ಶುಕ್ರವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟೆಂಬರ್ 08 : ರಾಜ್ಯದ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಸೆಪ್ಟೆಂಬರ್ 9ರ ಶುಕ್ರವಾರ ರಜೆ ಘೋಷಣೆ ಮಾಡಲಾಗಿದೆ. 'ಜನರು ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ
ವಿಧಾನಸೌಧದಲ್ಲಿ ಗುರುವಾರ ಸಂಜೆ ಮಾತನಾಡಿದ ಸಿದ್ದರಾಮಯ್ಯ ಅವರು, 'ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸರ್ಕಾರಿ ಕಚೇರಿಗಳಲ್ಲೂ ಶುಕ್ರವಾರ ಅಟೆಂಡೆನ್ಸ್ ಇರುವುದಿಲ್ಲ' ಎಂದು ಹೇಳಿದರು.[ಕಾವೇರಿಗಾಗಿ ಕಾವೇರಿದ ಕರ್ನಾಟಕ, ಬಂದ್ ದಿನ ಏನೆಲ್ಲ ಬಂದ್?]
'ಕರ್ನಾಟಕ
ಬಂದ್
ಸಂದರ್ಭದಲ್ಲಿ
ಕಾನೂನು
ಮತ್ತು
ಸುವ್ಯವಸ್ಥೆ
ಕಾಪಾಡಲು
ಅಗತ್ಯ
ವ್ಯವಸ್ಥೆಗಳನ್ನು
ಮಾಡಿಕೊಳ್ಳಲಾಗಿದೆ.
ಹೊರರಾಜ್ಯಗಳಿಂದಲೂ
ಪೊಲೀಸ್
ಪಡೆಗಳನ್ನು
ಕರೆಸಿಕೊಳ್ಳಲಾಗುತ್ತಿದೆ.
ಬಂದ್
ಹೆಸರಿನಲ್ಲಿ
ಸಾರ್ವಜನಿಕ
ಆಸ್ತಿ-ಪಾಸ್ತಿಗಳಿಗೆ
ಹಾನಿ
ಮಾಡಬಾರದು'
ಎಂದು
ಸಿದ್ದರಾಮಯ್ಯ
ಮನವಿ
ಮಾಡಿದರು.[ಟೆಕ್ಕಿಗಳ
ವೀಕೆಂಡ್
ರಜಾ
ಹಾಳು
ಮಾಡಿದ
ಕರ್ನಾಟಕ
ಬಂದ್!]
ಬಂದ್ ವೇಳೆ ಸಾರ್ವಜನಿಕರು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾಗಿ ವಿನಂತಿ. ನಮಗಾದ ಅನ್ಯಾಯಕ್ಕೆ ನಮ್ಮದೇ ಆಸ್ತಿಪಾಸ್ತಿಗಳ ಹಾನಿ ಬೇಡ. ಬಂದ್ ಶಾಂತಿಯುತವಾಗಿರಲಿ.
— CM of Karnataka (@CMofKarnataka) September 8, 2016
*
ಖಾಸಗಿ
ಶಾಳೆಗಳ
ಒಕ್ಕೂಟ
ಶುಕ್ರವಾರ
ರಜೆ
ಘೋಷಣೆ
ಮಾಡಿದೆ
*
ಸರ್ಕಾರಿ
ಬಸ್ಸುಗಳ
ಸಂಚಾರ
ಸ್ಥಗಿತಗೊಳ್ಳುವ
ಸಾಧ್ಯತೆ
ಇದೆ
*
ಹೋಟೆಲ್,
ಪೆಟ್ರೋಲ್
ಬಂಕ್ಗಳು
ಬಂದ್
ಆಗಲಿವೆ
*
ಟ್ಯಾಕ್ಸಿ,
ಆಟೋಗಳ
ಸಂಚಾರವೂ
ಸ್ಥಗಿತಗೊಳ್ಳಲಿದೆ