ಈ ಗುತ್ತಿಗೆ ನೌಕರರಿಗೂ ಇಎಸ್ಐ ಅನ್ವಯ: ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು, ಆಗಸ್ಟ್ 16: ಗುತ್ತಿಗೆ ನೌಕರರಿಗೆ ಅನುಕೂಲ ಆಗುವಂತೆ ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ. ಕಾರ್ಖಾನೆ ಆವರಣದಲ್ಲಿ ಅದೇ ಸಂಸ್ಥೆಗೆ ಸಂಬಂಧಿತ ಪೂರಕ ಕಾರ್ಯಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುವ ಕಾರ್ಮಿಕರಿಗೂ ಇಎಸ್ಐ (ನೌಕರರ ರಾಜ್ಯ ವಿಮಾ) ಅನ್ವಯ ಆಗಲಿದೆ ಎಂದು ಆದೇಶದಲ್ಲಿ ತಿಳಿಸಿದೆ.
ನೌಕರರ ರಾಜ್ಯ ವಿಮಾ ಇಎಸ್ಐ ಕಾಯ್ದೆ ಸೆಕ್ಷನ್ 2(6) ಅಡಿಯಲ್ಲಿ ನೌಕರ ಎಂದರೆ ಮುಖ್ಯ ಉದ್ಯೋಗದಾತ ನೇರವಾಗಿ ನೇಮಮ ಮಾಡಿಕೊಂಡವರನ್ನು ಅಷ್ಟೇ ಅಲ್ಲದೆ, ಕಾರ್ಖಾನೆಯ ಇತರೆ ಕಾರ್ಯಗಳಿಗೆ ಗುತ್ತಿಗೆದಾರರ ಮೂಲಕ ನೇಮಿಕ ಮಾಡಿಕೊಂಡ ಕಾರ್ಮಿಕರನ್ನು ಒಳಗೊಂಡಿರುತ್ತದೆ.

ಆದ್ದರಿಂದ ಕಾರ್ಖಾನೆ ಕಾರ್ಯಗಳಿಗೆ ಗುತ್ತಿಗೆದಾರರ ಮೂಲಕ ನೇಮಕ ಆದವರು ಇಎಸ್ಐ ಕಾಯ್ದೆಗೆ ಒಳಪಡಲಿದ್ದಾರೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ. ಕಾರ್ಮಿಕರಿಗೆ ಇಎಸ್ಐ ಪಾವತಿಸದ ಮೆಸೆಸ್ ಸನ್ಸೇರಾ ಇಂಜಿನಿಯರಿಂಗ್ ಕಂಪನಿಗೆ ವಿಧಿಸಿದ್ದ ದಂಡದ ಮೊತ್ತ ಕಡಿಮೆ ಮಾಡಿದ್ದ ಇಎಸ್ಐ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿದ್ದಾರೆ.
ಇನ್ನು ಇಎಸ್ಐ ಕಾರ್ಪೊರೇಷನ್ ಸಹಾಯಕ ನಿರ್ದೇಶಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ಏಕ ಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ. ಇಎಸ್ಐ ಕಾರ್ಪೊರೇಷನ್ ವಿಧಿಸಿದ ಮೊತ್ತ ಕಾನೂನಿನ ಅನ್ವಯ ಸಮರ್ಥ ಆಗಿದ್ದು, 13,52,825 ರೂಪಾಯಿಗಳನ್ನು ಮುಂದಿನ 8 ವಾರದಲ್ಲಿ ಪಾವತಿ ಮಾಡುವಂತೆ ಕಂಪನಿಗೆ ಸೂಚಿಸಿದೆ.
ಪ್ರಕರಣದಲ್ಲಿ ಗುತ್ತಿಗೆದಾರರ ಮೂಲಕ ನಿರ್ಮಾಣ ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ಇಎಸ್ಐ ಕಾಯ್ದೆ ಒಳಪಡುವುದಿಲ್ಲ ಎಂಬ ವಾದವನ್ನು ಒಪ್ಪಲು ಆಗುವುದಿಲ್ಲ. ಕಾರ್ಖಾನೆ ವಿಸ್ತರಣೆ, ಕಾರ್ಯಚರಣೆಯ ನಿರ್ವಹಣೆ ಕಾರ್ಯಗಳು ಉತ್ಪಾದನಾ ಘಟಕದ ನಿರ್ವಹಣೆಯಿಂದ ಪ್ರತ್ಯೇಕ ಆಗಿಲ್ಲ. ಈ ಕಾರ್ಯಗಳಲ್ಲಿ ಭಾಗಯಾಗುವ ಕಾರ್ಮಿಕರೂ ಕೂಡ ಕಾರ್ಖಾನೆಯ ದಕ್ಷತೆಯ ಅವಿಭಾಜ್ಯ ಅಂಗ ಆಗಿರಲಿದ್ದಾರೆ ಎಂದು ತಿಳಿಸಿದೆ.
ಅಷ್ಟೇ ಅಲ್ಲದೆ, ಗುತ್ತಿಗೆ ಆಧಾರದ ಕಾರ್ಮಿಕರು ಪಾವತಿ ಮಾಡಿರುವ ಕುರಿತಂತೆ ಅಗತ್ಯ ವಿವರಗಳನ್ನು ಒದಗಿಸಿಲ್ಲ. ಆದ್ದರಿಂದ ಕೆಲಸದ ಸ್ವರೂಪವನ್ನು ಆಧರಿಸಿ ವೇತನ ಸೇರಿ ಎಲ್ಲಾ ಆಯಾಮಗಳಲ್ಲಿ ಮೌಲ್ಯಮಾಪನ ಮಾಡಿ ಶೇಕಡ 25 ರಷ್ಟು ಪಾವತಿ ಮಾಡಲು ಅಂದಾಜು ಮಾಡಲಾಗಿದೆ. ಇದರಲ್ಲಿ ಯಾವುದೇ ದೋಷ ಕಂಡುಬರುತ್ತಿಲ್ಲ. ಮೊತ್ತವನ್ನು ಕಡಿಮೆ ಮಾಡಿರುವ ಇಎಸ್ಐ ನ್ಯಾಯಾಲಯದ ಕ್ರಮ ದೋಷದಿಂದ ಕೂಡಿದೆ.
ಆದ್ದರಿಂದ ಕಾನೂನು ಸಮರ್ಥನೆ ಕೂಡ ಇಲ್ಲ. ಇದೊಂದು ಉದ್ಯೋಗದಾತರು ದಾಖಲೆಗಳನ್ನು ಒದಗಿಸದೆ, ಇರುವುದು ಮತ್ತು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ನೀಡುವಂತಹ ಅಪಾಯಕಾರಿ ನಿದರ್ಶನ ಆಗಲಿದೆ. ಅದನ್ನು ಒಪ್ಪಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಉದ್ಯೋಗಿಗಳ ಅನಾರೋಗ್ಯ, ಹೆರಿಗೆ, ಕರ್ತ್ಯವದಲ್ಲಿ ಇದ್ದಾಗ ಆಗುವ ಅನಾಹುತಗಳಿಂದ ಉಂಟಾಗುವ ಸಮಸ್ಯೆಗಳು, ಆಕಸ್ಮಿಕವಾಗಿ ಎದುರಾಗುವಂತಹ ತೊಂದರೆಗಳಿಗೊಳಗಾದ ವ್ಯಕ್ತಿ ಮತ್ತು ಅವರ ಕುಟುಂಬಸ್ಥರಿಗೆ ವೈದ್ಯಕೀಯವಾಗಿ ಸಹಕಾರಿ ಆಗಲು ಇಎಸ್ಐ ಕಾಯ್ದೆಯನ್ನ ಜಾರಿ ಮಾಡಿಲಾಗಿದೆ. ಇದೊಂದು ಸಮಾಜ ಕಲ್ಯಾಣಕ್ಕೆ ಜಾರಿ ಮಾಡಿರುವ ಕಾಯ್ದೆ ಆಗಿದೆ. ಈ ಕಾಯ್ದೆಯನ್ನು ಕಲ್ಯಾಣ ಕಾನೂನಿನ ನಿಯಮಗಳು ಫಲಾನುಭವಿಗಳಿಗೆ ನೆರವಾಗಲು ಅರ್ಥೈಸಿಕೊಳ್ಳಬೇಕೇ ಹೊರತು ಅದರ ಉದ್ದೇಶವನ್ನು ವಿಫಲಗೊಳಿಸುವಂತದಲ್ಲ ಎಂದು ಕೋರ್ಟ್ ಆದೇಶದಲ್ಲಿ ಹೇಳಿದೆ.
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ












Click it and Unblock the Notifications