ಕರ್ನಾಟಕ ಪಿಯುಸಿ ಫಲಿತಾಂಶ: ಇವರ ಫಲಿತಾಂಶ ಕಂಡು ಅಂಧತ್ವವೂ ನಾಚಿತು!
ಕೆಲವೊಮ್ಮೆ ಸಾಧನೆಗೆ ಯಾವ ನ್ಯೂನತೆಗಳೂ ಅಡ್ಡಿಯಾಗುವುದಿಲ್ಲ, ಸಾಧಿಸಬೇಕೆಂಬ ಮನೋಬಲದೆದುರು ನ್ಯೂನತೆಗಳೇ ಸೋಲುತ್ತವೆ! ಅದಕ್ಕೆ ಉತ್ತಮ ಉದಾಹರಣೆ ಅಂಧತ್ವವನ್ನೂ ಮೆಟ್ಟಿನಿಂತು ಸಾಧನೆ ಮಾಡಿದ ಓಂಕಾರ ಪಾವಸ್ಕರ್ ಮತ್ತು ಕರೆಪ್ಪ ಬಾಳಪ್ಪ್ ಶಿಡ್ಲ್ಯಾಳ.
ಕಾರವಾರ, ಮೇ 12: ಕೆಲವೊಮ್ಮೆ ಸಾಧನೆಗೆ ಯಾವ ನ್ಯೂನತೆಗಳೂ ಅಡ್ಡಿಯಾಗುವುದಿಲ್ಲ, ಸಾಧಿಸಬೇಕೆಂಬ ಮನೋಬಲದೆದುರು ನ್ಯೂನತೆಗಳೇ ಸೋಲುತ್ತವೆ, ಅವು ಗೌಣ ಎನ್ನಿಸಿಬಿಡುತ್ತವೆ! ಅದಕ್ಕೆ ಉತ್ತಮ ಉದಾಹರಣೆ ಅಂಧತ್ವವನ್ನೂ ಮೆಟ್ಟಿನಿಂತು ಸಾಧನೆ ಮಾಡಿದ ಓಂಕಾರ ಪಾವಸ್ಕರ್.
ಕಾರವಾರದ ಪಿಯು ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಓಂಕಾರ್ ಪಾವಸ್ಕರ್ ಅಂಧತ್ವದಿಂದ ಬಳಲುತ್ತಿದ್ದರೂ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.94.33 ಅಂಕ ಗಳಿಸುವ ಮೂಲಕ ಮನೋಬಲದೆದುರು ಬೇರೆಲ್ಲ ಗೌಣ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಸಮಾಜಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಲ್ಲದೆ ಇತಿಹಾಸ -95, ಅರ್ಥಶಾಸ್ತ್ರ-94, ರಾಜ್ಯ ಶಾಸ್ತ್ರ-93, ಹಿಂದಿ-96, ಇಂಗ್ಲಿಷ್-88 ಅಂಕ ಪಡೆದಿರುವ ಇವರು ತಂದೆ-ತಾಯಿ, ಒಡಹುಟ್ಟಿದವರು ಮತ್ತು ಕಾಲೇಜಿಗೆ ಕೀರ್ತಿ ತಂದಿದ್ದಾರೆ.[ಕರ್ನಾಟಕ ಪಿಯುಸಿ ಫಲಿತಾಂಶ: ಮಂಗಳೂರಿನ ದರ್ಶನ್, ಪ್ರಣವ್ ಸಾಧನೆ]

ಯಾವ ನ್ಯೂನತೆಯೂ ಇಲ್ಲದವರೂ ಪಡೆಯಲಾಗದಷ್ಟು ಅಂಕಗಳಿಸಿ, ಮನೋಬಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.[ತಾಯಿಯೇ ನನಗೆ ಸ್ಫೂರ್ತಿ: ಪಿಯುಸಿ ಟಾಪರ್ ಸೃಜನಾ]
ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ ಅಂಧ ವಿದ್ಯಾರ್ಥಿ
ಓಂಕಾರ್ ಅವರಂತೆಯೇ ಬೆಳಗಾವಿಯ ಲಿಂಗರಾಜ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕರೆಪ್ಪ ಬಾಳಪ್ಪ್ ಶಿಡ್ಲ್ಯಾಳ ಕಲಾವಿಭಾಗದಲ್ಲಿ ಶೇ. 93.83 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.'[ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ: ಸೃಜನಾ, ರಾಧಿಕಾ, ಚೈತ್ರಾ ಟಾಪರ್ಸ್]

ದೃಷ್ಟಿಯಿಲ್ಲದ ಕಾರಣ ಕರೆಪ್ಪ ಅವರಿಗೆ ಓಡುವುದಕ್ಕೆ ಆಗುತ್ತಿರಲಿಲ್ಲ. ಪಠ್ಯವನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಸಿಕೊಂಡು ಪಠ್ಯವನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಕರೆಪ್ಪ ಯಾವ ನ್ಯೂನತೆಯೂ ಇಲ್ಲದ ಮಕ್ಕಳಿಗೂ ಸಾಧಿಸಲಾಗದ್ದನ್ನು ಸಾಧಿಸಿ ತೋರಿಸಿದ್ದಾರೆ. ಐಎಎಸ್ ಅಥವಾ ಕೆಎಎಸ್ ಮಾಡುವ ಮಹದಾಸೆ ಕರೆಪ್ಪ ಅವರದು.
-
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications