ಅಕಟಕಟಾ. ಜಮೀರ್ ವಿರುದ್ದ ರೇವಣ್ಣ ವಾಗ್ದಾಳಿಯ ಪರಿಯಿದು!
ಅವನು ಯಾವನ್ರೀ ಜಮೀರ್.. ಅವನನ್ನು ನಾವು ಲೆಕ್ಕಕ್ಕೇ ತೆಗೆದುಕೊಂಡಿಲ್ಲಾ.. ಚಾಮರಾಜಪೇಟೆಯಲ್ಲಿ ಸೀಮೆಯೆಣ್ಣೆ ಡಬ್ಬಾ ಹಿಡಿದುಕೊಂಡು ಹೋಗುತ್ತಿದ್ದ ಗಿರಾಕಿಯಾತ ಎಂದು ಜಮೀರ್ ವಿರುದ್ದ, ಜೆಡಿಎಸ್ ಮುಖಂಡ ರೇವಣ್ಣ ವಾಗ್ದಾಳಿ.
Recommended Video

ಹಾಸನ, ಅ 5: ಜಾತ್ಯಾತೀತ ಜನತಾದಳದ ಭಿನ್ನಮತೀಯ ಮುಖಂಡ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ವಿರುದ್ದ ವಾಗ್ದಾಳಿ ನಡೆಸಲು ಜೆಡಿಎಸ್ ಮುಖಂಡ, ಎಚ್ ಡಿ ರೇವಣ್ಣ, ಸೀಮೆಯೆಣ್ಣೆ ಡಬ್ಬದ ವಿಚಾರವನ್ನು ಜನತೆಯ ಮುಂದೆ ತಂದಿಟ್ಟಿದ್ದಾರೆ.
ಹಾಸನದಲ್ಲಿ ಗುರುವಾರ, ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರೇವಣ್ಣ, ಅವನು ಯಾವನ್ರೀ ಜಮೀರ್.. ಅವನನ್ನು ನಾವು ಲೆಕ್ಕಕ್ಕೇ ತೆಗೆದುಕೊಂಡಿಲ್ಲಾ.. ಚಾಮರಾಜಪೇಟೆಯಲ್ಲಿ ಸೀಮೆಯೆಣ್ಣೆ ಡಬ್ಬಾ ಹಿಡಿದುಕೊಂಡು ಹೋಗುತ್ತಿದ್ದ ಗಿರಾಕಿಯಾತ ಎಂದು ಹೇಳಿದ್ದಾರೆ.

ಈ ರಾಜ್ಯದ ಜನ ಒಂದಂತೂ ಬರೆದಿಟ್ಟುಕೊಳ್ಳಬೇಕು, ಕರ್ನಾಟಕದ ಯಾವುದೇ ಮುಸ್ಲಿಂ ಸಮುದಾಯದ ನಾಯಕರಿರಬಹುದು, ಅವರೆಲ್ಲಾ ಜೆಡಿಎಸ್ ನಿಂದ ರಾಜಕೀಯ ಕಲಿತವರು. ಹೀಗಿರುವಾಗ, ಜಮೀರ್ ಮುಂತಾದವರನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆ ಜಮೀರ್..ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಮುಖಂಡ ಆರ್ ವಿ ದೇವರಾಜ್ ಗೆ ಟೋಪಿ ಹಾಕಿದವನು. ಇವತ್ತು ನಮ್ಮ ಪಕ್ಷ ಮತ್ತು ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಾನೆ. ಇವನ ಹೇಳಿಕೆಗೆಲ್ಲಾ ತಲೆಕೆಡೆಸಿಕೊಳ್ಳುವ ರಾಜಕೀಯ ವ್ಯಕ್ತಿತ್ವ ಆತನ್ನದ್ದಲ್ಲಾ ಎಂದು ಜಮೀರ್ ವಿರುದ್ದ ರೇವಣ್ಣ ಕಿಡಿಕಾರಿದ್ದಾರೆ.
ಚುನಾವಣೆಯ ಈ ವರ್ಷದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಭಲ ಮುಸ್ಲಿಂ ಸಮುದಾಯದ ಕಾಂಗ್ರೆಸ್ ಮುಖಂಡರ ಕೊರತೆಯಿದೆ, ಹಾಗಾಗಿ ಪರಮೇಶ್ವರ್ ಸೇರಿದಂತೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್, ಜಮೀರ್ ಹಿಂದೆ ಬಿದ್ದಿದೆಯೇ ಹೊರತು, ಜಮೀರ್ ದೊಡ್ಡ ನಾಯಕನೆಂದಲ್ಲಾ ಎಂದು ರೇವಣ್ಣ, ಜಮೀರ್ ವಿರುದ್ದ ಏಕವಚನದಲ್ಲಿ ಮಾತಿನ ಪ್ರಹಾರ ನಡೆಸಿದ್ದಾರೆ.
ಕೊರಟಗೆರೆ ಅಕ್ಕಿರಾಂಪುರದಲ್ಲಿ ನಡೆದ ಉರುಸ್ ಕಾರ್ಯಕ್ರಮಯೊಂದರಲ್ಲಿ, ಜಮೀರ್ ಭವಿಷ್ಯದ ಮುಸ್ಲಿಂ ನಾಯಕ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಹೇಳಿದ್ದರು.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು?












Click it and Unblock the Notifications