11 ದಿನಗಳ ಬೆಳಗಾವಿ ಅಧಿವೇಶನಕ್ಕೆ ಖರ್ಚಾದ ಹಣವೆಷ್ಟು?
ಬೆಳಗಾವಿ, ಡಿಸೆಂಬರ್ 21: ಬೆಳಗಾವಿ ಅಧಿವೇಶನ ಇಂದಿಗೆ ಮುಕ್ತಾಯವಾಗಿದೆ, ಇಂದು ಮತ್ತು ನಿನ್ನೆ ಯಾವುದೇ ಉಪಯುಕ್ತ ಚರ್ಚೆಯೇ ಇಲ್ಲದೆ ಅಂತ್ಯಗೊಂಡಿದೆ. ಎರಡು ದಿನದ ಅಧಿವೇಶನ ಯಾವುದೇ ಪ್ರತಿಫಲ ಇಲ್ಲದೆ ಅಂತ್ಯವಾಗಿದೆ.
ಅಧಿವೇಶನ ನಡೆಯುವುದು ಸಾರ್ವಜನಿಕರ ಹಣದಲ್ಲಿ, ಅದು ಹತ್ತು ದಿನದ ಅಧಿವೇಶನ ನಡೆಯಲು ಕೋಟ್ಯಂತರ ಹಣ ಖರ್ಚಾಗುತ್ತದೆ. ಅಂದರೆ ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣ ಖರ್ಚು ಮಾಡಿ ಅಧಿವೇಶನ ನಡೆಸಲಾಗುತ್ತದೆ.
ಆದರೆ ಅನವಶ್ಯಕ ಗಲಾಟೆ, ಸದನದೊಳಗೆ ರಾಜಕೀಯ ಮಾಡಿ ಉಪಯುಕ್ತ ಚರ್ಚೆಗಳು ಮಾಡದೇ ಹೋದಾಗ ಅಲ್ಲಿ ವ್ಯಯವಾಗುವುದು ಸಾರ್ವಜನಿಕ ಹಣವೇ. ಒಂದು ದಿನ ಅಧಿವೇಶನ ನಡೆಸಲು ಬರೋಬ್ಬರಿ 2 ಕೋಟಿ ರೂಪಾಯಿ ಸರ್ಕಾರ ಖರ್ಚು ಮಾಡುತ್ತದೆ.

ಅಧಿವೇಶನಕ್ಕೆ ಒಂದು ದಿನಕ್ಕೆ 2 ಕೋಟಿ ಬೇಕು
ಒಂದು ದಿನಕ್ಕೆ 2 ಕೋಟಿ ಅಂದರೆ ಈ ಬಾರಿ ಬೆಳಗಾವಿ ಅಧಿವೇಶನ 11 ದಿನ ನಡೆಯಿತು. ಅಲ್ಲಿಗೆ ಬರೋಬ್ಬರಿ 22 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಸರ್ಕಾರ ವೆಚ್ಚ ಮಾಡುತ್ತದೆ. ಶಾಸಕರು, ಅಧಿಕಾರಿಗಳು, ಸಿಬ್ಬಂದಿಗಳ ದಿನಭತ್ಯೆ , ಪ್ರವಾಸ ಭತ್ಯೆಗಳು ಪ್ರತ್ಯೇಕ, ಇವಕ್ಕೆ ಪ್ರತಿದಿನ ಕನಿಷ್ಟ 10 ಲಕ್ಷ ಖರ್ಚಾಗುತ್ತದೆ.

ಆಹಾರ, ನಿರ್ವಹಣೆ, ವಾಹನಗಳ ಖರ್ಚು ಪ್ರತ್ಯೇಕ
ಇವುಗಳ ಜೊತೆಗೆ ಇನ್ನೂ ಇತರೆ ಖರ್ಚುಗಳು, ಆಹಾರ, ನಿರ್ವಹಣೆ, ವಾಹನಗಳ ನಿರ್ವಹಣೆ ಇನ್ನಿತರ ಖರ್ಚುಗಳು ಇರುತ್ತವೆ. ಕಳೆದ ವರ್ಷ ಬೆಳಗಾವಿ ಅಧಿವೇಶನ ನಡೆಸಲು ಬರೋಬ್ಬರಿ 28 ಕೋಟಿ ರೂಪಾಯಿ ಖರ್ಚಾಗಿತ್ತು.

'ಸದನ ಸರಿಯಾಗಿ ನಡೆಸುವುದು ಎಲ್ಲ ಪಕ್ಷಗಳ ಜವಾಬ್ದಾರಿ'
ಇಷ್ಟೋಂದು ಹಣ ಖರ್ಚು ಮಾಡುವಾಗ ಜನರಿಗೆ ಉಪಯುಕ್ತವಾಗುವ ಚರ್ಚೆ ನಡೆಸಬೇಕಾದುದು ಆಡಳಿತ ಹಾಗೂ ವಿರೋಧ ಪಕ್ಷಗಳೆರಡರ ಜವಾಬ್ದಾರಿ ಆಗುತ್ತದೆ. ಆದರೆ ಈ ಬಾರಿ ಅಧಿವೇಶನದಲ್ಲಿ ಈ ರೀತಿಯ ಜವಾಬ್ದಾರಿ ಎರಡೂ ಪಕ್ಷಗಳಿಂದ ಕಂಡು ಬಂದಿದ್ದು ವಿರಳ.

ಡಿಸೆಂಬರ್ 10 ರಂದು ಅಧಿವೇಶನ ಆರಂಭವಾಯಿತು
ಡಿಸೆಂಬರ್ 10 ರಂದು ಬೆಳಗಾವಿ ಅಧಿವೇಶನ ಆರಂಭವಾಯಿತು. ಮೊದಲ ದಿನ ಅಗಲಿದ ನಾಯಕರಿಗೆ ಗೌರವ ಸೂಚಿಸಿ ಸದನ ಮುಂದೂಡಲಾಯಿತು. ಅಧಿವೇಶನದ ಮಧ್ಯದಲ್ಲಿ ಶನಿವಾರ ಮತ್ತು ಭಾನುವಾರ ರಜಾದಿನಗಳಿದ್ದವು, ಕೆಲವೆಡೆ ಕೆಲವು ಉಪಯುಕ್ತ ಚರ್ಚೆಗಳೂ ನಡೆದವು ಆದರೆ ಕೊನೆಯ ಎರಡು ದಿನವಂತೂ ಬರೀ ಗದ್ದಲದಲ್ಲಿಯೇ ಕಾಲಹರಣವಾಯಿತು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications