ಪದವಿ ಕಾಲೇಜುಗಳಿಗೆ 8 ಸಾವಿರ ಉಪನ್ಯಾಸಕರ ನೇಮಕ: ಡಾ. ಅಶ್ವಥ್ ನಾರಾಯಣ

ಬೆಂಗಳೂರು,

ಫೆ.
18:
ಉನ್ನತ
ಶಿಕ್ಷಣದಲ್ಲಿ
ಗುಣಮಟ್ಟ
ತರುವುದು
ಹಾಗೂ
ರಾಷ್ಟ್ರೀಯ
ಶಿಕ್ಷಣ
ನೀತಿಯ
ಜಾರಿ
ಹಿನ್ನಲೆಯಲ್ಲಿ
ಇನ್ನು
ಮುಂದೆ
ಆತಿಥಿ
ಉಪನ್ಯಾಸಕರೆಂಬ
ಪರಿಕಲ್ಪನೆಯೇ
ಇರದಂತೆ
8
ಸಾವಿರ
ಕಾಯಂ
ಉಪನ್ಯಾಸಕರ
ನೇಮಕಾತಿಗೆ
ಅನುಮತಿ
ನೀಡುವಂತೆ
ಕೋರಿ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರಿಗೆ
ಬೇಡಿಕೆ
ಸಲ್ಲಿಸಲಾಗಿದೆ
ಎಂದು
ಉನ್ನತ
ಶಿಕ್ಷಣ
ಸಚಿವ
ಡಾ.ಸಿ.ಎನ್.‌
ಅಶ್ವಥ್
ನಾರಾಯಣ
ಹೇಳಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ಮೈಸೂರು

ಜಿಲ್ಲೆಯ
ಕೆ.ಆರ್.
ನಗರದ
ಸರಕಾರಿ
ಮಹಿಳಾ
ಪ್ರಥಮ
ದರ್ಜೆ
ಕಾಲೇಜಿಗೆ
ಭೇಟಿ
ನೀಡಿದ
ನಂತರ
ಸುದ್ದಿಗಾರರ
ಜತೆ
ಮಾತನಾಡಿದ
ಅವರು;
ಉತ್ತಮ
ಕಲಿಕೆ,
ಬೋಧನೆಯು
ಶಿಕ್ಷಣ
ನೀತಿಯ
ಆಶಯ.
ಅದಕ್ಕೆ
ತಕ್ಕಂತೆ
ಗುಣಮಟ್ಟದ
ಬೋಧಕರನ್ನು
ನೇಮಕ
ಮಾಡಿಕೊಳ್ಳಲು
ಉದ್ದೇಶಿಸಲಾಗಿದೆ.
ಬಗ್ಗೆ
ಬಜೆಟ್
ಪೂರ್ವ
ಸಭೆಯಲ್ಲಿ
ಹಣಕಾಸು
ಖಾತೆಯನ್ನು
ಹೊಂದಿರುವ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರಿಗೆ
ಬೇಡಿಕೆ
ಸಲ್ಲಿಸಲಾಗಿದೆ
ಎಂದರು.

id='are-slot-2'
class='oiad
oi-axt
oiadv'>

ಅನುದಾನ ಹೆಚ್ಚಳಕ್ಕೆ

ಅನುದಾನ ಹೆಚ್ಚಳಕ್ಕೆ

ಉನ್ನತ ಶಿಕ್ಷಣ ಇಲಾಖೆಯಲ್ಲಿ ಮೂಲಸೌಕರ್ಯ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅನುದಾನ ಸಾಲುತ್ತಿಲ್ಲ. ಬಜೆಟ್‌ನಲ್ಲಿ ಹಂಚಿಕೆಯಾಗುವ ಒಟ್ಟು ಅನುದಾನದಲ್ಲಿ ಶೇ.88ರಷ್ಟು ಅನುದಾನ ವೇತನಕ್ಕೇ ಹೋಗುತ್ತಿದೆ. ಇದುವರೆಗೂ ಒಟ್ಟಾರೆ ಬಜೆಟ್‌ನಲ್ಲಿ ಶೇ.2ರಷ್ಟು ಅನುದಾನವನ್ನಷ್ಟೇ ಉನ್ನತ ಶಿಕ್ಷಣಕ್ಕೆ ನೀಡಲಾಗುತ್ತಿತ್ತು. ಈ ಪ್ರಮಾಣವನ್ನು ಶೇ.3.5ಕ್ಕೆ ಹೆಚ್ಚಿಸಬೇಕು ಎಂದು ಸಿಎಂ ಯಡಿಯೂರಪ್ಪ ಕೋರಲಾಗಿದೆ ಎಂದು ಡಾ. ಅಶ್ವಥ್ ನಾರಾಯಣ ಹೇಳಿದರು.

ಅತಿಥಿ ಉಪನ್ಯಾಸಕರು

ಅತಿಥಿ ಉಪನ್ಯಾಸಕರು

ಕಳೆದ ಶೈಕ್ಷಣಿಕ ವರ್ಷದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಅತಿಥಿ ಉಪನ್ಯಾಸಕರನ್ನು ಈ ವರ್ಷವೂ ಮುಂದುವರಿಸಲಾಗಿದೆ. ವೇತನ ಏರಿಕೆ, ಸೇವೆ ಕಾಯಂ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಅತಿಥಿ ಉಪನ್ಯಾಸಕರು ಮುಂದಿಟ್ಟಿದ್ದಾರೆ. ಆ ಬೇಡಿಕೆಗಳನ್ನು ಈಡೇರಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಗುಣಮಟ್ಟಕ್ಕೆ ಕ್ರಮ

ಗುಣಮಟ್ಟಕ್ಕೆ ಕ್ರಮ

ಸರಕಾರಿ ಸ್ವಾಮ್ಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಪದವಿ ಕಾಲೇಜುಗಳ ಗುಣಮಟ್ಟ ಹೆಚ್ಚಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸರಕಾರಿ ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಬರಬೇಕು. ನ್ಯಾಕ್‌ ಮಾನ್ಯತೆ ಸಿಗಬೇಕು. ಜತೆಗೆ; ಆರ್ಥಿಕ ಮತ್ತು ಶೈಕ್ಷಣಿಕ ಸ್ವಾಯತ್ತತೆ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

Recommended Video

    Amit Shah ಸವಾಲೆಸೆದ ಮಮತಾ ಬ್ಯಾನರ್ಜಿ, ಪ.ಬಂಗಾಳದಲ್ಲಿ ಮುಂದುವರೆದ ವಾಕ್‌ ಸಮರ | Oneindia Kannada
    2 ಕೋಟಿ ಅನುದಾನ

    2 ಕೋಟಿ ಅನುದಾನ

    ಕೆ.ಆರ್. ಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಹಿಳಾ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಕೆಲ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಶೈಕ್ಷಣಿಕ ವರ್ಷದಲ್ಲಿ ಎರಡೂ ಕಾಲೇಜುಗಳಿಗೆ 2 ಕೋಟಿ ರೂ. ಅನುದಾನ ನೀಡಲಾಗುವುದು. ಇನ್ನು ಹೆಚ್ಚಿನ ಅನುದಾನ ನೀಡಲು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

    ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ನೀಡಲಾಗಿದೆ. ಎಲ್ಲವನ್ನು ಪರಿಶೀಲನೆ ನಡೆಸಿದ ನಂತರ ಖಂಡಿತಾ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+