ಪ್ರತಾಪ್ ಗೌಡ ಯಾರ ವಶದಲ್ಲಿದ್ರು ಶೀಘ್ರವೇ ಬಹಿರಂಗ: ಡಿಕೆಶಿ
Recommended Video

ಬೆಂಗಳೂರು, ಮೇ 19: ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಇಬ್ಬರೂ ಕಾಂಗ್ರೆಸ್ ಜತೆಗೇ ಇರುತ್ತಾರೆ. ಇವರಿಬ್ಬರಿಗೆ ಯಾರು ಆಮಿಷವೊಡ್ಡಿದ್ದರು, ಯಾರು ಅವರನ್ನು ಹಿಡಿದಿಟ್ಟರು ಎಂಬುದು ನಂತರ ಬಹಿರಂಗಪಡಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಪ್ರತಾಪ್ ಗೌಡ ಪಾಟೀಲ್ ಬಂದಿದ್ದಾರೆ, ಆನಂದ್ ಸಿಂಗ್ ಬರುತ್ತಿದ್ದಾರೆ, ಪ್ರತಾಪ್ ಗೌಡ ಪಾಟೀಲ್ ಹಾಗೂ ಆನಂದ್ ಸಿಂಗ್ ಯಾರು ಅಪಹರಿಸಿದ್ದರು ಎಂದು ನಾನು ಹೇಳಲಾರೆ. ನನ್ನ ಬಾಯಿಂದ ಕೇಳಬೇಡಿ, ಎಲ್ಲರಿಗೂ ಗೊತ್ತು ಇದು ಯಾರ ಕೈವಾಡವೆಂದು ಎಂದು ಡಿಕೆ ಶಿವಕುಮಾರ್ ಅವರು ವಿಧಾನಸೌಧದ ಬಾಗಿಲ ಬಳಿ ನಿಂತು ಡಿಕೆ ಶಿವಕುಮಾರ್ ಹೇಳಿದರು.

ಪೊಲೀಸರ ಭದ್ರತೆಯೊಂದಿಗೆ ವಿಧಾನ ಸೌಧ ತಲುಪಿದ ಪ್ರತಾಪ್ ಗೌಡ ಪಾಟೀಲ್, ಕೆಂಗಲ್ ಹನುಮಂತಯ್ಯ ಬಾಗಿಲಿನ ಬಳಿ ಬಂದು ಕಾರಿನಿಂದ ಇಳಿದ ಪಾಟೀಲ್ರನ್ನು ಒಳಗೆ ಕರೆದೊಯ್ಯಲು ಪೊಲೀಸರು ಬರುತ್ತಿದ್ದಂತೆ, ಮಾರ್ಗಮಧ್ಯದಲ್ಲಿ ತಡೆದು ಅವರ ಜೇಬಿನೊಳಗೆ ಚೀಟಿ ತುರುಕಿದರು.
#WATCH: Dramatic visuals of the moment when Congress MLA Pratap Gowda Patil who was said to be missing, entered Vidhana Soudha. #KarnatakaFloorTest pic.twitter.com/XINBGZvped
— ANI (@ANI) May 19, 2018
ಈ ಚೀಟಿ ವಿಪ್ ಜಾರಿ ಮಾಡಿರುವ ಚೀಟಿಯಾಗಿತ್ತು. ನಂತರ ಪ್ರತಾಪ್ ಗೌಡ ಅವರನ್ನು ಒಳಗೆ ಕರೆದೊಯ್ದು ಊಟ ಕೊಡಿಸಲಾಯಿತು.
Bengaluru: Congress MLA Pratap Gowda Patil having lunch at Vidhana Soudha, Congress's DK Suresh and Dinesh Gundu Rao present with him. pic.twitter.com/dZwx9zFhKa
— ANI (@ANI) May 19, 2018
ಇದಾದ ಬಳಿಕ ಆನಂದ್ ಸಿಂಗ್ ಅವರಿಗೆ ಕರೆ ಮಾಡಿ ಕರೆಸಿಕೊಂಡ ಡಿಕೆ ಶಿವಕುಮಾರ್ ಅವರ ಹೆಗಲ ಮೇಲೆ ಕೈ ಹಾಕಿಕೊಂಡು ಒಳಗೆ ಕರೆದೊಯ್ದಿದ್ದಾರೆ,












Click it and Unblock the Notifications