Get Updates
Get notified of breaking news, exclusive insights, and must-see stories!

JDS-BJP Alliance: ಮಗ ಕೊಡುವ ಹಿಂಸೆಯಿಂದ ದೇವೆಗೌಡರು ಮೈತ್ರಿಗೆ ಒಪ್ಪಿಕೊಂಡಿದ್ದಾರೆ: ಚಲುವರಾಯಸ್ವಾಮಿ

ಕಲಬುರಗಿ, ಅಕ್ಟೋಬರ್‌ 03: ಜೆಡಿಎಸ್- ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಗೆ ಲಾಭ ಆಗುತ್ತೆ. ಮಾಜಿ ಪ್ರಧಾನಿ ಹೆಚ್‌ ಡಿ ದೇವೆಗೌಡರು ಯಾವತ್ತಾದ್ರು ಬಿಜೆಪಿ ಬಗ್ಗೆ ಒಲವು ತೋರಿಸಿದ್ರಾ ? ಮಗನ ಬಲವಂತ, ಮಗ ಕೊಡುವ ಹಿಂಸೆಯಿಂದ ದೇವೆಗೌಡರು ಮೈತ್ರಿಗೆ ಒಪ್ಪಿಕೊಂಡಿದ್ದಾರೆ ಎಂದು ಚಲುವರಾಮಸ್ವಾಮಿ ಹೇಳಿದರು

ಈ ಕುರಿತು ಮಂಗಳವಾರ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಣೆ ಬರಹ ಬರೆಯಲು ಎಚ್ ಡಿ ಕುಮಾರಸ್ವಾಮಿ ಆಗಲಿ, ಸಿ ಪಿ ಯೋಗೇಶ್ವರ್ ನಿಂದ ಸಾಧ್ಯವಿಲ್ಲ. ಹೀಗೆ ಮಾತಾಡಿ ಮಾತಾಡಿ ಯೋಗೇಶ್ವರ ಪರಿಸ್ಥಿತಿ ಈ ಮಟ್ಟಕ್ಕೆ ಬಂದಿದೆ ಎಂದು ಚಲುವರಾಮಸ್ವಾಮಿ ತಿಳಿಸಿದ್ದಾರೆ.

Hd Deve Gowda Have Agreed To The Alliance Under Duress Says Cheluvarayaswamy

ಸಂಕ್ರಾಂತಿ ನಂತರ ಸರ್ಕಾರ ಪತನ ಆಗುತ್ತೆ ಅನ್ನೋ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್‌ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ಸಿ ಪಿ ಯೋಗೇಶ್ವರ ಹಣೆ ಬರ ಅವರೇ ಬರೆಯೋಕೆ ಆಗಿಲ್ಲ. ಪ್ರಧಾನಿ ಮೋದಿ ಅವರು ಯೋಗೇಶ್ವರ ಕ್ಷೇತ್ರಕ್ಕೆ ಬಂದು ಬೆಂಬಲ ಮಾಡಿದ್ರು ಸೋತಿದ್ದಾನೆ. ಹಾಗಾಗಿ ಬೇರೆ ಅವರ ಹಣೆ ಬಹರ ಬರೆಯೋಕೆ ಯೋಗೇಶ್ವರ್‌ ಗೆ ಆಗುತ್ತಾ ? ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಸಿ ಪಿ ಯೋಗೇಶ್ವರ್‌ ಹೀಗೆ ಮಾತಾಡಿ ಮಾತಾಡಿ ಅವರ ಪರಿಸ್ಥಿತಿ ಈ ಮಟ್ಟಕ್ಕೆ ಆಗಿದೆ. ಕಾಂಗ್ರೆಸ್ ಹಣೆ ಬರಹ ಬರೆಯಲು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಆಗಲಿ, ಸಿ ಪಿ ಯೋಗೇಶ್ವರ್ ಗೆ ಸಾಧ್ಯವಿಲ್ಲ. ಇಡೀ ರಾಜ್ಯವನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸುತ್ತಾಡಿಸಿದ್ರು, ಆದರೆ, 60-65 ಸೀಟ್ ಗೆಲ್ಲುತ್ತೆ ಅಂತಾ ಅವ್ರು ಅಂದುಕೊಂಡಿರಲಿಲ್ಲ. ನಾವು ಜನರ ಆಶೀರ್ವಾದಿಂದ ಗೆದ್ದಿದ್ದೆವೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಗೆ ಮುಳುಗಿ ಹೋಗುವ ಪರಿಸ್ಥಿತಿ ಬಂದಿದೆ ಹಾಗಾಗಿ ಒಬ್ಬರ ಕೈ ಒಬ್ಬರು ಹಿಡಿದುಕೊಂಡಿದ್ದಾರೆ. ಅವರ ನಡವಳಿಕೆಯಿಂದ ಜೆಡಿಎಸ್ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ ಯಾವುದೇ ಕಾಲಕ್ಕೂ ಜೆಡಿಎಸ್ ಗೆ ಸಹಾಯ ಮಾಡುತ್ತಾ ಬಂದಿದೆ. ಆದರೆ, ಇವರು ಲಘುವಾಗಿ ಮಾತಾಡಬಾರದು ಎಂದು ಬಿಜೆಪಿ ಜೆಡಿಎಸ್ ನಾಯಕರ ವಿರುದ್ದ ಕಿಡಿಕಾರಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+