ಕನ್ನಡಿಗರ ಕೈಯಲ್ಲಿ ಕನ್ನಡ ಸುರಕ್ಷಿತವಾಗಿದೆಯಾ?
ಪ್ರ : ಕರ್ನಾಟಕದಲ್ಲಿ ಕನ್ನಡಿಗರ ಕೈಯಲ್ಲಿ ಕನ್ನಡ ಇಂದು ಸುರಕ್ಷಿತವಾಗಿದೆಯೆ?
ನಾ. ಗೌಡ : ಒಳ್ಳೆ ಪ್ರಶ್ನೆ ಕೇಳಿದ್ದೀರಿ. ಕನ್ನಡಿಗರು ಕನ್ನಡ ಬಳಸದೆ ಹೋದರೆ, ನಾವು ಇತರರಿಗೆ ಕನ್ನಡ ಬಳಸಿ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಕನ್ನಡ ಬಳಕೆ ನಾವು ಮಾಡೇ ತೀರ್ತೀವಿ, ಕನ್ನಡದ ಬಳಕೆ ಮಾಡದಿದ್ದರೆ ಇರಲು ಸಾಧ್ಯವೇ ಇಲ್ಲ ಎನ್ನುವ ವಾತಾರವಣ ಸೃಷ್ಟಿಯಾದರೆ, ಕನ್ನಡಿಗರೇ ಹೆಚ್ಚು ಕನ್ನಡ ಬಳಸಿದರೆ ಕನ್ನಡ ಖಂಡಿತ ಉದ್ಧಾರವಾಗುತ್ತದೆ. ಕನ್ನಡಕ್ಕೆ ಇಂದು ಕುತ್ತು ಬಂದಿದೆ ಎನ್ನುವುದಾಗರೆ, ಅದು ಹೊರಗಡೆಯವರಿಂದ ಎಷ್ಟು ಬಂದಿದೆಯೋ, ಅದಕ್ಕಿಂತ ಎರಡರಷ್ಟು ಕನ್ನಡಿಗರಿಂದಲೂ ಬಂದಿದೆ ಎಂದು ಹೇಳಲು ಇಷ್ಟಪಡುತ್ತೇನೆ.
ಸರಕಾರವೂ ಅಷ್ಟೇ ಕನ್ನಡ ಓದುವ ಬರೆಯುವ ಕನ್ನಡಿಗರಿಗೆ ಬದುಕನ್ನು ಕಟ್ಟಿಕೊಡುವಂಥ ಶಕ್ತಿ, ತಾಕತ್ತು ಸರಕಾರಕ್ಕೆ ಬಂದರೆ ಕನ್ನಡ ಉದ್ಧಾರವಾಗತ್ತೆ. ಸರಕಾರ ಇಂದು ಜಾತಿ ಆಧಾರದ ಮೇಲೆ ಮೀಸಲಾತಿ ಕೊಡುತ್ತಿದೆ. ಆದರೆ, ಕನ್ನಡದಲ್ಲಿ ಪರೀಕ್ಷೆ ಬರೆದು ಪಾಸಾದ ಮಕ್ಕಳಿಗೆ, ಕನ್ನಡವನ್ನು ಹೆಚ್ಚು ಪ್ರೀತಿಸುವ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗುತ್ತದೆ ಎನ್ನುವುದಾಗಿಬಿಟ್ಟರೆ ಬಹುಶಃ ಕರ್ನಾಟಕದಲ್ಲಿ ಕನ್ನಡಿಗರು ಇನ್ನಷ್ಟು ಬಲಿಷ್ಠರಾಗುತ್ತಾರೆ ಎನ್ನುವುದು ನನ್ನ ಅಭಿಪ್ರಾಯ.

ಪ್ರ : ಈ ನಿಟ್ಟಿನಲ್ಲಿ ಕರವೇ ಹೋರಾಟ ಯಾವ ದಿಕ್ಕಿನಲ್ಲಿ ಸಾಗಿದೆ, ಎಷ್ಟು ಯಶಸ್ಸು ಲಭಿಸಿದೆ?
ನಾ. ಗೌಡ : ಬೀದಿಯಲ್ಲಿ ನಿಂತು ಹೋರಾಟ ಮಾಡುವುದರ ಜೊತೆಗೆ, ಕನ್ನಡ ಪ್ರೇಮ ಬೆಳೆಸುವಂಥ ಕಾರ್ಯಕ್ಕೆ ಕರವೇ ಬೃಹತ್ ಪ್ರಮಾಣದಲ್ಲಿ ಮುಂದಾಗಿದೆ. ರಾಜ್ಯದಲ್ಲಿರುವ ಎಲ್ಲ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ, ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿ, ರಾಜಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ 100 ಜನರ ಸಾಧಕರ ಬಗ್ಗೆ ತಿಳಿಸುವ 100 ಪುಟಗಳ ಪುಸ್ತಕಗಳನ್ನು 23 ಸಾವಿರ ಶಾಲೆಗಳ ಗ್ರಂಥಾಲಯಗಳಿಗೆ ತಲುಪಿಸುವ ಕೆಲಸಕ್ಕೆ ಕರವೇ ಮುಂದಾಗಲಿದೆ. ನಮ್ಮ ಮಕ್ಕಳಿಗೆ ನಮ್ಮ ಇತಿಹಾಸ, ನಮ್ಮತನ, ನಮ್ಮ ಸಂಸ್ಕಾರ, ಸಂಸ್ಕೃತಿ, ಆಚಾರವಿಚಾರ ತಿಳಿಸುವ ಕಾರ್ಯಕ್ರಮ ನ.10ರಂದು ನಡೆಸಲಾಗುತ್ತಿದೆ.
ಪ್ರ : ಕನ್ನಡ ಶಾಲೆ ಮುಚ್ಚುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ
ನಾ. ಗೌಡ : ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಇದರ ಬಗ್ಗೆ ಸರಕಾರ ದೊಡ್ಡ ಚಿಂತನೆ ಮಾಡಬೇಕಾಗಿದೆ. ಗಡಿಭಾಗಗಳಲ್ಲಿ ಇಂದು ಶಾಲೆಗಳಿಗೆ ಸರಿಯಾದ ಕಟ್ಟಡಗಳಿಲ್ಲ, ಶಿಕ್ಷಕರಿಲ್ಲ, ಶೌಚಾಲಯಗಳಿಲ್ಲ. ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿರುವುದರಿಂದ ಮಕ್ಕಳನ್ನು ಪಾಲಕರು ಶಾಲೆಗೆ ಕಳಿಸುತ್ತಿಲ್ಲ. ಕೆಲ ಶಿಕ್ಷಕರು ರಾಜಕಾರಣಿಗಳ ಸುತ್ತ ಸುತ್ತುತ್ತಿರುವುದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ. ಸರಿಯಾಗಿ ಅಧ್ಯಯನ ಮಾಡಿ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಯಾವುದೇ ಕೊರತೆ ಇಲ್ಲ ಎನ್ನುವಂತೆ ಮಾಡಿದಾಗ ಮಕ್ಕಳು ಮತ್ತೆ ಕನ್ನಡ ಶಾಲೆಗೆ ಬರುವ ಪ್ರಯತ್ನ ಮಾಡುತ್ತಾರೆ.
ಕನ್ನಡ ವ್ಯಾಸಂಗ ಮಾಡುವುದರಿಂದ ಇಲ್ಲಿ ಉದ್ಯೋಗ ಸಿಗುತ್ತೆ. ಇಲ್ಲಿ ಓದಿ ಇನ್ನೆಲ್ಲೋ ಬದುಕಿ ಕಟ್ಟಿಕೊಳ್ಳುವುದು ಸಾಧ್ಯವಿಲ್ಲ. ಎಲ್ಲಿ ಕಳಕೊಳ್ಳಿಕ್ಕೆ ಸಾಧ್ಯವೋ ಅಲ್ಲೇ ಹುಡುಕಿಕೊಳ್ಳಬೇಕೇ ಹೊರತು, ಕಳಕೊಳ್ಳುವುದೊಂದು ಕಡೆ ಹುಡುಕುವುದ ಇನ್ನೊಂದು ಕಡೆ ಆಗಬಾರದು. ಇದಕ್ಕಾಗಿ ಕನ್ನಡಿಗರಿಗೆ ಉದ್ಯೋಗದಲ್ಲಿ ಸರಕಾರ ಮೀಸಲಾತಿ ಕೊಡಿಸಿಕೊಡಬೇಕು. ಕರವೇ ಕೂಡ ಇಂದು ಕೃಷ್ಣಯ್ಯ ಶೆಟ್ಟಿ ಪ್ರೌಢ ಶಾಲೆಯನ್ನು 5 ಲಕ್ಷ ರು. ಖರ್ಚು ಮಾಡಿ, ದತ್ತು ತೆಗೆದುಕೊಂಡು ಅಲ್ಲಿ ಎಲ್ಲ ಸವಲತ್ತುಗಳನ್ನು ಒದಗಿಸುವ ಕೆಲಸಕ್ಕೆ ಮುಂದಾಗಿದೆ. ಇದನ್ನು ರಾಜ್ಯದ ಗಡಿಭಾಗದ ಹಳ್ಳಿಗಳಲ್ಲಿ ವಿಸ್ತರಿಸುವ ಯೋಚನೆಯೂ ಇದೆ.
-
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ












Click it and Unblock the Notifications