ಸಿದ್ದರಾಮಯ್ಯ ಸರ್ಕಾರ ಮಾಡಿದ ಸಾಧನೆಗಳ ಪಟ್ಟಿ!
ಬೆಂಗಳೂರು, ನವೆಂಬರ್ 23: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಆರು ತಿಂಗಳನ್ನ ಪೂರೈಸಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಕೇವಲ ಆರೇ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಮಾಡಿದ ಸಾಧನೆಗಳ ಪಟ್ಟಿಯನ್ನ ರಾಜ್ಯ ಬಿಜೆಪಿ ಬಿಡುಗಡೆ ಮಾಡಿದೆ.
ಸಿದ್ದರಾಮಯ್ಯ ಸರ್ಕಾರ ಮಾಡಿದ ಸಾಧನೆಗಳ ಪಟ್ಟಿ!
▪️ಬರಗಾಲ ನಿರ್ವಹಣೆ ವೈಫಲ್ಯ
▪️ಕಲುಷಿತ ನೀರಿನಿಂದ ಅಪಾರ ಸಾವು-ನೋವು
▪️ರೈತರ ಸರಣಿ ಆತ್ಮಹತ್ಯೆ
▪️ಶ್ಯಾಡೋ ಸಿಎಂ ಪ್ರಭಾವ
▪️ವರ್ಗಾವಣೆ ದಂಧೆ
▪️ಗುತ್ತಿಗೆದಾರರಿಂದ ಕಲೆಕ್ಷನ್
▪️₹100 ಕೋಟಿ ಅಕ್ರಮ ಹಣ ಮಂಚದಡಿ ಪತ್ತೆ
▪️ಹಿಂದೂಗಳ ಮೇಲೆ ಹಲ್ಲೆ -ಹತ್ಯೆ
▪️ಪಂಚ ರಾಜ್ಯ ಚುನಾವಣೆಗೆ ಹಣ ಸಾಗಾಟ
▪️ಕಾಸಿಗಾಗಿ ಪೋಸ್ಟಿಂಗ್
▪️ಅಕ್ರಮ ನೇಮಕಾತಿ ಪರೀಕ್ಷೆ
▪️ಶಾಸಕರಿಗಿಲ್ಲ ಅನುದಾನ
▪️ಕುರ್ಚಿಗಾಗಿ ಕಾದಾಟ
▪️ಸಿಎಂ ಡಿನ್ನರ್, ಬ್ರೇಕ್ಫಾಸ್ಟ್ ಪಾರ್ಟಿ
▪️ಕಳ್ಳತನದಿಂದ ಕಾವೇರಿ ಪೂರೈಕೆ
▪️ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಅಧಿಕಾರ

ಆರು ತಿಂಗಳಿಗೆ ಇಷ್ಟೆಲ್ಲಾ ಹಳವಂಡಗಳಾದರೆ, ಒಂದು ವರ್ಷಕ್ಕೆ ಕರ್ನಾಟಕದ ಪರಿಸ್ಥಿತಿ ಹೇಗಿರಬೇಡ ಯೋಚಿಸಿ..! ನಾನೇ ಮುಂದಿನ ಸಿಎಂ, ನಮ್ಮವರೇ ಮುಂದಿನ ಸಿಎಂ ಎಂದು ಕಾಂಗ್ರೆಸ್ ಸರ್ಕಾರದಲ್ಲಿ ದಿನಕ್ಕೊಬ್ಬರು ಹೇಳಿಕೆ ಕೊಡುತ್ತಿದ್ದಾರೆ. ಸಾಂವಿಧಾನಿಕ ಸ್ಥಾನದಲ್ಲಿ ಕೂತ ಮಹನೀಯರು ಆ ಸ್ಥಾನದ ಘನತೆಯನ್ನೂ ಮರೆತು ಕಲೆಕ್ಷನ್ ಮಾಸ್ಟರ್ ಆಗಿರುವ ಕಾರಣ ಚೀಫ್ ಮಿನಿಸ್ಟರ್ ಎಂಬ ಸಿಎಂ ಕುರ್ಚಿ ಖಾಲಿ ಇದೆ ಎಂದು ಬಿಜೆಪಿ ಹೇಳಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಕುರ್ಚಿಯ ದಂಗಲ್ ದಿನೇ ದಿನೇ ಜಾಸ್ತಿಯಾಗುತ್ತಿದೆ. ಸಿಎಂ ಕುರ್ಚಿಯ ಸಲುವಾಗಿ #CongressVsCongress ಫೈಟ್ ಜೋರಾಗಿದ್ದು, ಸಚಿವರುಗಳು ಹಾದಿ ಬೀದಿಯಲ್ಲಿ ಕಿತ್ತಾಡುತ್ತಿದ್ದು ರಾಜ್ಯದ ಆಡಳಿತ ಮಾತ್ರ ಮೂರಾಬಟ್ಟೆಯಾಗಿದೆ. ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಪಕ್ಷದಲ್ಲಿ ದಿನಕ್ಕೊಬ್ಬ ಸಿಎಂ ಕ್ಯಾಂಡಿಡೇಟ್ ಹುಟ್ಟಿಕೊಳ್ಳುತ್ತಿರುವುದನ್ನು ನೋಡಿದರೆ, ನಿಮ್ಮ ಆಡಳಿತ ಅದ್ಯಾವ ಪರಿ ಹದಗೆಟ್ಟಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ರಾಜ್ಯ ಬಿಜೆಪಿ ಕುಟುಕಿದೆ.












Click it and Unblock the Notifications