ಪರಪ್ಪನ ಅಗ್ರಹಾರಕ್ಕೆ ರೆಡ್ಡಿ, ನ.24ರ ವರೆಗೆ ನ್ಯಾಯಾಂಗ ಬಂಧನ
ಬೆಂಗಳೂರು, ನವೆಂಬರ್ 11: ಆಂಬಿಡೆಂಟ್ ಪ್ರಕರಣದಲ್ಲಿ ಇಡಿಗೆ ಲಂಚ ಕೊಟ್ಟ ಆರೋಪದಲ್ಲಿ ಸಿಸಿಬಿ ಬಂಧಿಸಿದ್ದ ಜನಾರ್ದನ ರೆಡ್ಡಿಗೆ ನ್ಯಾಯಾಂಗ ಬಂಧನವಾಗಿದೆ.
ಜನಾರ್ದನ ರೆಡ್ಡಿಯನ್ನು ಬಂಧಿಸಿದ್ದ ಸಿಸಿಬಿಯು ಕೋರಮಂಗಲದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ರೆಡ್ಡಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಸತತ ವಿಚಾರಣೆ ಬಳಿಕ ಜನಾರ್ದನ ರೆಡ್ಡಿಯನ್ನು ಬಂಧಿಸಿದ ಸಿಸಿಬಿ
ವಿಚಾರಣೆಗೆಂದು ಹಾಜರಾದ ಜನಾರ್ದನ ರೆಡ್ಡಿ ಈಗ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು, ನವೆಂಬರ್ 24ರ ವರೆಗೆ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯಬೇಕಾಗಿದೆ.
ವಕೀಲ ಹನುಮಂತರಾಯಪ್ಪ ಅವರು ರೆಡ್ಡಿ ಪರ ವಾದ ಮಂಡಿಸಿದರಾದರೂ ಅವರ ಜಾಮೀನು ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ನಾಳೆ ಮತ್ತೆ ಜಾಮೀನು ಅರ್ಜಿ ಸಲ್ಲಿಸಲಾಗುವುದು.
ಜನಾರ್ದನ ರೆಡ್ಡಿ ಬಂಧನ ಏಕೆ? ಮುಂದಿನ ನಡೆ ಏನು?
ಜನಾರ್ದನ ರೆಡ್ಡಿ ಅವರು ಗಣಿ ಲೂಟಿ ಪ್ರಕರಣ, ಜಡ್ಜ್ಗೆ ಹಣದ ಆಮೀಷ ಪ್ರಕರಣದಲ್ಲಿ ಜೈಲು ವಾಸಿಯಾಗಿದ್ದಾರೆ. ಇದು ಎರಡನೇ ಬಾರಿ ಜನಾರ್ದನ ರೆಡ್ಡಿ ಜೈಲುಪಾಲಾಗುತ್ತಿದ್ದಾರೆ.