ಪೊರಕೆ ಹಿಡಿದು ಮೈದಾನ ಸ್ವಚ್ಛಗೊಳಿಸಿದ ಕೊಪ್ಪಳ ಗವಿಮಠದ ಶ್ರೀಗಳು
ಜಾತ್ರೆ ಹಿನ್ನೆಲೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಅಸ್ವಚ್ಛವಾಗಿದ್ದ ಜಾತ್ರೆ ಮೈದಾನ ಸ್ವಚ್ಛಗೊಳಿಸಿದ ಗವಿಸಿದ್ದೇಶ್ವರ ಶ್ರೀ.
ಕೊಪ್ಪಳ, ಜನವರಿ 20: ಸ್ವಚ್ಛತೆಗೆ ಆದ್ಯತೆ ನೀಡುವ ಇಲ್ಲಿನ ಗವಿ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಶುಕ್ರವಾರ ತಾವೇ ಖುದ್ದಾಗಿ ಪೊರಕೆ ಹಿಡಿದು ಜಾತ್ರೆ ಮೈದಾನವನ್ನು ಸ್ವಚ್ಛಗೊಳಿಸಿದ್ದಾರೆ.
ಬುಧವಾರವೇ ಈ ಸ್ವಚ್ಛತೆಯ ಅಭಿಯಾನ ನಡೆಸಿದ ಸ್ವಾಮೀಜಿಯ ಫೋಟೋಗಳನ್ನು ಭಕ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಶುಕ್ರವಾರದ ಹೊತ್ತಿಗೆ ಅವು ವೈರಲ್ ಆಗಿವೆ.
ಮಠದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಜಾತ್ರೆಯು ಕಳೆಗಟ್ಟಲಿದೆ. ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ಜಾತ್ರೆಯ ಹಿನ್ನೆಲೆಯಲ್ಲಿ ಜಾತ್ರೆ ಮೈದಾನದಲ್ಲಿ ಹಲವಾರು ಸಾಂಸ್ಕೃತಿಕ ಉತ್ಸವಗಳು ಜರುಗುತ್ತಿವೆ. ಜಾತ್ರೆ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಅಂಗಡಿಗಳಿಗೂ ಸ್ಥಳಾವಕಾಶ ಕಲ್ಪಿಸಲಾಗಿತ್ತು. ಆದರೆ, ಶುಕ್ರವಾರ ಬೆಳಗ್ಗೆ ವೇಳೆಗೆ ಇಡೀ ಮೈದಾನ ಕೊಳಕಿನಿಂದ ತುಂಬಿ ಹೋಗಿತ್ತು.

ಇದನ್ನು ಗಮನಿಸಿದ ಸ್ವಾಮೀಜಿ ತಾವೇ ಮೈದಾನಕ್ಕಿಳಿದು ಸ್ವಚ್ಛಗೊಳಿಸಲು ಮುಂದಾದರು. ಹಲವಾರು ಭಕ್ತರು ತಕ್ಷಣವೇ ಆಗಮಿಸಿ ಸ್ವಾಮಿಜಿಯ ಕೆಲಸವನ್ನು ತಾವು ವಹಿಸಿಕೊಳ್ಳಲು ಮುಂದಾದರೂ ವಿನಮ್ರವಾಗಿ ಅವರ ಮನವಿಗಳನ್ನು ತಿರಸ್ಕರಿಸಿದ ಸ್ವಾಮೀಜಿ, ತಾವೇ ಖುದ್ದಾಗಿ ಕಸು ಗುಡಿಸಿ ಹತ್ತಿರದಲ್ಲಿದ್ದ ಕಸದ ಟ್ರ್ಯಾಕ್ಟರ್ ಗೆ ತುಂಬಲು ಆರಂಭಿಸಿದರು.
ಇದರಿಂದಾಗಿ ನಾಚಿದ ಅಂಗಡಿಗಾರರು ತಾವೂ ಸ್ವಾಮೀಜಿಗೆ ಕೈ ಜೋಡಿಸಿದರು. ತರಾತುರಿಯಿಂದ ಗಲ್ಲಾ ಪೆಟ್ಟಿಗೆ ಬಿಟ್ಟಿಳಿದು ಬಂದು, ತಾವೂ ಕೈಜೋಡಿಸಿದರು. ಜಾತ್ರೆಗೆ ಬಂದಿದ್ದ ಭಕ್ತಾದಿಗಳೂ ಕಸ ಎತ್ತಿದರು. ಸ್ವಾಮೀಜಿಯ ಜೊತೆಗೆ ಬಂದಿದ್ದ ಒಬ್ಬಿಬ್ಬರು ಗಣ್ಯರು, ಸ್ವಾಮೀಜಿಯೇ ಪೊರಕೆ ಹಿಡಿದಿದ್ದು ಕಂಡು ತಾವೂ ಕಸ ಎತ್ತಲು ಶುರು ಮಾಡಿದರು.
ಕೆಲವೇ ನಿಮಿಷಗಳಲ್ಲಿ ಬೃಹತ್ ಜಾತ್ರೆ ಮೈದಾನದ ಪ್ರತಿಯೊಂದು ಮೂಲೆಯೂ ಸ್ವಚ್ಛವಾಯಿತು. ಆಡದೇ ಮಾಡುವವನು ರೂಢಿಯೊಳಗುತ್ತಮನು ಎಂಬುದನ್ನು ಶ್ರೀಗಳು ಸಾಧಿಸಿ ತೋರಿಸಿದರು.
(ಚಿತ್ರ ಕೃಪೆ: ಪ್ರಕಾಶ ಕಂದಕೂರ)
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications