ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ಕಲಾಪಕ್ಕೆ ಚಾಲನೆ

|
Google Oneindia Kannada News

ಬೆಂಗಳೂರು, ಮೇ 19: ಬಹುಮತ ಯಾಚನೆ ನಡೆಯಲಿರುವ ಮಧ್ಯಾಹ್ನದ ಕಲಾಪ ಆರಂಭವಾಗಿದೆ.

ಬೆಳಗಿನ ಅವಧಿ ಬಳಿಕ ಮಧ್ಯಾಹ್ನ 3.30ಕ್ಕೆ ಕಲಾಪವನ್ನು ಮುಂದೂಡಲಾಗಿತ್ತು. ನಿಗದಿತ ಅವಧಿಗೆ ಆರಂಭವಾದ ಕಲಾಪದಲ್ಲಿ ಬಾಕಿ ಉಳಿದ 1 1 ಶಾಸಕರು ಪ್ರತಿಜ್ಞಾವಿಧಿ ಸ್ವೀಕರಿಸುವ ಕಾರ್ಯ ನಡೆಯಿತು.

ಕರ್ನಾಟಕ ವಿಶ್ವಾಸಮತ LIVE: ಮತ್ತೆ ಕಲಾಪ ಆರಂಭಕರ್ನಾಟಕ ವಿಶ್ವಾಸಮತ LIVE: ಮತ್ತೆ ಕಲಾಪ ಆರಂಭ

ಬೆಳಗಿನ ಅವಧಿಯಲ್ಲಿ 210 ಶಾಸಕರು ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಬೆಳಿಗ್ಗೆ ಪ್ರಮಾಣವಚನ ಸ್ವೀಕಾರ ಮಾಡಬೇಕಿದ್ದ ಕಾಂಗ್ರೆಸ್ ಶಾಸಕರಾರ ಪ್ರತಾಪ್ ಗೌಡ ಪಾಟೀಲ ಮತ್ತು ಆನಂದ್‌ ಸಿಂಗ್ ಗೈರುಹಾಜರಾಗಿದ್ದರು. ಮಧ್ಯಾಹ್ನದ ಕಲಾಪದ ವೇಳೆಗೆ ಇಬ್ಬರೂ ವಿಧಾನಸಭೆ ತಲುಪಿದ್ದರಿಂದ ಅವರ ಹೆಸರನ್ನು ಮತ್ತೆ ಕರೆದು ಪ್ರತಿಜ್ಞಾವಿಧಿ ಬೋಧಿಸಲಾಯಿತು.

Karnataka assembly floor test 2018 afternoon assembly session begins

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಶಾಸಕರ ಪ್ರತಿಜ್ಞಾವಿಧಿ ಸ್ವೀಕಾರ ಬೆಳಗಿನ ಅವಧಿಯಲ್ಲಿ ಬಾಕಿ ಉಳಿದಿತ್ತು. ಜಿ.ಟಿ. ದೇವೇಗೌಡ, ಸೋಮಶೇಖರ ರೆಡ್ಡಿ, ಎನ್. ಮಹೇಶ್, ಆರ್. ನರೇಂದ್ರ, ಸಿ.ಎಸ್. ನಿರಂಜನಕುಮಾರ್ ಸೇರಿದಂತೆ ಉಳಿದ ಶಾಸಕರು ಪ್ರಮಾಣವಚನ ಸ್ವೀಕರಿಸಿದರು.

English summary
Karnataka assembly floor test 2018: Karnataka assembly afternoon session begins at 3.30 PM. Some othe newly elected MLAs took oath. Floor test will be conducted soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X