ಕರ್ನಾಟಕ: 2014ರ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದ ಐವರು ಮುಖಂಡರು
Recommended Video

2014ರ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಮಾರ್ಚ್ ಐದರಂದು ಬಿಡುಗಡೆ ಮಾಡಿದ್ದೆವು, ಹಾಗಂತ ಈ ಬಾರಿಯ ಚುನಾವಣೆಯ ದಿನಾಂಕವನ್ನು ಅದೇ ತಾರೀಕಿನಂದು ಘೋಷಿಸಬೇಕೆಂದೇನೂ ಇಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
ಹಾಲೀ ಹದಿನಾರನೇ ಲೋಕಸಭೆಯ ಅವಧಿ ಜೂನ್ 2, 2019ರಂದು ಮುಕ್ತಾಯಗೊಳ್ಳಲಿದೆ. ಜೂನ್ 3ನೇ ತಾರೀಕಿನೊಳಗೆ ಚುನಾವಣೆಯ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ ಎಂದು ಚುನಾವಣಾ ಆಯೋಗ ಹೇಳಿದ್ದು, ವೇಳಾಪಟ್ಟಿಯನ್ನು ಯಾವಾಗ ಬಿಡುಗಡೆ ಮಾಡಲಿದೆ ಎನ್ನುವುದರ ಬಗ್ಗೆ ಸುಳಿವನ್ನು ನೀಡಲಿಲ್ಲ.
ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯನ್ನೂ ನಡೆಸಬೇಕಾಗಿರುವುದರಿಂದ, ಅದರ ಸಿದ್ಧತೆಯೆಲ್ಲಾ ಮುಗಿದ ನಂತರ ದಿನಾಂಕ ಘೋಷಿಸುವುದಾಗಿ ಆಯೋಗ ಹೇಳಿದೆ. ನಾವು ಪ್ರಧಾನಿಯವರ ವೇಳಾಪಟ್ಟಿಗೆ ತಕ್ಕಂತೆ ಕೆಲಸ ಮಾಡುವುದಿಲ್ಲ ಎನ್ನುವುದನ್ನೂ ಸ್ಪಷ್ಟ ಪಡಿಸಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು, ಭಾರೀ ಅಂತರದ ಗೆಲವನ್ನು ಸಾಧಿಸಿದ್ದರು. ಅವರು ಯಾರು? ಮುಂದೆ ಓದಿ

ಯಡಿಯೂರಪ್ಪ ಭಾರೀ ಅಂತರದ ಗೆಲುವು
ಅಭ್ಯರ್ಥಿ ಮತ್ತು ಪಕ್ಷ: ಬಿ ಎಸ್ ಯಡಿಯೂರಪ್ಪ, ಬಿಜೆಪಿ
ಕ್ಷೇತ್ರ: ಶಿವಮೊಗ್ಗ
ಪರಾಜಿತ ಅಭ್ಯರ್ಥಿ : ಮಂಜುನಾಥ ಭಂಡಾರಿ, ಕಾಂಗ್ರೆಸ್
ಗೆಲುವಿನ ಅಂತರ : 363,305

ಡಿ ಕೆ ಸುರೇಶ್ ಪ್ರಚಂಡ ಜಯ
ಅಭ್ಯರ್ಥಿ ಮತ್ತು ಪಕ್ಷ: ಡಿ ಕೆ ಸುರೇಶ್, ಕಾಂಗ್ರೆಸ್
ಕ್ಷೇತ್ರ: ಬೆಂಗಳೂರು ಗ್ರಾಮಾಂತರ
ಪರಾಜಿತ ಅಭ್ಯರ್ಥಿ : ತುಳುಸಿ ಮುನಿರಾಜು ಗೌಡ, ಬಿಜೆಪಿ
ಗೆಲುವಿನ ಅಂತರ : 231,480

ಸದಾನಂದ ಗೌಡರ ಗೆಲುವು
ಅಭ್ಯರ್ಥಿ ಮತ್ತು ಪಕ್ಷ: ಡಿ ವಿ ಸದಾನಂದ ಗೌಡ, ಬಿಜೆಪಿ
ಕ್ಷೇತ್ರ: ಬೆಂಗಳೂರು ಉತ್ತರ
ಪರಾಜಿತ ಅಭ್ಯರ್ಥಿ : ಸಿ ನಾರಾಯಣಸ್ವಾಮಿ, ಕಾಂಗ್ರೆಸ್
ಗೆಲುವಿನ ಅಂತರ : 229,764

ಅನಂತ್ ಕುಮಾರ್ ಸೋಲಿಲ್ಲದ ಸರದಾರರಾಗಿದ್ದರು
ಅಭ್ಯರ್ಥಿ ಮತ್ತು ಪಕ್ಷ: ದಿ. ಅನಂತ್ ಕುಮಾರ್, ಬಿಜೆಪಿ
ಕ್ಷೇತ್ರ: ಬೆಂಗಳೂರು ದಕ್ಷಿಣ
ಪರಾಜಿತ ಅಭ್ಯರ್ಥಿ : ನಂದನ್ ನೀಲೇಕಣಿ, ಕಾಂಗ್ರೆಸ್
ಗೆಲುವಿನ ಅಂತರ : 228,575

ಶೋಭಾ ಕರಂದ್ಲಾಜೆ ಭಾರಿ ಗೆಲುವು
ಅಭ್ಯರ್ಥಿ ಮತ್ತು ಪಕ್ಷ: ಶೋಭಾ ಕರಂದ್ಲಾಜೆ, ಬಿಜೆಪಿ
ಕ್ಷೇತ್ರ: ಉಡುಪಿ - ಚಿಕ್ಕಮಗಳೂರು
ಪರಾಜಿತ ಅಭ್ಯರ್ಥಿ : ಕೆ ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್
ಗೆಲುವಿನ ಅಂತರ : 181,643












Click it and Unblock the Notifications