ಬೆಂಗಳೂರು-ಮೈಸೂರು ಹೆದ್ದಾರಿಗೆ ಟೋಲ್ ಕಟ್ಟಲು ಸಜ್ಜಾಗಿ
ಬೆಂಗಳೂರು, ಸೆ.9 : ಮುಂದಿನವಾರ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಸಮೀಕ್ಷೆಯನ್ನು ಆರಂಭಿಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಾದ ಬಳಿಕ ಬಳಕೆದಾರರಿಂದ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ
ಸೋಮವಾರ
ಮಾತನಾಡಿದ
ಸಚಿವ
ಎಚ್.ಸಿ.ಮಹದೇವಪ್ಪ
ಅವರು,
ಬೆಂಗಳೂರು-
ಮೈಸೂರು
ರಾಜ್ಯ
ಹೆದ್ದಾರಿಯನ್ನು
ರಾಷ್ಟ್ರೀಯ
ಹೆದ್ದಾರಿಯನ್ನಾಗಿ
ಮೇಲ್ದರ್ಜೆಗೇರಿಸಿ
ಕೇಂದ್ರ
ಭೂಸಾರಿಗೆ
ಇಲಾಖೆ
ಆದೇಶ
ಹೊರಡಿಸಿದೆ
ಎಂದರು.
3,000
ಕೋಟಿ
ರೂ.
ವೆಚ್ಚದಲ್ಲಿ
ಈ
ಮಾರ್ಗದಲ್ಲಿ
ಆರು
ಪಥದ
ರಸ್ತೆ
ನಿರ್ಮಾಣ
ಕಾಮಗಾರಿ
ಆರಂಭಿಸುವ
ಕುರಿತು
ಸಮೀಕ್ಷೆ
ನಡೆಸಲು
ಒಪ್ಪಿಗೆ
ದೊರೆತಿದ್ದು,
ಮುಂದಿನ
ವಾರ
ಸಮೀಕ್ಷೆ
ಕಾರ್ಯವನ್ನು
ಆರಂಭಿಸಲಾಗುತ್ತದೆ
ಎಂದು
ಹೇಳಿದರು.
ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡ ಬಳಿಕ, ಹೆದ್ದಾರಿ ಬಳಕೆದಾರರಿಂದ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತದೆ. ಆದರೆ, ಸರ್ವೀಸ್ ರಸ್ತೆ ಬಳಕೆಗೆ ಶುಲ್ಕ ಇರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಶುಲ್ಕ ನೀತಿ ಪ್ರಕಾರ ಶುಲ್ಕ ನಿಗದಿ ಮಾಡಲಾಗುತ್ತದೆ ಎಂದರು. [ಆರು ಪಥವಾಗಲಿದೆ ಬೆಂಗಳೂರು-ಮೈಸೂರು ಹೆದ್ದಾರಿ]
ಸಮೀಕ್ಷೆಗಾಗಿ 2.75 ಕೋಟಿ : ಬೆಂಗಳೂರು-ಮೈಸೂರು ಹೆದ್ದಾರಿಯ ಸಮೀಕ್ಷೆಯನ್ನು ಬೆಂಗಳೂರಿನ ಸೀಕಾನ್ ಕಂಪೆನಿ ಮಾಡಲಿದ್ದು ಇದಕ್ಕಾಗಿ ರೂ 2.75 ಕೋಟಿ ಬಿಡುಗಡೆ ಮಾಡಲಾಗಿದೆ. ಎರಡು ತಿಂಗಳೊಳಗೆ ಪ್ರಾಥಮಿಕ ಹಂತದ ಸಮೀಕ್ಷೆ ಪೂರ್ಣಗೊಳ್ಳಲಿದೆ. ನಂತರದ ನಾಲ್ಕು ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧಗೊಳ್ಳಲಿದ್ದು, ಆರು ತಿಂಗಳ ಅವಧಿಯಲ್ಲಿ ವರದಿಗೆ ಒಪ್ಪಿಗೆ ಪಡೆದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಇದೆ ಎಂದರು. [ರಾಷ್ಟೀಯ ಹೆದ್ದಾರಿಯಾಗಲಿರುವ ರಾಜ್ಯದ 7 ರಸ್ತೆಗಳು]
123 ಕಿ.ಮೀ. ಮಾರ್ಗದಲ್ಲಿ ಆರು ಪಥದ ಹೆದ್ದಾರಿ ಮತ್ತು ಸರ್ವೀಸ್ ರೋಡ್ ನಿರ್ಮಿಸಲಾಗುತ್ತದೆ. 2015ರಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದ್ದು, 2018ರಲ್ಲಿ ಬಳಕೆಗೆ ಮುಕ್ತಗೊಳಿಸುವ ಗುರಿ ಇದೆ. ಈ ಮಾರ್ಗದಲ್ಲಿ ಬಿಡದಿ ಮತ್ತು ಶ್ರೀರಂಗಪಟ್ಟಣದಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ. ರಾಮನಗರ, ಚನ್ನಪಟ್ಟಣ, ಮಂಡ್ಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.