ದ್ವೇಷ ಭಾಷಣ ನಿಷೇಧ ಕಾಯ್ದೆ: ಸುಳ್ಳು ಮಾಹಿತಿ ಹಂಚಿದ ಪ್ರಿಯಾಂಕ್ ಖರ್ಗೆಗೆ ಶಿಕ್ಷೆಯಾಗುತ್ತದೆಯೇ: ಸಿ.ಟಿ ರವಿ ಪ್ರಶ್ನೆ
ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಡಿರುವ ಟ್ವೀಟ್ವೊಂದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾ ಕರ್ನಾಟಕ ಬಿಜೆಪಿ ಖಾತೆ ಹಾಗೂ ವಿವಿಧ ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ದ್ವೇಷ ಭಾಷಣ ನಿಷೇಧ ಕಾಯ್ದೆಯಡಿ ಸುಳ್ಳು ಮಾಹಿತಿ ಹಂಚಿದ ಪ್ರಿಯಾಂಕ್ ಖರ್ಗೆ ಅವರಿಗೆ ಶಿಕ್ಷೆಯಾಗುತ್ತದೆಯೇ ಎಂದು ಪ್ರಶ್ನೆ ಮಾಡಲಾಗಿದೆ.
ಈ ಸಂಬಂಧ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರು, ಇತ್ತೀಚೆಗೆ ಅತ್ಯಂತ ವಿವಾದ ತಲೆದೋರಿದ್ದ ದ್ವೇಷ ಭಾಷಣ ಕಾಯ್ದೆಯನ್ನು ಬೆಂಬಲಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ವತಃ ಎಐ ನಿರ್ಮಿತ ಫೇಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೈಲಿನಲ್ಲಿರುವ ಅತ್ಯಾಚಾರ ಆರೋಪಿ ಕುಲ್ದೀಪ್ ಸಿಂಗ್ ಸೆಂಗಾರ್ ಅವರು ಬಿಡುಗಡೆಯಾಗಿರುವಂತೆ, ಅವರನ್ನು ಬಿಜೆಪಿ ನಾಯಕರು ಸನ್ಮಾನಿಸುತ್ತಿರುವಂತೆ ತೋರಿಸುವ ಸುಳ್ಳು ಚಿತ್ರವನ್ನು ಸಚಿವರು ಹಾಕಿಕೊಂಡಿದ್ದಾರೆ. ಇದು ಸ್ವತಃ ಸಚಿವರೇ ಬೆಂಬಲಿಸಿದ್ದ ಕಾನೂನಿನ ಸ್ಪಷ್ಟ ಉಲ್ಲಂಘನೆ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಜನರನ್ನು ಹಾದಿ ತಪ್ಪಿಸುವ ಗುರಿ
ಪ್ರಿಯಾಂಕ್ ಖರ್ಗೆ ಅವರು ಫೇಕ್ ಚಿತ್ರವನ್ನು ಹಂಚಿಕೊಂಡಿರುವ ಉದ್ದೇಶ ಸ್ಪಷ್ಟವಾಗಿದೆ. ಅತ್ಯಾಚಾರಿ ವ್ಯಕ್ತಿಯನ್ನು ಬಿಜೆಪಿ ಸನ್ಮಾನಿಸಿದೆ ಎಂಬಂತೆ ಬಿಂಬಿಸಿ, ಜನರ ಮನಸ್ಸಿನಲ್ಲಿ ಬಿಜೆಪಿ ಕುರಿತು ಅಪಾರ್ಥ, ದ್ವೇಷ ಮೂಡಿಸುವುದು ಪ್ರಿಯಾಂಕ್ ಖರ್ಗೆಯವರ ಗುರಿಯಾಗಿತ್ತು. ಇದಕ್ಕಾಗಿ ಅವರು ಯಾವ ಮಟ್ಟಕ್ಕೆ ಇಳಿಯಲು ಬೇಕಾದರೂ ಸಿದ್ಧರಿದ್ದಾರೆ ಎಂದು ಸಿ.ಟಿ ರವಿ ಅವರು ದೂರಿದ್ದಾರೆ.
ಪ್ರಕರಣದ ಸತ್ಯಾಂಶ ಏನು?
ಕುಲ್ದೀಪ್ ಸೆಂಗಾರ್ಗೆ ಒಂದು ಪ್ರಕರಣದಲ್ಲಿ ಮಾತ್ರ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಆದರೆ, ಆತ ಜೈಲಿನಿಂದ ಬಿಡುಗಡೆಯಾಗಿಲ್ಲ. ಸಂತ್ರಸ್ತೆಯ ತಂದೆಯ ಹತ್ಯೆ ಪ್ರಕರಣದಲ್ಲಿ ಸೆಂಗಾರ್ ಇನ್ನೂ ಜೈಲಿನಲ್ಲೇ ಇದ್ದಾರೆ. ಈಗಾಗಲೇ ನೀಡಿರುವ ಜಾಮೀನಿಗೆ ತಡೆ ನೀಡಬೇಕು ಎಂದು ಸಿಬಿಐ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದೆ. ಇಷ್ಟು ದಿನ ಕೇಂದ್ರೀಯ ಸಂಸ್ಥೆಗಳು ಬಿಜೆಪಿಯ ಅಣತಿಗೆ ತಕ್ಕಂತೆ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದ ಪ್ರಿಯಾಂಕ್ ಖರ್ಗೆಯವರು ಸಿಬಿಐ ನಡೆಯನ್ನು ಗಮನಿಸಲೇ ಇಲ್ಲವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಮುಂದುವರಿದು ಕಾಂಗ್ರೆಸ್ ಸರ್ಕಾರ ಸ್ವತಃ ಹಠಕ್ಕೆ ಬಿದ್ದು ದ್ವೇಷ ಭಾಷಣ ಮತ್ತು ಸುಳ್ಳು ಮಾಹಿತಿ ನಿಯಂತ್ರಣ ಕಾಯ್ದೆ ಜಾರಿಗೆ ತಂದಿದೆ. ಈ ಕಾಯಿದೆಯ ಪ್ರಕಾರ, ಜನರ ಭಾವನೆಗಳನ್ನು ಕೆಣಕುವ, ಸುಳ್ಳು ಅಥವಾ ತಪ್ಪು ಮಾಹಿತಿ ಹಂಚಿಕೊಳ್ಳಲು ಹಂಚಿಕೊಳ್ಳುವ, ಎಐ ನಿರ್ಮಿತ ನಕಲಿ ಚಿತ್ರಗಳು ಮತ್ತು ದೃಶ್ಯಗಳನ್ನು ಹಂಚಿಕೊಳ್ಳುವುದು ಅಪರಾಧ.
ಸ್ವತಃ ಈ ಕಾಯ್ದೆಯ ಪ್ರಬಲ ಸಮರ್ಥಕರಾಗಿದ್ದ ಪ್ರಿಯಾಂಕ್ ಖರ್ಗೆಯವರಿಗೆ ಇದು ಅಪರಾಧ ಎನ್ನುವುದು ಅರಿವಿರಲಿಲ್ಲವೇ? ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಡವೇ. ಬಿಜೆಪಿ ನಿರಂತರವಾಗಿ ಈ ಕಾಯಿದೆ ವಾಕ್ ಸ್ವಾತಂತ್ರ್ಯಕ್ಕೂ ಧಕ್ಕೆ ತರಲಿದೆ ಎಂದಾಗ ಅದಕ್ಕೆ ಕಾಂಗ್ರೆಸ್ ನಾಯಕರು ಕಿವಿಗೊಡಲಿಲ್ಲ. ಈಗ ಸ್ವತಃ ಕಾಂಗ್ರೆಸ್ ನಾಯಕರು ಕಾನೂನು ಉಲ್ಲಂಘನೆ ಮಾಡಿರುವುದನ್ನು ಅದೇ ವಾಕ್ ಸ್ವಾತಂತ್ರ್ಯ ಎನ್ನುತ್ತೀರಾ ಎಂದು ಕೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ದ್ವಂದ್ವ ನೀತಿ ಇದರಲ್ಲಿ ಸ್ಪಷ್ಟವಾಗಿದೆ. ಬಿಜೆಪಿ ನಾಯಕರು ಏನಾದರೂ ಹೇಳಿಕೆ ನೀಡಿದ್ದರೆ ತಕ್ಷಣವೇ ಪ್ರಕರಣ ದಾಖಲಿಸಲು ಸರ್ಕಾರ ತುದಿಗಾಲಲ್ಲಿ ನಿಂತಿರುತ್ತದೆ. ಆದರೆ, ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರು ಕಾಯ್ದೆ ಉಲ್ಲಂಘಿಸಿದಾಗ ಮಾತ್ರ ಸರ್ಕಾರ ಜಾಣ ಕುರುಡು - ಜಾಣ ಕಿವುಡು ಕ್ರಮ ಅನುಸರಿಸುತ್ತದೆ. ಈ ಕಾಯಿದೆ ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೋ, ಅಥವಾ ಕಾಂಗ್ರೆಸ್ ವಿರೋಧಿಗಳನ್ನು ಹಣಿಯುವುದಕ್ಕೆ ಮಾತ್ರ ಬಳಕೆಯಾಗುತ್ತದೋ ಎನ್ನುವುದನ್ನು ಗೃಹ ಸಚಿವರಾದ ಡಾ. ಜಿ ಪರಮೇಶ್ವರ ಅವರು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತನ್ನ ಟ್ವಿಟರ್ ಖಾತೆಯಲ್ಲಿ ಸುಳ್ಳು ಮಾಹಿತಿ ಹಂಚಿಕೊಂಡಿದ್ದ ಪ್ರಿಯಾಂಕ್ ಖರ್ಗೆ, ವಿವಾದದ ರೂಪ ಪಡೆಯುತ್ತಿದ್ದಂತೆ ಅದನ್ನು ಅಳಿಸಿ ಸುಮ್ಮನೆ ಕುಳಿತಿದ್ದಾರೆ. ಆದರೆ, ಬಿಜೆಪಿಯ ಕುರಿತು ಅವಹೇಳನಕಾರಿ ಚಿತ್ರಣ ಮೂಡುವಂತೆ ಮಾಡಿರುವುದಕ್ಕೆ ಕನಿಷ್ಠ ಕ್ಷಮೆ, ವಿಷಾದ ವ್ಯಕ್ತಪಡಿಸುವ ಮನಸ್ಸೂ ಅವರಿಗಿಲ್ಲ. ಇದು ಕಾಂಗ್ರೆಸ್ಸಿನ ನೈತಿಕ ಅಧಃಪತನದ ಸಾಕ್ಷಿಯಷ್ಟೇ.
The self-proclaimed 'fact-checker' @PriyankKharge is caught spreading fake news!
— BJP Karnataka (@BJP4Karnataka) December 26, 2025
Despite holding the IT & BT portfolio, he circulated a malicious, AI-generated image to attack PM Shri @narendramodi and mislead the public about a court order.
𝐇𝐞 𝐬𝐡𝐚𝐦𝐞𝐟𝐮𝐥𝐥𝐲… pic.twitter.com/PMDIbmYKff
ಈ ಕಾಯ್ದೆ ಜಾರಿಗೆ ಬಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ಟೀಕಿಸಿದರೆ ಜನಸಾಮಾನ್ಯರನ್ನೂ ಬಂಧಿಸುವ ಕೆಲಸ ಸರ್ಕಾರ ಮಾಡಬಹುದು ಎಂದು ಬಿಜೆಪಿ ಹೇಳಿತ್ತು. ಸರ್ಕಾರ ಈಗ ಸಾಗುತ್ತಿರುವ ರೀತಿ ನೋಡಿದರೆ, ಇದು ಆ ಹಂತ ಮುಟ್ಟುವಂತೆ ಕಾಣುತ್ತಿದೆ. ಜನರು ನಿರೀಕ್ಷಿಸುವುದು ಎಲ್ಲರಿಗೂ ಸಮಾನ ನ್ಯಾಯ ಮತ್ತು ಹಕ್ಕೇ ಹೊರತು ಕಾಂಗ್ರೆಸ್ ಹಿತ ಕಾಯುವ ಕಾಯ್ದೆಗಳಲ್ಲ ಎಂದು ಅವರು ಹೇಳಿದ್ದಾರೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications