ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ ಪ್ರಚಾರದಲ್ಲಿ ಹುಮ್ಮಸ್ಸು ಕಳೆದುಕೊಂಡಿತೇ ಜೆಡಿಎಸ್?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 26: ರಾಜ್ಯ ಸಮ್ಮಿಶ್ರ ಸರ್ಕಾರದ ನೇತೃತ್ವವಹಿಸಿರುವ ಜೆಡಿಎಸ್ ಐದು ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಗೆಲ್ಲುವ ಉತ್ಸಾಹ ತೋರುತ್ತಿದ್ದರೂ ಪಕ್ಷದ ಮುಖಂಡರು ಮಾತ್ರ ಯಾವುದೇ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಗಂಭೀರ ಪ್ರಚಾರದಲ್ಲಿ ತೊಡಗಿಲ್ಲ ಎನ್ನುವುದು ಅಭ್ಯರ್ಥಿಗಳಲ್ಲೇ ಒಳಗೊಳಗೆ ಆತಂಕವನ್ನುಂಟು ಮಾಡುತ್ತಿದೆ.

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಸೇರಿದಂತೆ ಪಕ್ಷದ ಎಲ್ಲಾ ಮುಂಚೂಣಿ ಮುಖಂಡರು ಹಾಗೂ ಜೆಡಿಎಸ್ ನ ಸಚಿವರು ರಾಜ್ಯದ ಐದು ಕ್ಷೇತ್ರಗಳ ಪೈಕಿ ಪೂರ್ಣ ಪ್ರಮಾಣದ ಪ್ರಚಾರ ಕಾರ್ಯದಲ್ಲಿ ತೊಡಗಿಲ್ಲ.

ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಹಿಂದಿದೆ ದೇವೇಗೌಡರ ತಂತ್ರ!ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಹಿಂದಿದೆ ದೇವೇಗೌಡರ ತಂತ್ರ!

ಈ ಹಿನ್ನೆಲೆಯಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿಯವರ ವರ್ಚಸ್ಸನ್ನೇ ನಂಬಿಕೊಂಡಿರುವ ಅಭ್ಯರ್ಥಿಗಳಿಗೆ ಫಲಿತಾಂಶ ಏನಾಗುತ್ತದೆ ಎಂಬ ಚಿಂತೆ ಕಾಡುತ್ತಿದೆ.

ಮೂಲಗಳ ಪ್ರಕಾರ ಸಿಎಂ ಕುಮಾರಸ್ವಾಮಿ ಅಕ್ಟೋಬರ್ 29ರಿಂದ ರಾಮನಗರ, ಮಂಡ್ಯ ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಆದರೆ ಪಕ್ಷದ ವರಿಷ್ಠ ಎಚ್‌ಡಿ ದೇವೇಗೌಡ ಲಂಡನ್‌ಗೆ ತೆರಳಿರುವುದರಿಂದ ಉಪ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಅವರು ಪಾಳ್ಗೊಳ್ಳುವುದು ಅನುಮಾನ ಎನ್ನಲಾಗುತ್ತಿದೆ.

ಕ್ಷುಲ್ಲಕ ವಿಚಾರಕ್ಕೆ ರಾಜೀನಾಮೆ ಕೊಡಲ್ಲ, ಊಹಾಪೋಹಗಳಿಗೆ ತೆರೆ ಎಳೆದ ಎಚ್ ವಿಶ್ವನಾಥ್ಕ್ಷುಲ್ಲಕ ವಿಚಾರಕ್ಕೆ ರಾಜೀನಾಮೆ ಕೊಡಲ್ಲ, ಊಹಾಪೋಹಗಳಿಗೆ ತೆರೆ ಎಳೆದ ಎಚ್ ವಿಶ್ವನಾಥ್

ಇನ್ನು ಅನಾರೋಗ್ಯದಿಂದ ಬಳಲುತ್ತಿರುವ ಪಕ್ಷದ ಅಧ್ಯಕ್ಷ ಎಚ್ ವಿಶ್ವನಾಥ್ ಸೋಮವಾರದಿಂದ ಒಂದೆರೆಡು ದಿನಗಳ ಕಾಲ ಶಿವಮೊಗ್ಗ ಮತ್ತು ಮಂಡ್ಯ ಜಿಲ್ಲೆಯಲ್ಲಿ ಪ್ರಚಾರ ಕೈಗೊಳ್ಳುರಾದರೂ ನಾರೋಗ್ಯದ ಕಾರಣದಿಂದ ಸಂಪೂರ್ಣ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಅನುಮಾನವಾಗಿದೆ.

ಈ ಹಿನ್ನೆಲೆಯಲ್ಲಿ ಪಕ್ಷದ ಮುಂಚೂಣಿ ನಾಯಕರ ಪೈಕಿ ಸಿಎಂ ಕುಮಾರಸ್ವಾಮಿ ಮಾತ್ರ ಮೂರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದು ಇನ್ನುಳಿದ ಯಾವುದೇ ನಾಯಕರು ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

ರಾಜ್ಯ ಸಮ್ಮಿಶ್ರ ಸರ್ಕಾರದ 26 ಸಚಿವರ ಪೈಕಿ ಸಿಎಂ ಕುಮಾರಸ್ವಾಮಿ ಸೇರಿ 11 ಜನ ಸಂಪುಟದ ಸದಸ್ಯರಾಗಿದ್ದರೂ ಕೂಡ ಉಪ ಚುನಾವಣೆಯ ಪ್ರಚಾರದಲ್ಲಿ ಜೆಡಿಎಸ್ ನ ಯಾವುದೇ ಸಚಿವರು ಸಂಪೂರ್ಣವಾಗಿ ತೊಡಗಿಸಿಕೊಂಡಿಲ್ಲ.

ಪಕ್ಷದ ಆಂತರಿಕ ಹಾಗೂ ಕುಟುಂಬದ ಆತಂರಿಕ ಕ್ಷಮತೆ ಕಾರಣದಿಂದ ಜೆಡಿಎಸ್ ನಾಯಕರು ಪೂರ್ಣಪ್ರಮಾಣದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.

 ಸಚಿವ ಎಚ್‌ಡಿ ರೇವಣ್ಣ ಅಸಮಾಧಾನ

ಸಚಿವ ಎಚ್‌ಡಿ ರೇವಣ್ಣ ಅಸಮಾಧಾನ

ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಕೂಡ ಈವರೆಗೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಸಚಿವ ರೇವಣ್ಣ ಪತ್ನಿ ಭವಾನಿ ಪುತ್ರ ಪ್ರಜ್ವಲ್ ಕೂಡ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಪಕ್ಷದ ವರಿಷ್ಠ ದೇವೇಗೌಡರು ರೇವಣ್ಣ ಪತ್ನಿ ಅಥವಾ ಪುತ್ರನಿಗೆ ಟಿಕೆಟ್ ನೀಡಲು ನಿರಾಕರಿಸಿ ಕೇವಲ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿಯನ್ನು ರಾಮನಗರದಿಂದ ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿದ್ದರು.

 ಉಪ ಚುನಾವಣೆ ಪ್ರಚಾರಕ್ಕೆ ದಳದ ಕಲಿಗಳ ಹಿಂದೇಟು

ಉಪ ಚುನಾವಣೆ ಪ್ರಚಾರಕ್ಕೆ ದಳದ ಕಲಿಗಳ ಹಿಂದೇಟು

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಜೆಡಿಎಸ್ ರಾಮನಗರ, ಮಂಡ್ಯ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆದರೆ ಯಾವುದೇ ನಾಯಕರು ಈ ಕ್ಷಣದವರೆಗೆ ಪ್ರಚಾರದಲ್ಲಿ ಕಾಣುತ್ತಿಲ್ಲ. ಮೈತ್ರಿ ಸರ್ಕಾರ ಬಹುಮುಖ್ಯ ಜವಾಬ್ದಾರಿ ಹೊಂದಿರುವ ಕುಮಾರಸ್ವಾಮಿ ಕೂಡ ಪಕ್ಷದ ಅಭ್ಯರ್ಥಿಗಳ ಪರವಾಗಿ ಇಲ್ಲಿವರೆಗೆ ಪ್ರಚಾರ ನಡೆಸಿಲ್ಲ, ಸಚಿವ ಸಂಪುಟದ ಯಾವುದೇ ಸಹೋದ್ಯೋಗಿಗಳು ಕೂಡ ಪ್ರಚಾರಕ್ಕೆ ಕಾರ್ಯಕ್ಕೆ ಬಂದಿಲ್ಲ ಹೀಗಾಗಿ ಜೆಡಿಎಸ್ ಚುನಾವಣೆಯಲ್ಲಿ ಆಸಕ್ತಿ ಕಳೆದುಕೊಂಡಿದೆಯೇ ಎನ್ನುವ ಅನುಮಾನ ಕಾಡುತ್ತಿದೆ.

ಮಂಡ್ಯ ಚುನಾವಣೆ : ಸಿದ್ದರಾಮಯ್ಯ ಸಭೆ ವಿಫಲ, ಕಾಂಗ್ರೆಸ್ ಪ್ರಚಾರವಿಲ್ಲ!ಮಂಡ್ಯ ಚುನಾವಣೆ : ಸಿದ್ದರಾಮಯ್ಯ ಸಭೆ ವಿಫಲ, ಕಾಂಗ್ರೆಸ್ ಪ್ರಚಾರವಿಲ್ಲ!

 ದೇವೇಗೌಡರು ವಿದೇಶದಲ್ಲಿ, ಅಭ್ಯರ್ಥಿಗಳು ಚಿಂತೆಯಲ್ಲಿ

ದೇವೇಗೌಡರು ವಿದೇಶದಲ್ಲಿ, ಅಭ್ಯರ್ಥಿಗಳು ಚಿಂತೆಯಲ್ಲಿ

ಜೆಡಿಎಸ್‌ನ ಟ್ರಂಪ್ ಕಾರ್ಡ್ ಎಂದು ಹೇಳಲಾಗುವ ಪಕ್ಷದ ವರಿಷ್ಠ ಎಚ್‌ಡಿ ದೇವೇಗೌಡರು ವಾರಗಳ ಕಾಲ ಲಂಡನ್ ಪ್ರವಾಸಕ್ಕೆ ತೆರಳಿದ್ದಾರೆ. ಉಪ ಚುನಾವಣೆ ಮುಗಿದ ಬಳಿಕವಷ್ಟೇ ಅವರು ವಿದೇಶದಿಂದ ವಾಪಸ್ ಆಗಲಿದ್ದಾರೆ. ಒಂದೆಡೆ ಅವರು ವಿದೇಶದಲ್ಲಿದ್ದರೆ ಇನ್ನೊಂದೆಡೆ ಪಕ್ಷದ ಅಭಯ್ರ್ತೀಗಳು ಚಿಂತೆಯಲ್ಲಿ ಮುಳುಗಿದ್ದಾರೆ.

ಕಾರಣವೇನೆಂದರೆ ಹಳೆ ಮೈಸೂರು ಹಾಗೂ ಮಧ್ಯ ಕರ್ನಾಟಕದ ಶಿವಮೊಗ್ಗ ಕ್ಷೇತ್ರದಲ್ಲಿ ದೇವೇಗೌಡರ ಪ್ರಭಾವ ಅತಿ ಮುಖ್ಯವಾಗಿದ್ದು, ದೊಡ್ಡ ಗೌಡರಿದ್ದರೆ ಗೆಲುವು ಸಲೀಸು ಎಂಬ ವಿಶ್ವಾಸದಲ್ಲಿದ್ದರು.

ಲಂಡನ್ ನೆಲದಲ್ಲಿರುವ ಬಸವೇಶ್ವರ ಪುತ್ಥಳಿಗೆ ದೇವೇಗೌಡರ ನಮನ ಲಂಡನ್ ನೆಲದಲ್ಲಿರುವ ಬಸವೇಶ್ವರ ಪುತ್ಥಳಿಗೆ ದೇವೇಗೌಡರ ನಮನ

 ಜೆಡಿಎಸ್‌ಎ ಬಿಜೆಪಿ ಪ್ರತಿಸ್ಪರ್ಧಿ, ಆಂತರಿಕವಾಗಿ ಕಾಂಗ್ರೆಸ್ ನಿಜವಾದ ಸ್ಪರ್ಧಿಗಳು

ಜೆಡಿಎಸ್‌ಎ ಬಿಜೆಪಿ ಪ್ರತಿಸ್ಪರ್ಧಿ, ಆಂತರಿಕವಾಗಿ ಕಾಂಗ್ರೆಸ್ ನಿಜವಾದ ಸ್ಪರ್ಧಿಗಳು

ಜೆಡಿಎಸ್ ಸ್ಪರ್ಧಿಸಿರುವ ರಾಮನಗರ ವಿಧಾನಸಭೆ ಹಾಗೂ ಮಂಡ್ಯ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಬಿಜೆಪಿ ಪ್ರತಿಸ್ಪರ್ಧಿ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಆದರೆ ಮೈತ್ರಿ ಪಕ್ಷವಾದ ಕಾಂಗ್ರೆಸ್ ಕೂಡ ಮೈತ್ರಿ ಪಕ್ಷಕ್ಕೆ ಬೆಂಬಲ ನೀಡಿದರೆ ಮಾತ್ರ ಈ ಮೂರು ಕ್ಷೇತ್ರದಲ್ಲಿ ಗೆಲುವು ಸುಲಭ ಎನ್ನುವುದನ್ನು ಜೆಡಿಎಸ್ ಒಪ್ಪಿಕೊಳ್ಳುತ್ತದೆ.

ಸಧ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಸ್ಪರ್ಧಿಸಿರುವ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತಿಲ್ಲ, ಹೀಗಾಗಿ ತನ್ನ ಪ್ರತಿಸ್ಪರ್ಧಿ ಬಿಜೆಪಿಗಿಂತಲೂ ಹೆಚ್ಚಾಗಿ ಆಂತರಿಕವಾಗಿ ಕಾಂಗ್ರೆಸ್‌ನಲ್ಲಿ ಯಾವ ನಾಯಯಕರು ಕೈಕೊಡುತ್ತಾರೋ ಎಂಬ ಆತಂಕ ಎದುರಾಗಿದೆ.

ಉಪಚುನಾವಣೆ:ಅದೇ ಸ್ಟೈಲ್, ಅದೇ 'ಖದರ್': ಸಿದ್ದರಾಮಯ್ಯ ಬ್ಯಾಕ್ ಟು ಫಾರ್ಮ್ಉಪಚುನಾವಣೆ:ಅದೇ ಸ್ಟೈಲ್, ಅದೇ 'ಖದರ್': ಸಿದ್ದರಾಮಯ್ಯ ಬ್ಯಾಕ್ ಟು ಫಾರ್ಮ್

English summary
Including JDS supremo H.D. Devegowda and chief minister H.D.Kumaraswamy no leaders were seriously involved in campaign for five constituencies by election in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X