Get Updates
Get notified of breaking news, exclusive insights, and must-see stories!

ಗಮನಿಸಿ.. ಹಾಸನಾಂಬೆ ದರ್ಶನದ ಎಲ್ಲಾ ವಿವಿಐಪಿ ಪಾಸ್ ಹಾಗೂ ವಿಶೇಷ ಬಸ್ ಸಂಚಾರ ರದ್ದು!

ಹಾಸನ ಅಕ್ಟೋಬರ್ 31: ಹಾಸನಾಂಬೆ ದರ್ಶನದ ಎಲ್ಲಾ ಪಾಸ್‌ಗಳನ್ನು ಹಾಗೂ ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ ವಿಶೇಷ ಬಸ್ ಸಂಚಾರವನ್ನು ರದ್ದುಗೊಳಿಸಿ ದೇಗುಲದ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಸರತಿ ಸಾಲಿನಲ್ಲಿ ನಿಂತಿರೊ ಜನರನ್ನು ಹೊರತುಪಡಿಸಿ ಯಾವುದೇ ಪಾಸ್ ಬಳಸದಂತೆ ಹಾಸನಾಂಬೆ ದೇವಾಲಯ ಆಡಳಿತ ಅಧಿಕಾರಿ ಮಾರುತಿ ಆದೇಶ ಹೊರಡಿಸಿದ್ದಾರೆ.

ಇಲ್ಲಿನ ಆಡಳಿತ ವ್ಯವಸ್ಥೆ ವಿವಿಐಪಿ ಪಾಸ್‌ಗಳನ್ನು ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿದೆ. ಇದರಿಂದಾಗಿ ಸರತಿ ಸಾಲಿನಲ್ಲಿ ಬರುವ ಭಕ್ತರಿಗೆ ತೊಂದರೆಯಾಗಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಪಾಸ್‌ಗಳನ್ನು ರದ್ದುಗೊಳಿಸಿ ದೇವಸ್ಥಾನ ಮಂಡಳಿ ಪ್ರಾಯಶ್ಚಿತದ ಕ್ರಮ ಕೈಗೊಂಡಿದೆ.

Hasanambe Darshan VVIP pass and special bus service cancelled

ಹಾಸನಾಂಬೆ ದರ್ಶನಕ್ಕೆ ವಿವಿಐಪಿ ಪಾಸ್ ಪಡೆದು ಬಂದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು, ಸುಡು ಬಿಸಿಲಲ್ಲಿ ಬಳಲಿ ಬೆಂಡಾದರು. ಇತಿಮಿತಿ ಇಲ್ಲದೆ ಪಾಸ್ ಹಂಚಿಕೆ ಮಾಡಿದ್ದರಿಂದ ಭಕ್ತರು ಜಿಲ್ಲಾಡಳಿತ ಹಾಗೂ ರಾಜಕಾರಣಿಗಳನ್ನು ಶಪಿಸಿದ್ದಾರೆ. ವರ್ಷಕ್ಕೆ ಒಮ್ಮೆ ದರ್ಶನ ಕೊಡುವ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಹೀಗೆ ದೇವಸ್ಥಾನಕ್ಕೆ ಆಗಮಿಸುವ ಹೆಚ್ಚು ಜನ ಶಾಸಕರು, ಸಚಿವರು, ಅಧಿಕಾರಿಗಳಿಂದ ಶಿಫಾರಸು ಪತ್ರ ತರುವುದು ಪ್ರತಿವರ್ಷ ನಡೆಯುತ್ತದೆ. ಆದರೆ ಈ ಬಾರಿ ಇಂತಹ ಪಾಸ್‌ಗಳನ್ನು ಮೂವತ್ತು ಸಾವಿರಕ್ಕೂ ಹೆಚ್ಚು ಮುದ್ರಿಸಲಾಗಿದೆ ಎನ್ನಲಾಗುತ್ತದೆ. ಮತ್ತೊಂದು ಮೂಲದ ಪ್ರಕಾರ ಚುನಾವಣೆ ಇರುವುದರಿಂದ 75 ಸಾವಿರಕ್ಕೂ ಹೆಚ್ಚು ಪಾಸ್ ವಿತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಪಾಸ್‌ ಈ ಬಾರಿ ಭಕ್ತರ ಆಕ್ರೋಶಕ್ಕೆ ಗುರಿಯಾಗಿದೆ. ಇದರಿಂದ ಎಚ್ಚೆತ್ತುಕೊಂಡ ದೇವಸ್ಥಾನದ ಆಡಳಿತ ಮಂಡಳಿ ಪಾಸ್‌ಗಳನ್ನು ರದ್ದುಗೊಳಿಸಿದೆ.

Hasanambe Darshan VVIP pass and special bus service cancelled

ವಿವಿಐಪಿ ಪಾಸ್‌ ಪಡೆದು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ಹೈರಾಣಾಗಿ ವಾಪಸ್ ಬಂದವರ ಕಿರಿಕಿರಿ ಹೆಚ್ಚಾದ ಬೆನ್ನೆಲ್ಲೆ ಜನಸಾಮಾನ್ಯರು ಆಕ್ರೋಶಗೊಂಡಿದ್ದಾರೆ. ಪಾಸ್ ಪಡೆದು ಮುಂದೆ ಹೋಗಲು ಆಗದೆ ವಾಪಸ್ ಬರಲೂ ಆಗದೆ ಪೇಚಾಟಕ್ಕೆ ಸಿಲುಕಿ ಉಳಿದ ಭಕ್ತರಿಗೆ ತೊಂದರೆ ಉಂಟಾಗಿರುವ ಘಟನೆಗಳು ಹೆಚ್ಚಾದ ಬೆನ್ನಲ್ಲೇ ಪಾಸ್‌ಗಳನ್ನು ಇಂದು ದೇವಸ್ಥಾನ ಮಂಡಳಿ ರದ್ದುಗೊಳಿಸಿದೆ.

ಮತದಾರರನ್ನು ಓಲೈಸಲು ಜಿಲ್ಲಾಡಳಿತದ ಮೇಲೆ ಒತ್ತಡ ತಂದು ಮನಸೋಯಿಚ್ಚೆ ಪಾಸ್ ಪಡೆದು ಹಂಚಿದ್ದೇ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ. ವ್ಯಾಪಕ ಪ್ರಚಾರ ನೀಡಿ ಎಲ್ಲರನ್ನೂ ಆಹ್ವಾನಿಸಿದ್ದು ಹಾಗೂ ಇತಿಮಿತಿ ಇಲ್ಲದೆ ವಿವಿಐಪಿ ಪಾಸ್ ಹಂಚಿಕೆ ಮಾಡಿದ್ದೇ ಭಕ್ತಾದಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.

ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ ವಿಶೇಷ ಬಸ್ ಸಂಚಾರ ರದ್ದು

ಅಲ್ಲದೆ ಹಾಸನಾಂಬೆ ದರ್ಶನಕ್ಕೆ ನಿಯಂತ್ರಣಕ್ಕೆ ಸಿಗದಂತೆ ಜನರು ಆಗಮಿಸುತ್ತಿರುವುದರಿಂದ ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ ವಿಶೇಷ ಬಸ್ ಸಂಚಾರವನ್ನೂ ಸರ್ಕಾರ ರದ್ದು ಮಾಡಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಸಂಚರಿಸುತ್ತಿದ್ದ ಐದು ನೂರು ಬಸ್‌ಗಳ ಸಂಚಾರವನ್ನು ಸರ್ಕಾರ ರದ್ದು ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+