I.N.D.I.A ಮೈತ್ರಿಕೂಟ; ಆಯ್ದ ಪ್ರಬುದ್ಧರ ಹೇಳಿಕೆಗಳ ಪಟ್ಟಿ!
ಬೆಂಗಳೂರು, ಸೆಪ್ಟೆಂಬರ್ 07; ಸನಾತನ ಧರ್ಮದ ಕುರಿತು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ವಿರೋಧ ಪಕ್ಷಗಳ I.N.D.I.A ಮೈತ್ರಿಕೂಟದ ವಿರುದ್ಧ ಟೀಕೆಗಳನ್ನು ಮಾಡುತ್ತಿದೆ.
ಕರ್ನಾಟಕ ಬಿಜೆಪಿ ಗುರುವಾರ ಟ್ವೀಟ್ ಒಂದನ್ನು ಮಾಡಿದೆ. 'ಅಷ್ಟಕ್ಕೂ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅಳಿದುಳಿದ ಪಕ್ಷಗಳನ್ನೆಲ್ಲಾ ಸೇರಿಸಿ ಕಲೆ ಹಾಕಿದ I.N.D.I.A ಹೆಸರಿನ ಮೈತ್ರಿಕೂಟ ಭಾರತ ಪರ ಅಲ್ಲ, ಭಾರತದ ವಿರೋಧಿ ನೀತಿಗಳಿಗೇ ಹೆಸರುವಾಸಿ' ಎಂದು ಆರೋಪ ಮಾಡಿದೆ.

ಬಿಜೆಪಿ ಟ್ವೀಟ್ನಲ್ಲಿ 'ಮೈತ್ರಿಕೂಟದ ಆಯ್ದ ಪ್ರಬುದ್ಧರು ನೀಡಿರುವ ಹೇಳಿಕೆಯ ಯಥಾವತ್ ಅರ್ಥವನ್ನು ಈ ಕೆಳಗಿನ ಸಾಲುಗಳಲ್ಲಿ ನೀಡಲಾಗಿದೆ' ಎಂದು ಹೇಳಿದೆ. ಮೈತ್ರಿಕೂಟದ ಪಾಲುದಾರ ಪಕ್ಷಗಳ ಕೆಲವು ನಾಯಕರ ಹೇಳಿಕೆಗಳನ್ನು ಉಲ್ಲೇಖ ಮಾಡಿದೆ.
ಪ್ರಬುದ್ಧರು ನೀಡಿರುವ ಹೇಳಿಕೆ
* ಡಿಎಂಕೆ ನಾಯಕ ಹಾಗೂ ಎಂ. ಕೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಪ್ರಕಾರ ನಮ್ಮ ಈ ಮಣ್ಣಿನಲ್ಲಿ ಸಹಸ್ರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಸನಾತನ ಹಿಂದೂ ಧರ್ಮವೇ ಒಂದು ಸಾಂಕ್ರಾಮಿಕ!
* ಸಮಾಜವಾದಿ ಪಾರ್ಟಿಯ ಶ್ಯಾಮ ಪ್ರಸಾದ್ ಮೌರ್ಯ ಅವರಿಗೆ ಹಿಂದೂ ಅನ್ನುವ ಧರ್ಮವೇ ಒಂದು ವಂಚನಾ ಜಾಲ!
* ಜೆಡಿಯು ಪಕ್ಷದ ರಾಜ್ಯಸಭಾ ಸದಸ್ಯ ಗುಲಾಂ ರಸೂಲ್ ಬಲ್ಯಾವಿ ಅವರು ಹಿಂದೂ ಸಮಾಜದ ಮೇಲೆ ಹಾಕುವ ಧಮ್ಕಿ ಮತ್ತೂ ಅಪಾಯಕಾರಿಯಾದದ್ದು. ಭಾರತದ ಎಲ್ಲಾ ನಗರಗಳನ್ನೂ ಬೇಕಾದರೆ ನಿರ್ನಾಮ ಮಾಡುವ ತಾಕತ್ತು ನಮಗಿದೆ ಎಂದು ಕರೆ ಕೊಟ್ಟು ಸಮಾಜದಲ್ಲಿ ದ್ವೇಷದ ಸಂತೆಯನ್ನೇ ತೆರೆದಿದ್ದಾರೆ!
* ರಾಮಾಯಣ ಆಧಾರವಾಗಿಟ್ಟು ತುಳಸಿದಾಸರು ಬರೆದ ರಾಮಚರಿತ ಮಾನಸ್ ಸಮಾಜದಲ್ಲಿ ಅಶಾಂತಿಗೆ ಕಾರಣ ಎಂದವರು ಆರ್ಜೆಡಿ ಪಕ್ಷದಿಂದ ಬಿಹಾರದ ಶಿಕ್ಷಣ ಸಚಿವರೂ ಆಗಿರುವ ಚಂದ್ರಶೇಖರ್.
* ಜೆಎಂಎಂನ ಹೇಮಂತ್ ಸೊರೇನ್ ಪ್ರಕಾರ ಕಾವಿ ವಸ್ತ್ರಧಾರಿಗಳೆಲ್ಲಾ ಅತ್ಯಾಚಾರಿಗಳು!
* ಕಾಂಗ್ರೆಸ್ ಧುರೀಣ ದಿಗ್ವಿಜಯ್ ಸಿಂಗ್ ಪ್ರಕಾರ ಲಷ್ಕರ್-ಎ-ತೊಯ್ಬಾ, ಐಸಿಸ್, ಪಿಎಫ್ಐ ಉಗ್ರಗಾಮಿಗಳನ್ನು ಪೋಷಿಸುವುದೇ ಇಲ್ಲ.
* ಹಿಂದೂ ವಿರೋಧಿ ನೀತಿಯನ್ನೇ ನಿತ್ಯವೂ ಅನುಸರಿಸುತ್ತಾ ಅದನ್ನು ಮತಾಂತರ ಮಾಡಲು ಬಳಸಿಕೊಳ್ಳುವ ತಮಿಳುನಾಡಿನ ಜಾರ್ಜ್ ಪೊನ್ನಯ್ಯನಂಥವರ ಜೊತೆಯಲ್ಲಿ ರಾಹುಲ್ ಗಾಂಧಿಯವರದ್ದು ಘನ ಗಂಭೀರ ಚರ್ಚೆ. ಅವರ ಭಾರತ ವಿರೋಧಿ ನೀತಿಗಳಿಗೆಲ್ಲಾ ಜೈ!
ಬಿಜೆಪಿ ಟ್ವೀಟ್ನಲ್ಲಿ, 'ಭಾರತ ವಿರೋಧಿ ಮೈತ್ರಿಕೂಟದ ಸದಸ್ಯರೆಲ್ಲಾ ಹಿಂದುತ್ವವನ್ನೇ ಸರ್ವನಾಶ ಮಾಡುವ ಹೊಂಚು ಹಾಕಿದ್ದರೆ ಅದಕ್ಕೆ ಬೆಂಬಲ ಮತ್ತು ಪ್ರೋತ್ಸಾಹ ಕರ್ನಾಟಕದಿಂದಲೇ ಹೋಗುತ್ತಿದೆ. ಅದು ಹೇಗೆ ಎಂಬುದಕ್ಕೆ ಇಲ್ಲೇ ನಮ್ಮವರ ಹೇಳಿಕೆಗಳನ್ನು ಗಮನಿಸಿ' ಎಂದು ಮತ್ತೊಂದು ಪಟ್ಟಿ ನೀಡಿದೆ.
* ಹಿಂದೂ ಧರ್ಮ ಯಾವಾಗ ಹುಟ್ಟಿತು ಮತ್ತು ಯಾರು ಹುಟ್ಟಿಸಿದರು ಎಂಬುದು ಇಂದಿಗೂ ಕ್ವಶ್ಚನ್ ಮಾರ್ಕ್ ಅಂದವರು ಘನ ಗೃಹಸಚಿವರಾದ ಡಾ. ಪರಮೇಶ್ವರ್ ಅವರು.
* ಹಿಂದೂ ಅನ್ನೋ ಪದವೇ ಹೊಲಸು ಅಂದವರು ಕಾಂಗ್ರೆಸ್ ಪಕ್ಷದ ಸತೀಶ್ ಜಾರಕಿಹೊಳಿಯವರು.
* ಹಿಂದೂ ಧರ್ಮ ಒಂದು ವ್ಯಾಧಿಯಂತೆ ಎಂದ ಸ್ಟಾಲಿನ್ ಹೇಳಿಕೆ ಸರಿಯಾದುದೇ ಎಂದು ಕನ್ನಡದ ನೆಲದಲ್ಲಿ ನಿಂತು ಕೂಗಿ ಹೇಳಿದ ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆಯವರು. ಎಂದು ಬಿಜೆಪಿ ಹೇಳಿದೆ.
-
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
ಏಪ್ರಿಲ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; ಕನ್ನಡಿಗರಿಗೂ ಇದೆ ಮೀಸಲಾತಿ -
ಏಪ್ರಿಲ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price Update: ಆಭರಣಪ್ರಿಯರೇ ಗಮನಿಸಿ, ಅಕ್ಷಯ ತೃತೀಯ ಮುನ್ನವೇ ಗಗನಕ್ಕೇರಿದ ಚಿನ್ನದ ದರ -
Dhurandhar-2: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು












Click it and Unblock the Notifications