Get Updates
Get notified of breaking news, exclusive insights, and must-see stories!

ರಾಯರನ್ನ ಅವಮಾನಿಸಿ ಯಾರೂ ಉದ್ಧಾರ ಆದ ಇತಿಹಾಸವಿಲ್ಲ: ಸಿದ್ದರಾಮಯ್ಯ ವಿರುದ್ಧ ಜಗ್ಗೇಶ್‌ ಕಿಡಿ

ಸ್ಯಾಂಡಲ್‌ವುಡ್‌ ಹಿರಿಯ ನಟ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂತ್ರಾಲಯದ ರಾಯರ ಫೋಟೋ ನೀಡುವ ಸಂದರ್ಭದಲ್ಲಿನ ವಿಡಿಯೋ ಒಂದು ಭಾರೀ ಚರ್ಚೆಗೆ ಕಾರಣವಾಗಿದ್ದು, ಆ ವಿಡಿಯೋವನ್ನು ಜಗ್ಗೇಶ್‌ ಹಂಚಿಕೊಂಡಿದ್ದಾರೆ. ರಾಯರ ಫೋಟೋ ನೀಡಿದಾಗ ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ ಎಂದು ಜಗ್ಗೇಶ್‌ ಆರೋಪಿಸಿದ್ದಾರೆ. ರಾಯರ ಭಕ್ತರೂ ಆಗಿರುವ ಜಗ್ಗೇಶ್‌ ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಫೋಟೋ ನೀಡುವಾಗ ಸಿಎಂ ಸಿದ್ದರಾಮಯ್ಯ ಅವರು ಅದನ್ನು ಸ್ವೀಕರಿಸದೆ ತಿರಸ್ಕರಿಸಿದಂತೆ ಕಂಡುಬರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ವಿಡಿಯೋ ಹರಿದಾಡುತ್ತಿದ್ದಂತೆ ಭಕ್ತವೃಂದದ ನಡುವೆ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ನಟ ಜಗ್ಗೇಶ್ ಕೂಡ ಈ ವಿಚಾರದಲ್ಲಿ ಕಿಡಿಕಾರಿದ್ದಾರೆ.

Jaggesh Criticises CM Siddaramaiah Over Mantralaya Raghavendra Swamy Photo Controversy

ಈ ಕುರಿತು ಎಕ್ಸ್‌ನಲ್ಲಿ ದೀರ್ಘವಾಗಿ ಪೋಸ್ಟ್ ಮಾಡಿರುವ ಜಗ್ಗೇಶ್, "ರಾಯರನ್ನ ಅಪಮಾನ ಮಾಡಿದ ಯಾರು ಉದ್ಧಾರ ಆದ ಇತಿಹಾಸವಿಲ್ಲ!" ಎಂದು ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ, ಮಂತ್ರಾಲಯದ ರಾಯರ ಸಣ್ಣ ಕೃಪೆ ನಮ್ಮ ಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತರು ಜಪ, ತಪ, ವೈರಾಗ್ಯ, ಉಪವಾಸಗಳಿಂದ ಸೇವೆ ಸಲ್ಲಿಸುತ್ತಾರೆ. ಇಂತಹ ಭಕ್ತಿಯಿಂದ ನೀಡಿದ ರಾಯರ ಫೋಟೋವನ್ನು ಹೀಗೆ ತಿರಸ್ಕರಿಸಿದ ಮೊದಲ ವ್ಯಕ್ತಿಯನ್ನು ನಾನು ನನ್ನ ಬದುಕಿನಲ್ಲಿ ನೋಡಿದ್ದು ಇದೇ ಎಂದು ಹೇಳಿದ್ದಾರೆ. "ರಾಯರಿದ್ದಾರೆ, ಎದ್ದು ಬರುತ್ತಾರೆ, ಕಾಯಬೇಕು..!!" ಎಂದು ಭಕ್ತಿಭಾವದ ಸಂದೇಶವನ್ನು ನೀಡಿದ್ದಾರೆ.

ಕೊನೆಯಾಗುವ ದಿನಗಳು ಸಮೀಪಿಸಿದೆ

ಅಷ್ಟೇ ಅಲ್ಲದೆ, ಭಕ್ತಿಯಿಂದ ರಾಯರ ಭಕ್ತರು ಯಾರಿಗಾದರೂ ರಾಯರ ವಿಗ್ರಹ, ಮೃತ್ತಿಕೆ ಅಥವಾ ಫೋಟೋ ನೀಡಿದಾಗ ಅದನ್ನು ಭಕ್ತಿಯಿಂದ ಸ್ವೀಕರಿಸಬೇಕು ಎಂಬುದು ಸಂಪ್ರದಾಯ ಎಂದು ಅವರು ನೆನಪಿಸಿದ್ದಾರೆ. ಒಂದು ವೇಳೆ ಅದನ್ನು ತಿರಸ್ಕರಿಸಿದರೆ, ಅಂತಹ ವ್ಯಕ್ತಿಗೆ ಯೋಗ ಕೊನೆ ಆಗುವ ದಿನಗಳು ಸಮೀಪಿಸಿದೆ ಎಂಬುದರ ಸಂಕೇತ ಎಂದು ನಂಬಲಾಗುತ್ತದೆ ಎಂದು ಜಗ್ಗೇಶ್ ಹೇಳಿದ್ದಾರೆ.

ಈ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಹಲವರು ಜಗ್ಗೇಶ್ ಅವರ ಮಾತುಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಕೆಲವರು ಸಿಎಂ ಅವರ ನಡೆ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಭಕ್ತರಲ್ಲಿ ಈ ವಿಡಿಯೋ ತೀವ್ರ ನೋವು ಮತ್ತು ಆಕ್ರೋಶ ಹುಟ್ಟಿಸಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಇನ್ನಷ್ಟು ಬಿಸಿ ಏರಿಸುವ ಸಾಧ್ಯತೆ ಇದೆ.

ಈ ವಿಡಿಯೋ ಮತ್ತು ಜಗ್ಗೇಶ್ ಪ್ರತಿಕ್ರಿಯೆಯ ನಂತರ, ಮಂತ್ರಾಲಯದ ರಾಯರ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಇದು ರಾಜಕೀಯ ವಿಚಾರವಲ್ಲ, ಭಕ್ತಿಯ ವಿಚಾರ", "ಯಾವುದೇ ಹುದ್ದೆ ದೊಡ್ಡದಾದರೂ ಭಕ್ತಿಯನ್ನು ತಿರಸ್ಕರಿಸಬಾರದು" ಎಂಬಂತಹ ಪ್ರತಿಕ್ರಿಯೆಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಈ ಘಟನೆ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗುತ್ತಿದೆ. ಕೆಲವರು ಸಿಎಂ ನಡೆ ಉದ್ದೇಶಪೂರ್ವಕವಲ್ಲ, ಸಂದರ್ಭದ ಅಸೌಕರ್ಯದಿಂದ ಆಗಿರಬಹುದು ಎಂದು ಸಮರ್ಥನೆ ನೀಡುತ್ತಿದ್ದರೆ, ಮತ್ತೊಬ್ಬರು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+