ಭಲಾ, ರಾಜಭವನಕ್ಕೆ 4 ಕೋಟಿ ಖರ್ಚು ಮಾಡಿದ ವಾಲಾ!
ಬೆಂಗಳೂರು, ಜೂ. 03 : ಕಚೇರಿ ನವೀಕರಣಕ್ಕೆ 40 ಲಕ್ಷ, ಆಪ್ತ ಕಾರ್ಯದರ್ಶಿ ಕಚೇರಿ ನವೀಕರಣಕ್ಕೆ 30 ಲಕ್ಷ, ನಿವಾಸ ರಿಪೇರಿಗೆ 20 ಲಕ್ಷ, ಅಡುಗೆ ಮನೆ, ಬಾತ್ ರೂಮ್ ರಿಪೇರಿಗೆ 50 ಲಕ್ಷ. ಹೀಗೆ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜ್ಯಕ್ಕೆ ಬಂದ 9 ತಿಂಗಳಿನಲ್ಲಿ ರಾಜಭವನದ ರಿಪೇರಿಗೆ 4 ಕೋಟಿ ರೂ. ಖರ್ಚು ಮಾಡಿದ್ದಾರೆ.
ಪಬ್ಲಿಕ್ ಟಿವಿ ರಾಜ್ಯಪಾಲ ವಜುಭಾಯಿ ವಾಲಾ ಅವರ ರಾಜಭವನದ ರಿಪೇರಿ ಖರ್ಚಿನ ಮಾಹಿತಿಯನ್ನು ದಾಖಲೆಗಳ ಸಮೇತ ಪ್ರಸಾರ ಮಾಡಿದೆ. ಸಾರ್ವಜನಿಕರ ಹಣವನ್ನು ನವೀಕರಣಕ್ಕೆ ಹೇಗೆ ಖರ್ಚು ಮಾಡಲಾಗಿದೆ ಎಂಬ ಮಾಹಿತಿಯನ್ನು ವಿವಿರವಾಗಿ ನೀಡಿದೆ.

ಗುಜರಾತ್ ಮೂಲದ ವಜುಭಾಯಿ ವಾಲಾ ಅವರು 2014ರ ಸೆಪ್ಟೆಂಬರ್ 1ರಂದು ಕರ್ನಾಟಕದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೇವಲ 9 ತಿಂಗಳಿನಲ್ಲಿ ಅವರು 4 ಕೋಟಿ ರೂ. ಹಣವನ್ನು ರಾಜಭವನದ ನವೀಕರಣಕ್ಕೆ ಖರ್ಚು ಮಾಡಿದ್ದಾರೆ. [ರಾಷ್ಟ್ರಗೀತೆ ವೇಳೆ ವೇದಿಕೆ ಬಿಟ್ಟಿಳಿದ ರಾಜ್ಯಪಾಲರು]
ಸರ್ಕಾರದ ಎಲ್ಲಾ ನಿರ್ಧಾರಗಳಿಗೆ ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲರೇ ಅಂತಿಮ ಅಂಕಿತ ಹಾಕುವುದರಿಂದ ಅವರು ಕೇಳಿದ್ದಕ್ಕೆಲ್ಲಾ ಸರ್ಕಾರ ಹಣ ಬಿಡುಗಡೆ ಮಾಡಿದೆ. ರಾಜ್ಯಪಾಲರ ವಿಮಾನ ಹಾರಾಟದ ಖರ್ಚು ಸಹ ಹೆಚ್ಚಾಗೇ ಇದ್ದು, ಅದನ್ನು ಪಬ್ಲಿಕ್ ಟಿವಿ ಬಹಿರಂಗ ಮಾಡಿದೆ. [ರಾಜ್ಯಪಾಲರು ಹಿಂದಿಯಲ್ಲೇಕೆ ಭಾಷಣ ಮಾಡಬೇಕು?]
ಯಾವುದಕ್ಕೆ ಎಷ್ಟು ವೆಚ್ಚ : ನವೀಕರಣ ಕಾಮಗಾರಿಗೆ 3 ಕೋಟಿ, ವಿದ್ಯುತ್ ಕಾಮಗಾರಿಗೆ 1 ಕೋಟಿ ಸೇರಿ ರಾಜಭವನದ ನವೀಕರಣಕ್ಕೆ ಇದುವರೆಗೂ ಒಟ್ಟು 4 ಕೋಟಿ ರೂ.ವೆಚ್ಚ ಮಾಡಲಾಗಿದೆ.
ಯಾವುದಕ್ಕೆ ಎಷ್ಟು ಖರ್ಚು?
* ರಾಜ್ಯಪಾಲರ ಕಚೇರಿ ನವೀಕರಣಕ್ಕೆ 40 ಲಕ್ಷ
* ರಾಜ್ಯಪಾಲರ ಆಪ್ತಕಾರ್ಯದರ್ಶಿ ಕಚೇರಿ ನವೀಕರಣಕ್ಕೆ 30 ಲಕ್ಷ
* ರಾಜಭವನದ ನಿವಾಸ ರಿಪೇರಿಗೆ 20 ಲಕ್ಷ
* ಅಡುಗೆ ಮನೆ, ಬಾತ್ ರೂಮ್ ರಿಪೇರಿಗೆ 50 ಲಕ್ಷ [ಮಾಹಿತಿ : ಪಬ್ಲಿಕ್ ಟಿವಿ]
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications