ಐಎಸ್ಐಎಸ್ ವಶದಿಂದ ಇಬ್ಬರು ಕನ್ನಡಿಗರ ರಕ್ಷಣೆ
ಬೆಂಗಳೂರು, ಆಗಸ್ಟ್ 1 : ಐಎಸ್ಐಎಸ್ ಉಗ್ರರು ಅಪಹರಣ ಮಾಡಿದ್ದ ಭಾರತೀಯ ಪೈಕಿ ಇಬ್ಬರು ಕನ್ನಡಿಗರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ ಇಬ್ಬರು ಉಗ್ರರ ವಶದಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ.
ಕೋಲಾರದ
ವಿಜಯ್
ಕುಮಾರ್
ಮತ್ತು
ರಾಯಚೂರಿನ
ಲಕ್ಷ್ಮೀಕಾಂತ್
ಅವರನ್ನು
ರಕ್ಷಣೆ
ಮಾಡಲಾಗಿದೆ
ಎಂದು
ವಿದೇಶಾಂಗ
ಇಲಾಖೆ
ವಕ್ತಾರ
ವಿಕಾಸ್
ಸ್ವರೂಪ್
ಟ್ವಿಟ್ಟರ್ನಲ್ಲಿ
ಮಾಹಿತಿ
ನೀಡಿದ್ದಾರೆ.
ನಾಲ್ವರು
ಭಾರತೀಯರನ್ನು
ಉಗ್ರರು
ಶುಕ್ರವಾರ
ಅಪಹರಣ
ಮಾಡಿದ್ದರು.
[ನಾಲ್ವರು
ಭಾರತೀಯರ
ಅಪಹರಣ]
ಕರ್ನಾಟಕ ಮೂಲದ ಇಬ್ಬರು ಹಾಗೂ ಆಂಧ್ರಪ್ರದೇಶದ ಇಬ್ಬರು ಸೇರಿದಂತೆ ನಾಲ್ವರು ಭಾರತೀಯರನ್ನು ಲಿಬಿಯಾದಲ್ಲಿ ಶುಕ್ರವಾರ ಅಪಹರಣ ಮಾಡಲಾಗಿತ್ತು. ಆಂಧ್ರ ಪ್ರದೇಶದ ಬಲರಾಮ್, ಗೋಪಿ ಅವರನ್ನು ಬಿಡುಗಡೆಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. [ISIS ಸೇರಿದ್ದ ಕರ್ನಾಟಕದ ಮೂವರ ಸಾವು?]
Welcome
news
from
Libya.
2
of
the
4
detained
Indians
brought
back
safely
to
University
of
Sirte.
Our
efforts
continue
for
the
remaining
two.
—
Vikas
Swarup
(@MEAIndia)
July
31,
2015
ಐಎಸ್ಐಎಸ್ ಉಗ್ರರು ಅಪಹರಣ ಮಾಡಿದವರನ್ನು ಬಿಡುಗಡೆ ಮಾಡಲು ಯಾವುದೇ ಬೇಡಿಕೆ ಇಟ್ಟಿಲ್ಲ. ಲಿಬಿಯಾದಲ್ಲಿ ಐಎಸ್ಐಎಸ್ ಪ್ರಬಲ್ಯ ಹೆಚ್ಚಾಗುತ್ತಿದ್ದಂತೆ ಇಂತಹ ಅಪಹರಣಗಳು ನಿರಂತರವಾಗಿ ನಡೆಯುತ್ತಿವೆ. ಲಿಬಿಯಾದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ತೀವ್ರ ಸ್ವರೂಪ ಪಡೆದುಕೊಂಡರೆ ದೇಶವನ್ನು ತೊರೆಯುವಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚಿಸಿದೆ.
39 ಜನರ ಕಥೆ ಏನು? : ಅಂದಹಾಗೆ ಐಎಸ್ಐಎಸ್ ಉಗ್ರರು ಇರಾಕ್ನಲ್ಲಿ 39 ಭಾರತೀಯರನ್ನು ಅಪಹರಿಸಿದ್ದರು. ಆದರೆ, ಇದುವರೆಗೆ ಅವರ ಬಗ್ಗೆ ಮಾಹಿತಿ ಲಭ್ಯವಾಗುತ್ತಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳುತ್ತಿದೆ. ಇದು ಬಿಟ್ಟರೆ ಬೇರೆ ಯಾವುದೇ ಮಾಹಿತಿಗಳು ಸಿಗುತ್ತಿಲ್ಲ.