ಆ್ಯಂಬುಲೆನ್ಸ್ ನಲ್ಲಿ ಪಿಠೋಪಕರಣ ಸಾಗಿಸಿದ ಸರ್ಕಾರಿ ವೈದ್ಯ
ಕೊಪ್ಪಳ, ಸೆಪ್ಟೆಂಬರ್ 5: ದೇಶದಲ್ಲಿ ಅಗತ್ಯ ಸಂದರ್ಭಗಳಲ್ಲಿ ಆ್ಯಂಬುಲೆನ್ಸ್ ಸಿಗುವುದಿಲ್ಲ ಎಂಬ ಕೊರಗು ಇದ್ದೇ ಇದೆ. ಅದರಲ್ಲೂ ಹಳ್ಳಿಗಳಲ್ಲಿ ಆ್ಯಂಬುಲೆನ್ಸ್ ಸರಿಯಾದ ಸಮಯಕ್ಕೆ ಸಿಗುವುದೇ ಇಲ್ಲ.
ಆದರೆ, ಕೊಪ್ಪಳದ ಈ ಸರ್ಕಾರಿ ವೈದ್ಯ ಮಹಾಶಯ ರೋಗಿಗಳಿಗೆ ಸೇವೆ ನೀಡಲೆಂದು ಇರುವ ಆ್ಯಂಬುಲೆನ್ಸ್ ನಲ್ಲೇ ತನ್ನ ಕ್ಲಿನಿಕ್ ಗೆ ಬೇಕಾದ ಪೀಠೋಪಕರಣ ಮತ್ತು ಎಲ್.ಪಿ.ಜಿ ಸಿಲಿಂಡರ್ ಸಾಗಿಸಿದ್ದಾನೆ. ಸೋಮವಾರ ಈ ಘಟನೆ ಬೆಳಕಿಗೆ ಬಂದಿದೆ.

ರೋಗಿಗಳ ಸೇವೆಗೆ ಇರುವ ಆ್ಯಂಬುಲೆನ್ಸ್ ನ್ನು ವೈದ್ಯನೊಬ್ಬ ತನ್ನ ವೈಯಕ್ತಿಕ ಉಪಯೋಗಕ್ಕೆ ಬಳಸಿಕೊಂಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications