ನಾನು ರಾಜಕೀಯ ಸನ್ಯಾಸಿ ಎಂದು ಎಲ್ಲಿಯೂ ಹೇಳಿಲ್ಲ: ಪರಮೇಶ್ವರ್

ಬೆಳಗಾವಿ, ಫೆಬ್ರವರಿ 2 : ನಾನು ರಾಜಕೀಯ ಸನ್ಯಾಸಿ ಅಂತಾ ಎಲ್ಲೂ ಹೇಳಿಲ್ಲ, ಕಾಂಗ್ರೆಸ್ ಪಕ್ಷದ ವರಿಷ್ಠರು, ಶಾಸಕರು ಪರಮೇಶ್ವರ ಮುಖ್ಯಮಂತ್ರಿ ಆಗಲಿ ಎಂದರೆ ಆಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದರು.

ಬೆಳಗಾವಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಈಗ ನನ್ನ ಗುರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು. ಸಿಎಂ ಯಾರಾಗುತ್ತಾರೆ ಎನ್ನುವುದನ್ನು ಶಾಸಕಾಂಗ ಸಭೆಯಲ್ಲಿ ಹೇಳುತ್ತಾರೆ. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ನಾವು ಯಾರನ್ನು ಬೇಕಾದರೂ ಸಿಎಂ ಆಕಾಂಕ್ಷಿ ಎಂದು ಕೊಂಡು ತಿರುಗಾಡಬಹುದು, ಪಕ್ಷ ಮತ್ತು ಪಕ್ಷದ ವರಿಷ್ಠರು ಸಿಎಂ ಯಾರು ಆಗಬೇಕೆಂದು ಹೇಳುತ್ತಾರೆ. ಪಕ್ಷಕ್ಕೆ ಯಾರಾದರೂ ಒಬ್ಬರು ಯಜಮಾನರು ಬೇಕು.ನಮ್ಮ ಯಜಮಾನರು ಹೈಕಮಾಂಡ್.ಹೈಕಮಾಂಡ ಎಲ್ಲವನ್ನೂ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

I will not retire from active politics: Parameshwar

ಪ್ರಧಾನಿ ಮೋದಿ ಆಗಮನದ ವೇಳೆ ಬೆಂಗಳೂರು ಬಂದ್ ವಿಚಾರ ಕುರಿತು ಮಾತನಾಡಿದ ಅವರು, ಬೆಂಗಳೂರು ಬಂದ್ ಗೂ ನಮಗೂ ಯಾವುದೇ ಸಂಬಂಧವಿಲ್ಲ. ನಾವು ಬಿಜೆಪಿಯವಂತೆ ಚೀಫ್ ಪೊಲಿಟಿಕ್ಸ್ ಮಾಡುವ ಅಗತ್ಯವಿಲ್ಲ. ನಾವು ಐದು ವರ್ಷ ಅಭಿವೃದ್ಧಿ ಮಾಡುತ್ತೇವೆ. ರಾಹುಲ್ ಗಾಂಧಿ ಬಂದಾಗ ಬಂದ್ ಮಾಡುವುದು, ಗಲಾಟೆ ಮಾಡಿಸುವುದು ಬಿಜೆಪಿಗೆ ಬಿಟ್ಟಿದ್ದು ನಾವೇನು ಭದ್ರತೆ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ ಎಂದರು.

ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಬೇಕು, ನ್ಯಾಯಾಧೀಕರಣದ ಹೊರಗೆ ಮಹದಾಯಿ ವಿವಾದ ಇತ್ಯರ್ಥ ಮಾಡಬೇಕು. ಪ್ರಧಾನಿ ಮೋದಿ ಸ್ಪಂದಿಸುತ್ತಿಲ್ಲ ಅದು ನಮ್ಮ ದುರಂತ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+