ಶುರುವಾಯ್ತು ಕುಡುಕರ ಸಂಘದ ರಿಜಿಸ್ಟ್ರೇಷನ್, ನೀವು ಮಾಡಿಸಿದ್ರಾ?
ಕೆಲವು ದಿನಗಳಿಂದ ಕುಡುಕರ ವಿಚಾರ ಕರ್ನಾಟಕದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಕುಡುಕರ ಸಂಘದ ಬಗ್ಗೆ ವಿಪರೀತ ಕುತೂಹಲ ಜನರಲ್ಲಿ ಬೆಳೆದಿದೆ. ಹೀಗಿದ್ದಾಗ, 'ಅಖಿಲ ಕರ್ನಾಟಕ ಕುಡುಕರ ಸಂಘ'ದ ರಿಜಿಸ್ಟ್ರೇಷನ್ ಅಂದ್ರೆ ನೋಂದಣಿ ಪ್ರಕ್ರಿಯೆಯೂ ಶುರುವಾಗಿದೆ ಅಂತೆ. ಹಾಗಾದರೆ ನೀವು ಈ ಸಂಘಕ್ಕೆ ನೋಂದಣಿ ಮಾಡಿಸಿದ್ದೀರಾ? ಇದೀಗ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಕುಡುಕರ ಸಂಘದ ಅಪ್ಲಿಕೇಷನ್ ಏನನ್ನ ಹೇಳುತ್ತಿದೆ?
ಕುಡುಕರು ಕೆಲವು ದಿನಗಳಿಂದ ಹಲವು ಬೇಡಿಕೆ ಇಡುತ್ತಾ ಬಂದಿದ್ದಾರೆ. ಅದರಲ್ಲೂ ಇತ್ತೀಚೆಗೆ ಕುಡುಕರ ಸಂಘದ ಡಿಮ್ಯಾಂಡ್ ಫುಲ್ ವೈರಲ್ ಆಗಿತ್ತು. ಹಾಗೇ ಸಚಿವರು ಕೂಡ ಕುಡುಕರ ಸಂಘದ ಬೇಡಿಕೆಗಳನ್ನ ನೋಡಿ ಬೆಚ್ಚಿಬಿದ್ದಿದ್ದರು. ಇಷ್ಟು ಸಾಲದು ಎನ್ನುವಂತೆ ಹೊಸದಾಗಿ ಕುಡುಕರ ಸಂಘದ ಅಪ್ಲಿಕೇಷನ್, ಅರ್ಥಾತ್ ಅರ್ಜಿ ಒಂದು ವೈರಲ್ ಆಗುತ್ತಿದೆ. ಕುಡುಕರ ಸಂಘಕ್ಕೆ ಸೇರಲು ಈ ಮೂಲಕ ಆಹ್ವಾನ ನೀಡಲಾಗಿದೆ ಎಂಬ ವದಂತಿ ದಟ್ಟವಾಗಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದೆ. ಹಾಗಾದ್ರೆ 'ಅಖಿಲ ಕರ್ನಾಟಕ ಕುಡುಕರ ಸಂಘ' ಅರ್ಜಿ ಹೇಗಿದೆ? ಮುಂದೆ ಓದಿ.

ಕುಡುಕರ ಸಂಘಕ್ಕೆ ಸೇರಲು ಏನು ಮಾಡಬೇಕು?
ಅಂದಹಾಗೆ ಈಗ ವೈರಲ್ ಆಗುತ್ತಿರುವ ಅಪ್ಲಿಕೇಷನ್ನಲ್ಲಿ, 'ಅಖಿಲ ಕರ್ನಾಟಕ ಕುಡುಕರ ಸಂಘ' ಎಂದು ಮೇಲೆ ದೊಡ್ಡದಾಗಿ ಬರೆಯಲಾಗಿದೆ. ಅದರ ಕೆಳಗಡೆ, 'ಡಿಸೆಂಬರ್ 31ರ 'ಕುಡುಕರ ದಿನಾಚರಣೆ' ಅಂಗವಾಗಿ ಪಾರ್ಟಿ ಅರ್ಜಿ' ಎಂದು ಬರೆಯಲಾಗಿದೆ. ಹಾಗೇ ಈ ಅಪ್ಲಿಕೇಷನ್ ಅಂದ್ರೆ ಅರ್ಜಿಗೆ 'ಫಾರ್ಮ್ ನಂ. 30 & 60' ಎಂದು ಹೆಸರು ಕೊಡಲಾಗಿದೆ. ಈ ಮೂಲಕ ಆರಂಭವಾಗುವ ಅರ್ಜಿಯಲ್ಲಿ ಫೋಟೋ ಅಂಟಿಸೋದಕ್ಕೂ ಜಾಗ ಬಿಟ್ಟಿದ್ದು ವಿಶೇಷ ಎನ್ನಬಹುದು.
ಕುಡುಕರು ಏನೆಲ್ಲಾ ಮಾಹಿತಿ ನೀಡಬೇಕು?
ಹಾಗೇ ಈ ಅರ್ಜಿಯಲ್ಲಿ ಮಾಹಿತಿ ನೀಡುವವರು ತಮ್ಮ ಸಂಪೂರ್ಣ ಹೆಸರನ್ನು ತಿಳಿಸಬೇಕು ಎಂದು ಕೋರಲಾಗಿದೆ. ಮನೆ ವಿಳಾಸ, ಮನೆಯ ದೂರವಾಣಿ ಸಂಖ್ಯೆ, ಮದ್ಯದ ಪ್ರಕಾರನ ಅಂದ್ರೆ ಯಾವ ಬ್ರ್ಯಾಂಡ್ ಅಂತ ತಿಳಿಸಬೇಕಾಗಿದೆ. ಹಾಗೇ, ಯಾವುದರ ಜೊತೆಗೆ ಮಿಕ್ಸಿಂಗ್ ಮಾಡ್ತಾರೆ ಅನ್ನೋದನ್ನೂ ತಿಳಿಸಬೇಕಂತೆ. ಆ ಪ್ರಕಾರ, ನೀರು, ಸೋಡ ಹಾಗೂ ಕೋಕ್ ಆಪ್ಷನ್ ನೀಡಲಾಗಿದೆ ಮದ್ಯ ಪ್ರಿಯರಿಗೆ.
ಸ್ನ್ಯಾಕ್ಸ್ಗೆ ಏನು ಬೇಕಾಗುತ್ತೆ ಹೇಳಿ?
ಈ ಮಧ್ಯೆ ಕುಡಿಯುವಾಗ ಸ್ನ್ಯಾಕ್ಸ್ಗೆ ಏನ್ ಬೇಕು? ಅಂತಲೂ ಅರ್ಜಿಯಲ್ಲಿ ತಿಳಿಸಬೇಕಿದೆ. ಹಾಗೂ ಕುಡಿಯಲು ಬರುವವರು ವೆಜ್ ಅಥವಾ ನಾನ್ ವೆಜ್? ಅನ್ನೋದನ್ನು ತಿಳಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಹಾಗೇ ತಾಯಿ ಅಥವಾ ಪತ್ನಿ ಪರ್ಮಿಷನ್ ಪಡೆದು ಬಂದಿದ್ದೀರಾ? ಎಂದು ತಿಳಿಸಬೇಕು. ಹಾಗೇ ಯಾರು ಪರ್ಮಿಷನ್ ಕೊಟ್ಟಿರುತ್ತಾರೋ ಅವರ ಸೈನ್ ಕೂಡ ಇರಬೇಕಂತೆ!
ಒಟ್ನಲ್ಲಿ ಈ ಅರ್ಜಿ ನಿಜವೋ ಅಥವಾ ಟ್ರೋಲ್ ಪೇಜ್ಗಳು ತಮಾಷೆಗೆ ಮಾಡಿರುವುದೋ ಗೊತ್ತಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಅಪ್ಲಿಕೇಷನ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೇ ಕುಡುಕರ ಸಂಘದ ವಿಚಾರ ಕೂಡ ಎಲ್ಲೆಡೆ ಹಬ್ಬುತ್ತಿದೆ. ಹೊಸ ವರ್ಷ ಹತ್ತಿರ ಬಂದ ಹಿನ್ನೆಲೆ ಕುಡುಕರು ಅಥವಾ ಮದ್ಯ ಪ್ರಿಯರು ಈ ಅಪ್ಲಿಕೇಷನ್ ಶೇರ್ ಮಾಡಿ ನಸುನಗೆ ಬೀರುತ್ತಿದ್ದಾರೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್











Click it and Unblock the Notifications