ಸರ್ಕಾರಿ ಬಸ್ ಪ್ರಯಾಣಿಕರು ಟಿಕೆಟ್ ದರ ಏರಿಕೆಗೆ ಸಜ್ಜಾಗಿ
ಬೆಂಗಳೂರು, ಸೆಪ್ಟೆಂಬರ್ 04: ಸತತವಾಗಿ ಡೀಸೆಲ್ ದರ ಏರುತ್ತಿರುವ ಕಾರಣ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಟಿಕೆಟ್ ದರ ಏರಿಸಲಾಗುವುದು ಎಂದು ಸಾರಿಗೆ ಸಚಿವ ತಮ್ಮಣ್ಣ ಇಂದು ಹೇಳಿದರು.
ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಟಿಕೆಟ್ ದರ ಏರಿಕೆ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಸ್ತಾವನೆಗೆ ಅಂಕಿತ ಬಿದ್ದ ಕೂಡಲೇ ಬೆಲೆ ಏರಿಸಲಾಗುವುದು ಎಂದರು.
ಬೆಂಗಳೂರು ವಿಮಾನ ನಿಲ್ದಾಣದಿಂದ ತಿರುಪತಿಗೆ ಫ್ಲೈ ಬಸ್ ಆರಂಭ
ಕಳೆದ ಎರಡು ತಿಂಗಳ ಹಿಂದೆಯೇ 18% ಟಿಕೆಟ್ ದರ ಏರಿಸಲೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಡೀಸೆಲ್ ದರ ಏರುಮುಖವಾಗಿಯೇ ಹೋಗುತ್ತಿರುವ ಕಾರಣ ಬೇರೆ ವಿಧಿಯಿಲ್ಲದೆ ಟಿಕೆಟ್ ದರ ಏರಿಸಲಬೇಕಿದೆ ಎಂದು ಅವರು ಹೇಳಿದರು.
ಡೀಸೆಲ್ ದರ ಏರಿಕೆಯಿಂದಾಗಿ ಕೆಎಸ್ಆರ್ಟಿಸಿಗೆ ಮೂರು ತಿಂಗಳ ಅವಧಿಯಲ್ಲಿ 186 ಕೋಟಿ ನಷ್ಟವಾಗಿದೆ. ಹಾಗಾಗಿ ಸಾರಿಗೆ ಸಂಸ್ಥೆಗೂ ನಷ್ಟವಾಗದ ಹಾಗೆ, ಹಾಗೂ ಪ್ರಯಾಣಿಕರಿಗೂ ಹೊರೆ ಆಗದಂತೆ ಪ್ರಯಾಣ ದರ ಏರಿಸಲಾಗುವುದು ಎಂದು ತಮ್ಮಣ್ಣ ಅವರು ಮಾಹಿತಿ ನೀಡಿದರು.
ಗಣೇಶ ಚತುರ್ಥಿಗೆ ಈಗಲೇ ಬಸ್ಗಳು ಫುಲ್: ಟಿಕೆಟ್ ಸೋಲ್ಡ್ ಔಟ್!
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಇನ್ನೊಂದು ವಾರದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದರು.
ಭೀಕರ ಮಳೆ ಹಿನ್ನೆಲೆ: ಕೆಎಸ್ಆರ್ ಟಿಸಿ ಲಿಖಿತ ಪರೀಕ್ಷೆ ಮುಂದೂಡಿಕೆ
ದೂರದ ಮಾರ್ಗಗಳಿಗೆ ಸ್ಲೀಪರ್ ಕೋಚ್ನ ಬೇಡಿಕೆ ಹೆಚ್ಚಿರುವ ಕಾರಣ ಹೊಸದಾಗಿ 40 ಸ್ಲೀಪರ್ ಕೋಚ್ ಬಸ್ಸುಗಳನ್ನು ಖರೀದಿಸಲಾಗುವುದು. ರಜಾ ದಿನಗಳಲ್ಲಿ ದೂರದ ಮಾರ್ಗಗಳಿಗೆ ಸ್ಲೀಪರ್ ಕೋಚ್ ಬಸ್ಸುಗಳನ್ನು ಹೆಚ್ಚಿಗೆ ಓಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.