ಸುಪ್ರೀಂ ಸೂಚನೆ ಹಿನ್ನೆಲೆ:ಎಸಿಬಿ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ
ಬೆಂಗಳೂರು,ಜು.13. ಭ್ರಷ್ಟಾಚಾರ ನಿಗ್ರಹ ದಳದ ಕುರಿತ ವಿಚಾರಣೆಯನ್ನು ಮೂರು ದಿನ ಮುಂದೂಡುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯಪೀಠ ವಿಚಾರಣೆಯನ್ನು ಸೋಮವಾರ (ಜು.18) ಕ್ಕೆ ಮುಂದೂಡಿತು.
ಮೊದಲೇ ನಿಗದಿಯಾಗಿದ್ದಂತೆ ಬುಧವಾರ ಮಧ್ಯಾಹ್ನ ನ್ಯಾ.ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯಪೀಠದ ಮುಂದೆ ವಿಚಾರಣೆಗೆ ಬಂದಿತು. ಆಗ ಎಸಿಬಿ ಪರ ವಕೀಲರು, ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿರುವ ಎಸಿಬಿ ಮೇಲ್ಮನವಿ ವಿಚಾರಣೆ ಶುಕ್ರವಾದ ನಿಗದಿಯಾಗಿದೆ. ಅಲ್ಲಿಯವರೆಗೆ ಇಲ್ಲಿ ವಿಚಾರಣೆಯನ್ನು ಮುಂದೂಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ ಎಂದರು. ಅದನ್ನು ದಾಖಲಿಸಿಕೊಂಡ ನ್ಯಾಯಮೂರ್ತಿಗಳು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.
Breaking: ಅಗ್ನಿಪಥ್ ಯೋಜನೆ ಪ್ರಶ್ನಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಅಸ್ತು!
ಈ ಮಧ್ಯೆ, ನ್ಯಾಯಪೀಠ ಜು.11ರಂದು ಎಸಿಬಿ ವಿರುದ್ಧ ಹೊರಡಿಸಿದ್ದ ಮಧ್ಯಂತರ ಆದೇಶದ ಪ್ರತಿಯನ್ನು ಹೈಕೋರ್ಟ್ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ.
ಮೂರು ದಿನ ಮುಂದೂಡಲು ಸೂಚನೆ: ಪ್ರಕರಣದ ಸಂಬಂಧ ಜು.11ರಂದು ನ್ಯಾ.ಸಂದೇಶ್ ಅವರು ಹೊರಡಿಸಿರುವ ಪ್ರತಿ ಇನ್ನೂ ಲಭ್ಯವಾಗದ ಕಾರಣ ಮೂರು ದಿನ ಎಸಿಬಿ ವಿಚಾರ ಕುರಿತ ವಿಚಾರಣೆಯನ್ನು ಮುಂದೂಡುವಂತೆ ಸಿಜೆಐ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಮಂಗಳವಾರ ಸೂಚನೆ ನೀಡಿತ್ತು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಲಂಚ ಪ್ರಕರಣದಲ್ಲಿ ನ್ಯಾ.ಎಚ್.ಪಿ. ಸಂದೇಶ್ ಭ್ರಷ್ಟಾಚಾರ ನಿಗ್ರಹ ದಳದ ವಿರುದ್ಧ ಹಾಗೂ ತಮ್ಮ ವಿರುದ್ಧ ಭಾರಿ ಟೀಕೆ ಮಾಡಿರುವುದನ್ನು ಪ್ರಶ್ನಿಸಿ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸಲ್ಲಿಸಿರುವ ಅರ್ಜಿ ಜು.12ರಂದು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಯ್ಲಿ ಅವರಿದ್ದ ತ್ರಿಸದಸ್ಯಪೀಠದ ಮುಂದೆ ವಿಚಾರಣೆಗೆ ಬಂದಿತು.
ಆಗ ಅರ್ಜಿದಾರರ ಪರ ವಾದ ಆಲಿಸಿದ ಬಳಿಕ ನ್ಯಾಯಪೀಠ, "ನಾವು ನ್ಯಾಯಮೂರ್ತಿ ಜು.11ರಂದು ಹೊರಡಿಸಿರುವ ಆದೇಶವನ್ನು ಪರಿಶೀಲಿಸಬೇಕಿರುವುದರಿಂದ ವಿಚಾರಣೆಯನ್ನು ಮೂರು ದಿನ ಮುಂದೂಡುವಂತೆ ನ್ಯಾ.ಎಚ್.ಪಿ.ಸಂದೇಶ್ ಅವರಿಗೆ ಕೋರಲಾಗುವುದು. ಶುಕ್ರವಾರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುವುದು'' ಎಂದು ಆದೇಶಿಸಿತು.
ಮತ್ತೆ ಟೀಕಾತ್ಮಕ ಆದೇಶ:
ಎಸಿಬಿ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ತುಷಾರ್ ಮೆಹ್ತಾ, ನ್ಯಾ.ಎಚ್;ಪಿ. ಸಂದೇಶ್ ಅವರು ಸೋಮವಾರವೂ ಎಸಿಬಿ ಮತ್ತು ಅದರ ಮುಖ್ಯಸ್ಥರ ವಿರುದ್ಧ ಟೀಕಾತ್ಮಕ ಆದೇಶ ಹೊರಡಿಸಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ಇಂದು ವಿಚಾರಣೆ ಇರುವುದು ತಿಳಿದೇ ಮತ್ತೆ ಆದೇಶ ಹೊರಡಿಸಿದ್ದಾರೆ. ಹಾಗಾಗಿ ಪ್ರಕರಣವನ್ನು ಹಂಗಾಮಿ ಸಿಜೆ ನೇತೃತ್ವದ ಪೀಠಕ್ಕೆ ವರ್ಗಾಯಿಸಬೇಕು ಎಂದು ಕೋರಿದರು.
ಅಲ್ಲದೆ, ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾ.ಎಚ್.ಪಿ.ಸಂದೇಶ್ ಅವರು ಅದರ ವ್ಯಾಪ್ತಿ ಹೊರತುಪಡಿಸಿ ಪಿಐಎಲ್ ನಂತೆ ವಿಚಾರಣೆ ನಡೆಸುತ್ತಿದ್ದಾರೆ. ಹೈಕೋರ್ಟ್ ಗೆ ತನಿಖೆಯ ಮೇಲ್ವಿಚಾರಣೆ ನಡೆಸುವ ಅಧಿಕಾರ ಇದ್ದರೂ ಸಹ ಜಡ್ಜ್ ತಮ್ಮ ಅಧಿಕಾರ ಮೀರಿ ಆದೇಶಗಳನ್ನು ಹೊರಡಿಸುತ್ತಿದ್ದಾರೆ. ಇದನ್ನು ನಿರ್ಬಂಧಿಸಬೇಕು ಎಂದು ಮನವಿ ಮಾಡಿದರು. ಸೀಮಂತ್ ಕುಮಾರ್ ಸಿಂಗ್ ತಮ್ಮ ಅರ್ಜಿಯಲ್ಲಿ ನ್ಯಾ.ಸಂದೇಶ್ ತಮ್ಮ ವ್ಯಾಪ್ತಿ ಮೀರಿ ಆದೇಶ ಮಾಡಿದ್ದಾರೆ. ಹಾಗಾಗಿ ಅದಕ್ಕೆ ತಡೆ ನೀಡಬೇಕೆಂದು ಕೋರಿದ್ದಾರೆ.
ಸಿಂಗ್ ವಿರುದ್ಧ ವಾಗ್ದಾಳಿ :
ಲಂಚ
ಪ್ರಕರಣದಲ್ಲಿ
ಜಾಮೀನು
ಕೋರಿದ
ಉಪ
ತಹಶೀಲ್ದಾರ್
ಮಹೇಶ್
ಸಲ್ಲಿಸಿದ
ಅರ್ಜಿ
ವಿಚಾರಣೆ
ವೇಳೆ
ನ್ಯಾ.
ಎಚ್.ಪಿ.
ಸಂದೇಶ್
ಅವರಿದ್ದ
ಏಕಸದಸ್ಯಪೀಠ
ಎಸಿಬಿ
ಎಡಿಜಿಪಿ
ಸೀಮಂತ್
ಕುಮಾರ್
ಸಿಂಗ್
ವಿರುದ್ಧ
ವಾಗ್ದಾಳಿ
ನಡೆಸಿತ್ತು,
ಅವರೇ
ಕಳಂಕಿತರು
ಅವರು
ಹೇಗೆ
ಸಂಸ್ಥೆಯನ್ನು
ಮುನ್ನಡೆಸಲು
ಸಾಧ್ಯ
ಎಂದು
ಪ್ರಶ್ನಿಸಿ,
ಸೀಮಂತ್
ಕುಮಾರ್
ಸೇವಾ
ದಾಖಲೆ
ಸಲ್ಲಿಸಲು
ಆದೇಶಿಸಿದ್ದರು.
ನ್ಯಾಯಮೂರ್ತಿ
ಕಳದ
ವಿಚಾರಣೆ
ವೇಳೆ,
ಎಸಿಬಿಯಲ್ಲಿನ
ಅಕ್ರಮಗಳ
ಪ್ರಶ್ನಿಸಿರುವುದಕ್ಕೆ
ನನಗೆ
ವರ್ಗಾವಣೆಯ
ಬೆದರಿಕೆ
ಬಂದಿದೆ.
ಈ
ಹಿಂದೆ
ನ್ಯಾಯಾಧೀಶರೊಬ್ಬರನ್ನು
ವರ್ಗಾಯಿಸಲಾಗಿದೆ
ಎಂದು
ಹೇಳುವ
ಮೂಲಕ
ನನಗೇ
ವರ್ಗಾವಣೆಯ
ಬೆದರಿಕೆ
ಹಾಕಲಾಗಿದೆ.
ಎಸಿಬಿಯ
ಎಡಿಜಿಪಿ
ಪವರ್
ಫುಲ್
ಅಂತೆ.
ಜನರ
ಒಳಿತಾಗಿ
ವರ್ಗಾವಣೆ
ಬೆದರಿಕೆ
ಎದುರಿಸಲು
ಸಿದ್ಧನಿದ್ದೇನೆ
ಎಂದರು.
ಅಲ್ಲದೆ,
ನನಗೆ
ಯಾರ
ಹೆದರಿಕೆಯೂ
ಇಲ್ಲ.
ಬೆಕ್ಕಿಗೆ
ಗಂಟೆ
ಕಟ್ಟಲು
ಸಿದ್ಧನಿದ್ದೇನೆ.
ನ್ಯಾಯಮೂರ್ತಿಯಾದ
ಮೇಲೆ
ನಾನು
ಒಂದಿಂಚೂ
ಆಸ್ತಿ
ಮಾಡಿಲ್ಲ.
ನ್ಯಾಯಮೂರ್ತಿ
ಹುದ್ದೆ
ಹೋದರೂ
ಚಿಂತೆ
ಮಾಡುವುದಿಲ್ಲ.
ನಾನು
ರೈತನ
ಮಗ.
ಉಳುಮೆ
ಮಾಡಿ
ಜೀವನ
ಸಾಗಿಸಲೂ
ಸಿದ್ಧನಿದ್ದೇನೆ.
50 ರುಪಾಯಿಯಲ್ಲಿ ಜೀವನ ನಡೆಸುವುದು ಗೊತ್ತು:
50 ಸಾವಿರ ಹಣದಲ್ಲೂ ಜೀವನ ನಡೆಸುವುದು ಗೊತ್ತಿದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ಸಂವಿಧಾನ ಮಾತ್ರ ಬದ್ಧನೇ ಹೊರತು ಯಾವುದೇ ಪಕ್ಷದ ಸಿದ್ಧಾಂತಕ್ಕೂ ಬದ್ಧನಲ್ಲ ಎಂದು ನುಡಿದರು.
Recommended Video