ಭಾರಿ ಮಳೆ: 3 ದಿನದಲ್ಲಿ 89ಲಕ್ಷ ನಷ್ಟ ಅನುಭವಿಸಿದ ಕೆಎಸ್ಆರ್ಟಿಸಿ
Recommended Video

ಬೆಂಗಳೂರು, ಆಗಸ್ಟ್ 17: ಕರ್ನಾಟಕ, ಕೇರಳಾದ್ಯಂತ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತ, ಅಲ್ಲಲ್ಲಿ ಮರಗಳು ಧರೆಗುರುಳಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ ಇದರಿಂದ ಕೇವಲ ಮೂರು ದಿನಗಳಲ್ಲಿ ಕೆಎಸ್ಆರ್ಟಿಸಿ 89.3 ಲಕ್ಷ ರೂ. ನಷ್ಟ ಅನುಭವಿಸಿದೆ.
ಮೂರು ದಿನಗಳಿಂದ 706 ಟ್ರಿಪ್ಗಳನ್ನು ರದ್ದುಗೊಳಿಸಲಾಗಿದೆ. ಮಂಗಳವಾರ 187 ಟ್ರಿಪ್ಗಳು, ಬುಧವಾರ 261 ಟ್ರಿಪ್ಗಳು, ಗುರುವಾರ 25 ಟ್ರಿಪ್ಗಳು ರದ್ದುಗೊಂಡಿವೆ.ಇದರಿಂದಾಗಿ 20.4 ಲಕ್ಷ, 31 ಲಕ್ಷ, 38 ಲಕ್ಷ ನಷ್ಟ ಉಂಟಾಗಿದೆ.
ಕೆಎಸ್ಆರ್ಟಿಸಿಯು ಕೇರಳ ಮಾರ್ಗದ ಎಲ್ಲಾ ಬಸ್ಗಳ ಸಂಚಾರವನ್ನು ಸ್ಥಗಿತಗೊಳಿಸಿದೆ. ಕೆಲವೊಂದು ಬಸ್ಗಳು ತ್ರಿಸುರ್, ಪಾಲಕ್ಕಡ್, ಊಟಿ, ತಮಿಳುನಾಡಿನಲ್ಲಿ ಹಿಂದೆ ಬರಲಾಗದೆ ರಸ್ತೆಗಳಲ್ಲಿ ಕಂದಕ ಉಂಟಾಗಿರುವುದು, ಗುಡ್ಡ ಕುಸಿದಿರುವುದು, ಮರ ಬಿದ್ದಿರುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಅಲ್ಲಿಯೇ ನಿಂತಿವೆ.

ಚೆನ್ನೈನಲ್ಲಿ ಪ್ರವಾಹ ಬಂದಿರುವ ಕಾರಣ ಕರ್ನಾಟಕದಿಂದ 5ರಿಂದ 10 ಬಸ್ಗಳು ಕಳುಹಿಸಲಾಗಿತ್ತು, ಆದರೆ ತ್ರಿಸುರ್, ಪಾಲಕ್ಕಡ್ ನಡುವೆ ಈ ಬಸ್ಗಳು ಸಿಲುಕಿಕೊಂಡಿವೆ.ಮಂಗಳೂರು ಮಾರ್ಗದಲ್ಲಿ ಇಷ್ಟು ದಿನ ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದು ಇದೇ ಮೊದಲ ಬಾರಿಗೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳ ಹಾಗೂ ಕರಾವಳಿ ಭಾಗದಲ್ಲಿ ಮಳೆಯ ಪರಿಸ್ಥಿತಿ ನೋಡಿ ಬಸ್ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತದೆ. ಕೇರಳ ಬಸ್ಗಳು ಬೆಂಗಳೂರು ಕೇರಳ ನಡುವಿನ ಸಂಚಾರವನ್ನು ಗುರುವಾರದಿಂದ ಸ್ಥಗಿತಗೊಳಿಸಲಾಗಿದೆ. ಕುಕ್ಕೆಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮೆಜೆಸ್ಟಿಕ್ನಿಂದ ಧರ್ಮಸ್ಥಳ, ಉಡುಪಿ, ಪುತ್ತೂರು, ಕುಕ್ಕೆ ಸುಬ್ರಹ್ಮಣ್ಯ, ಕುಂದಾಪುರ ತೆರಳುತ್ತಿದ್ದ 74 ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ.












Click it and Unblock the Notifications