಹೆಚ್ಚು ರೈತರಿಗೆ 25,000 ಕೋಟಿ ರೂ. ಸಾಲ ವಿತರಣೆ ಗುರಿ
•ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಕ್ರಮ
•ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ರೈತರಿಗೆ ಸರಕು ಸಾಗಾಣಿಕೆಗೆ ಪಿಕ್ಅಪ್ ವ್ಯಾನ್ ಖರೀದಿಗೆ ಶೇ.4 ರ ಬಡ್ಡಿ ದರದಲ್ಲಿ 7 ಲಕ್ಷ ರೂ. ವರೆಗಿನ ಸಾಲ ಸೌಲಭ್ಯ.
•ರಾಜ್ಯದ ಆಯ್ದ 50… pic.twitter.com/ezKqrrcxOV
ಸರ್ಕಾರದಿಂದ ಶಿಕ್ಷಣಕ್ಕೆ ಆದ್ಯತೆ: ಟ್ವೀಟ್
ಶಿಕ್ಷಣಕ್ಕೆ ಆದ್ಯತೆ:
— CM of Karnataka (@CMofKarnataka) July 7, 2023
•ಸಮಾಜದ ಸ್ವಾಸ್ಥ್ಯ ಕಾಪಾಡುವ ಆಶಯದಿಂದ ಪಠ್ಯಪುಸ್ತಕ ಮರುಪರಿಷ್ಕರಣೆಗೆ ಕ್ರಮ.
* ಸ್ಥಳೀಯವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವಾಸ್ತವಿಕತೆಯನ್ನು ಆಧರಿಸಿ ಹೊಸ ಶಿಕ್ಷಣ ನೀತಿ ರೂಪಿಸಲು ಕ್ರಮ.
•1 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನ ನೀಡುವ ಪೂರಕ ಪೌಷ್ಟಿಕ ಆಹಾರ; 60 ಲಕ್ಷ… pic.twitter.com/6xuNWbI7Cf
12 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಭಿವೃದ್ಧಿ
ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಫಂಡ್

ಬುಡಕಟ್ಟು ಪಂಗಡಗಳ ಪೌಷ್ಠಿಕತೆಗೆ ಒತ್ತು

ಸೆಸ್ ಸಂಗ್ರಹ: ಕೇಂದ್ರದ ನಡೆ ವಿರುದ್ಧ ರಾಜ್ಯ ಖಂಡನೆ

ಅಪ್ಪು ಸ್ಮರಣಾರ್ಥ ಆಸ್ಪತ್ರೆಗಳಲ್ಲಿ AED ವ್ಯವಸ್ಥೆ

ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮ
ರೈತರ ಆದಾಯ ಹೆಚ್ಚಳಕ್ಕೆ ಸರ್ಕಾರ ಕ್ರಮ

ನೀರಿನ ಸಮಸ್ಯೆ ಪರಿಹಾರಕ್ಕೆ ಕೆರೆ ತುಂಬಿಸುವ ಯೋಜನೆ

1,62,000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ:ಸಿಎಂ
ಶಾಲಾ ಕಾಲೇಜುಗಳಿಗೆ ಹೊಸ ಶೌಚಾಲಯ

ಇಂದಿರಾ ಕ್ಯಾಂಟಿನ್ಗೆ ವಿಶೇಷ ಆದ್ಯತೆ













Click it and Unblock the Notifications