ಆಯ್ಕೆ ಆಗಿರುವ ಶಾಸಕರ ಕುರಿತು ಕೆಲವು ಕುತೂಹಲಕಾರಿ ಸಂಗತಿಗಳು
ಕರ್ನಾಟಕ ಚುನಾವಣಾ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದು ಒಂದು ದಿನವಾಗಿದೆ. ಈಗ ಸರ್ಕಾರ ರಚನೆ ಕಸರತ್ತುಗಳು ನಡೆಯುತ್ತಿವೆ. ಈ ಬಾರಿ 222 ಶಾಸಕರು ವಿಧಾನಸಭೆಗೆ ಪ್ರವೇಶಿಸಿದ್ದಾರೆ ಇನ್ನಿಬ್ಬರು ಆಯ್ಕೆ ಆಗುವುದು ಬಾಕಿ ಇದೆ. ಅವರ ಕುರಿತು ಕೆಲವು ಇಂಟ್ರಸ್ಟಿಂಗ್ ವಿಷಯಗಳು ಇಲ್ಲಿವೆ.
ಈ ಬಾರಿ ಆಯ್ಕೆ ಆಗಿರುವ ಶಾಸಕರಲ್ಲಿ 215 (ಶೇ 97%) ಶಾಸಕರು ಕೋಟ್ಯಾಧಿಪತಿಗಳು. ಹೌದು ಕಳೆದ ಬಾರಿಗೆ (2013)ಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಜನ ಕೋಟ್ಯಾಧಿಪತಿಗಳು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಈ ಬಾರಿಯ ವಿಷಯವೆಂದರೆ ಆಯ್ಕೆಯಾಗಿರು ಶಾಸಕರಲ್ಲಿ 54 ಶಾಸಕರ ಮೇಲೆ ಹತ್ಯೆ ಯತ್ನ, ಅಪಹರಣ, ಗೂಂಡಾಗಿರಿಗಳಂತಹಾ ಗಂಭೀರ ಅಪರಾಧ ಪ್ರಕರಣಗಳಿವೆ, 2013ರಲ್ಲಿ 37 ಶಾಸಕರ ಮೇಲೆ ಈ ರೀತಿಯಾದ ಗಂಭೀರ ಅಪರಾಧ ಪ್ರಕರಣಗಳಿದ್ದವು.

ಅಪರಾಧ ಪ್ರಕರಣ ಆರೋಪಿತರು ಬಿಜೆಪಿಗರೇ ಹೆಚ್ಚು
ಈ ಬಾರಿ ಆಯ್ಕೆ ಆಗಿರುವ ಶಾಸಕರಲ್ಲಿ ಹೆಚ್ಚಿನ ಅಪರಾಧ ಪ್ರಕರಣಗಳು ದಾಖಲಾಗಿರುವುದು ಬಿಜೆಪಿ ಶಾಸಕರ ಮೇಲೆ, ಬಿಜೆಪಿಯ 42 (41%) ಶಾಸಕರ ಮೇಲೆ ಅಪರಾಧ ಪ್ರಕರಣಗಳು ದಾಖಲಾಗಿವೆ. ಕಾಂಗ್ರೆಸ್ನ 23 (30%) ಶಾಸಕರ ಮೇಲೆ ಅಪರಾಧ ಪ್ರಕರಣಗಳಿವೆ. ಹಾಗೂ ಜೆಡಿಎಸ್ನ 11 (30%) ಶಾಸಕರ ವಿರುದ್ಧ ಅಪರಾಧ ಪ್ರಕರಣಗಳಿವೆ. ಗಂಭೀರ ಅಪರಾಧ ಪ್ರಕರಣದಲ್ಲೂ ಬಿಜೆಪಿಗರೇ ಮುಂದಿದ್ದಾರೆ.

ವಿಧಾನಸೌಧದ ತುಂಬಾ ಕೋಟ್ಯಾಧಿಪತಿಗಳು
ಈ ಬಾರಿ ವಿಧಾನಸೌಧದ ತುಂಬ ಕೋಟ್ಯಾದಿಪತಿಗಳೇ ತುಂಬಲಿದ್ದಾರೆ. ಆಯ್ಕೆ ಆಗಿರುವ 222 ಶಾಸಕರ ಪೈಕಿ 215 ಶಾಸಕರು ಕೋಟ್ಯಾಧಿಪತಿಗಳು. ಕಳೆದ ಬಾರಿ 224 ಶಾಸಕರ ಪೈಕಿ 203 ಜನ ಕೋಟ್ಯಾಧಿಪತಿಗಳಿದ್ದರು.

100 ಕೋಟಿಗೂ ಹೆಚ್ಚು ಆಸ್ತಿಯುಳ್ಳ ಶಾಸಕರ ಸಂಖ್ಯೆ
100 ಕೋಟಿಗೂ ಹೆಚ್ಚಿನ ಆಸ್ತಿಯುಳ್ಳ 15 ಅಭ್ಯರ್ಥಿಗಳು ಈ ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಅದರಲ್ಲಿ ಕಾಂಗ್ರೆಸ್ ಶಾಸಕೇ ಹೆಚ್ಚು. 104 ಶಾಸಕರಲ್ಲಿ ಕೇವಲ ಒಬ್ಬ ಬಿಜೆಪಿ ಶಾಸಕರು ಮಾತ್ರ 100 ಕೋಟಿಗೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಕಾಂಗ್ರೆಸ್ನ 11 ಶಾಸಕರು ಶತಕೋಟಿ ಸರದಾರರಾಗಿದ್ದರೆ, ಜೆಡಿಎಸ್ನ ಒಬ್ಬರು ಹಾಗೂ ಕೆಪಿಜೆಪಿಯ ಒಬ್ಬ ಶಾಸಕ 100 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ.

54 ಶಾಸಕರ ಮೇಲೆ ಅಪರಾಧ ಪ್ರಕರಣ
ಈ ಬಾರಿಯ ವಿಷಯವೆಂದರೆ ಆಯ್ಕೆಯಾಗಿರು 222 ಶಾಸಕರಲ್ಲಿ 54 ಶಾಸಕರ ಮೇಲೆ ಹತ್ಯೆ ಯತ್ನ, ಅಪಹರಣ, ಗೂಂಡಾಗಿರಿಗಳಂತಹಾ ಗಂಭೀರ ಅಪರಾಧ ಪ್ರಕರಣಗಳಿವೆ, 2013ರಲ್ಲಿ 37 ಶಾಸಕರ ಮೇಲೆ ಈ ರೀತಿಯಾದ ಗಂಭೀರ ಅಪರಾಧ ಪ್ರಕರಣಗಳಿದ್ದವು.

ಅತಿ ಶ್ರೀಮಂತ ಶಾಸಕರಿವರು
ಅತಿ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಮುಂದಿರುವುದು ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು. ಅವರ ಆಸ್ತಿಯ ಮೌಲ್ಯ 1015 ಕೋಟಿ. ಅವರ ನಂತರದ ಸ್ಥಾನ ಡಿಕೆ ಶಿವಕುಮಾರ್ ಅವರದ್ದು ಅವರ ಬಳಿ ಇರುವುದು 840 ಕೋಟಿ ಆಸ್ತಿ. ಮೂರನೇ ಸ್ಥಾನದಲ್ಲಿರುವುದು ಸುರೇಶ್ ಬಿಎಸ್. ಇವರ ಬಳಿ 416 ಕೋಟಿ ಮೌಲ್ಯದ ಆಸ್ತಿ ಇದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications