ವೀರಣ್ಣ ಚಿರಂತಿಮಠ ಮನೆ ಮೇಲೆ ಐಟಿ ದಾಳಿ

Veeranna Charantimath
ಬಾಗಲಕೋಟೆ, ಸೆ.19 : ಬಾಗಲಕೋಟೆಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಜಿ ಶಾಸಕ ವೀರಣ್ಣ ಚಿರಂತಿಮಠ ಅವರ ನಿವಾಸ, ಕಾರ್ಖನೆ ಮತ್ತು ಸಹಕಾರ ಸಂಘಗಳ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಗುರುವಾರ ಬೆಳಗ್ಗೆ ಬಾಗಲಕೋಟೆ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ವೀರಣ್ಣ ಚಿರಂತಿಮಠ ಅವರ ಹಳೇ ಬಾಗಲಕೋಟೆ ನಿವಾಸ, ಚಿರಂತಿಮಠ ಅಧ್ಯಕ್ಷರಾಗಿರುವ ಗುರುಬಸವ ಸಹಕಾರ ಸಂಘದ ಮೇಲೆ ದಾಳಿ ನಡೆಸಿದ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.

ಗುರುಬಸವ ಸಹಾಕಾರ ಸಂಘಕ್ಕೆ ವೀರಣ್ಣ ಚಿರಂತಿಮಠ ಅಧ್ಯಕ್ಷರಾಗಿದ್ದಾರೆ. ಈ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು 2012ರಲ್ಲಿ ದೂರು ದಾಖಲಾಗಿತ್ತು. ಸಹಕಾರಿ ಸಂಘಗಳ ನಿಬಂಧಕರು ಈ ಕುರಿತು ತನಿಖೆ ನಡೆಸಿದ್ದರು.

ಈ ತನಿಖೆಯ ಆಧಾರದ ಮೇಲೆಯೇ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರಬಹುದು ಎಂದು ತಿಳಿದು ಬಂದಿದೆ. ದಾಖಲೆಗಳ ಪರಿಶೀಲನೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ. ಉಳಿದಂತೆ ವೀರಣ್ಣ ಚಿರಂತಿಮಠ ಅವರ ಕಾರ್ಖನೆ, ವಿದ್ಯಾಸಂಸ್ಥೆಗಳ ಮೇಲೆಯೂ ದಾಳಿ ನಡೆದಿದೆ.

ಚಿರಂತಿಮಠ ಅವರಿಗೆ ಸೇರಿದ ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರಾಶುಂಪಾಲ ಓಂಕಾರ್ ಮತ್ತು ಚಿರಂತಿಮಠ ಅವರ ಗಿನ್ನಿಂಗ್ ಕಾರ್ಖನೆ ನೋಡಿಕೊಳ್ಳುತ್ತಿರುವ ಶಿವಾನಂದ್ ಅವರ ಮನೆಯ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

2008ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ವೀರಣ್ಣ ಚಿರಂತಿಮಠ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ.ಮೇಟಿ ವಿರುದ್ಧ ಸೋಲು ಅನುಭವಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+