Darshan Thoogudeepa: ನನಗೆ ಬೇಲ್ ಸಿಗುತ್ತೆ, ಬೆಂಗಳೂರಿಗೆ ನಾನೇ ಬರ್ತಿನಿ: ನಟ ದರ್ಶನ್
ಬಳ್ಳಾರಿ, ಅಕ್ಟೋಬರ್ 28: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ನಾಲ್ಕು ತಿಂಗಳುಗಳೇ ಕಳೆದಿದ್ದು, ದರ್ಶನ್ ಅಭಿಮಾನಿಗಳಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದ್ದು, ನನಗೆ ಬೇಲ್ ಸಿಗುತ್ತೆ ಎಂಬ ವಿಶ್ವಾಸದಲ್ಲಿ ನಟ ದರ್ಶನ್ ಅವರಿದ್ದಾರೆ.
ಹೈಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. ನಟ ದರ್ಶನ್ ಗೆ ಜಾಮೀನು ಸಿಗುತ್ತೋ..? ಅಥವಾ ಜೈಲು ಶಿಕ್ಷೆ ಮುಂದುವರೆಯುತ್ತೋ ಎಂಬುದು ಇಂದು ನಿರ್ಧಾರವಾಗಲಿದೆ. ಆದರೆ ದರ್ಶನ್ ಮಾತ್ರ ಇಂದು ನನಗೆ ಬೇಲ್ ಸಿಕ್ಕೇ ಸಿಗುತ್ತೆ ಎಂಬ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಬೇಲ್ ಸಿಗುತ್ತೆ, ನಾನೇ ಬೆಂಗಳೂರಿಗೆ ಬರ್ತೀನಿ ಎಂದು ತನ್ನನ್ನು ನೋಡಲು ಬಂದ ಪತ್ನಿ ವಿಜಯಲಕ್ಷ್ಮಿ ಮೂಲಕ ಸ್ಯಾಂಡಲ್ ವುಡ್ ನ ನಟ ಹಾಗೂ ನಟಿಯವರಿಗೆ ನಟ ದರ್ಶನ್ ಸಂದೇಶವನ್ನ ರವಾನಿಸಿದ್ದಾರೆ.

ನಟ ದರ್ಶನ್ ಗೆ ಆರೋಗ್ಯ ಸಮಸ್ಯೆ ಕಾಡುತ್ತಿದ್ದು, ಇದೇ ಮೊದಲ ಬಾರಿಗೆ ವೈದ್ಯಕೀಯ ವರದಿಯೊಂದಿಗೆ ಹೈಕೋರ್ಟ್ ನಲ್ಲಿ ಇಂದು ದರ್ಶನ್ ಪರ ವಕೀಲರು ವಾದ ಮಂಡಿಸುವರು.ದರ್ಶನ್ ಗೆ ಜಾಮೀನು ನೀಡುವಂತೆ ವಕೀಲರು ಮನವಿ ಮಾಡಲಿದ್ದು, ಜಾಮೀನು ಸಿಗದಿದ್ದರೆ ವೈದ್ಯಕೀಯ ವರದಿ ಆಧರಿಸಿ ಬೆಂಗಳೂರಿಗೆ ಶಿಫ್ಟ್ ಮಾಡಲು ಕೋರಲಾಗುವುದು ಎನ್ನಲಾಗಿದೆ. ಹೈಕೋರ್ಟ್ ನಲ್ಲಿ ಇಂದು ಕೊಲೆ ಆರೋಪಿ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.












Click it and Unblock the Notifications