Get Updates
Get notified of breaking news, exclusive insights, and must-see stories!

Dr. Suresh Hanagavadi Profile: ಪದ್ಮಶ್ರೀ ಪುರಸ್ಕೃತ ಕನ್ನಡಿಗ ಡಾ. ಸುರೇಶ್ ಹನಗವಾಡಿ ಯಾರು, ಹಿನ್ನೆಲೆ - ಸಾಧನೆ ವಿವರ

Dr. Suresh Hanagavadi Profile: 2026ನೇ ಸಾಲಿನ ಪದ್ಮಶ್ರೀ ಪ್ರಕಟವಾಗಿದ್ದು, ಈ ಬಾರಿ ಮೂವರು ಕನ್ನಡಿಗರು ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಲ್ಲಿ ಡಾ. ಸುರೇಶ್ ಹನಗವಾಡಿ ಅವರು ಸಹ ಒಬ್ಬರು. ಡಾ. ಸುರೇಶ್ ಹನಗವಾಡಿ ಅವರು ಕರ್ನಾಟಕದ ಪ್ರಸಿದ್ಧ ವೈದ್ಯರು, ಹಿಮೋಫಿಲಿಯಾ (ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ ಕಾಯಿಲೆ / Hemophilia) ರೋಗದ ಕುರಿತು ಜಾಗೃತಿ ಮೂಡಿಸುತ್ತಿರುವ ಸಮಾಜ ಸೇವಕರು. ಡಾ. ಸುರೇಶ್ ಹನಗವಾಡಿ ಅವರು ಸಾಹಿತಿ ಆಗಿಯೂ ಚಿರಪರಿಚಿತರು.

ಡಾ. ಸುರೇಶ್ ಹನಗವಾಡಿ ಅವರು ದಾವಣಗೆರೆಯ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನಲ್ಲಿ ರೋಗಶಾಸ್ತ್ರ (Pathology) ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ದಾವಣಗೆರೆಯಲ್ಲಿ ಹಿಮೋಫಿಲಿಯಾ ಸೊಸೈಟಿಯನ್ನು ಸ್ಥಾಪಿಸುವ ಮೂಲಕ ರಕ್ತಸ್ರಾವದ ಕಾಯಿಲೆಯಿಂದ ಬಳಲುತ್ತಿರುವ ಸಾವಿರಾರು ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಮೂಲಕ ಸಾವಿರಾರು ಜನರಿಗೆ ಆಶಾಕಿರಣವಾಗಿದ್ದಾರೆ.

Dr Suresh Hanagawadi Profile Who Is Padma Shri Awardee Kannadiga His Background Achievements and Social Service

ವೈದ್ಯಕೀಯ ವೃತ್ತಿಯ ಜೊತೆಗೆ ಡಾ. ಸುರೇಶ್ ಅವರು ಉತ್ತಮ ಬರಹಗಾರರು. ವಿಜ್ಞಾನ ಮತ್ತು ವೈದ್ಯಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ವಿಶೇಷವೆಂದರೆ ಇವರು ನಾಟಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ. ಇವರ ಸಮಾಜ ಸೇವೆಗಳನ್ನು ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿಗಳು ಸಂದಿವೆ.

ಡಾ. ಸುರೇಶ್ ಹನಗವಾಡಿ ಅವರು ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದ್ದ ಕುಟುಂಬದಲ್ಲಿ ಜನಿಸಿದರು ಮತ್ತು ಅವರು ಆರಂಭದಲ್ಲಿಯೇ ಹಿಮೋಫಿಲಿಯಾ ರೋಗದ ಕಟುರ ವಾಸ್ತವಗಳನ್ನು ಎದುರಿಸಿದ್ದರು. ಹಿಮೋಫಿಲಿಯಾದಿಂದ ಬಳಲುತ್ತಿದ್ದ ಅವರ ಮಾವ, ಸಕಾಲಿಕ ವೈದ್ಯಕೀಯ ಚಿಕಿತ್ಸೆ ಸಿಗದೆ ಮಾರಣಾಂತಿಕ ರಮೃತಪಟ್ಟಿದ್ದರು. ಈ ಆಘಾತಕಾರಿ ಅನುಭವವು ಡಾ. ಸುರೇಶ್ ಅವರನ್ನು ವೈದ್ಯಕೀಯ ವೃತ್ತಿಜೀವನ ಆಯ್ಕೆ ಮಾಡಿಕೊಳ್ಳುವಂತೆ ಮಾಡಿತು. ಬೇರೆ ಯಾರೂ ಅಂತಹ ದುರಂತವನ್ನು ಎದುರಿಸಬಾರದು ಎನ್ನುವ ಕಾರಣಕ್ಕೆ ವೈದ್ಯಕೀಯ ಕ್ಷೇತ್ರವನ್ನು ಸುರೇಶ್ ಅವರು ಆಯ್ಕೆ ಮಾಡಿಕೊಂಡರು.

ರಕ್ತಸ್ರಾವ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉತ್ತಮ ಚಿಕಿತ್ಸೆ ನೀಡುವುದರಲ್ಲಿ ಡಾ. ಸುರೇಶ್ ಅವರು ನಿಪುಣರಾಗಿದ್ದಾರೆ. 1989ರಲ್ಲಿ ಹಿಮೋಫಿಲಿಯಾ ಹೊಂದಿರುವ ವ್ಯಕ್ತಿಗಳಿಗೆ ಚಿಕಿತ್ಸೆ, ಶಿಕ್ಷಣ ಮತ್ತು ಸೇವೆ ನೀಡುವ ಉದ್ದೇಶದಿಂದ ಅವರು ಕರ್ನಾಟಕ ಹಿಮೋಫಿಲಿಯಾ ಸೊಸೈಟಿ (ಕೆಎಚ್‌ಎಸ್) ಅನ್ನು ಸ್ಥಾಪಿಸಿದರು. ದುಬಾರಿ ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದೆ ಇರುವವರಿಗೆ ಸರ್ಕಾರದ ನೆರವನ್ನು ಒದಗಿಸುವಲ್ಲಿ ಇವರ ಪಾತ್ರವು ಪ್ರಮುಖವಾಗಿದೆ. ಅಲ್ಲದೇ ರಕ್ತಸ್ರಾವ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ನೀಡುತ್ತಿರುವ ಸೇವೆಯು ಕರ್ನಾಟಕವನ್ನು ಭಾರತದಾದ್ಯಂತ ಹಿಮೋಫಿಲಿಯಾ ಆರೈಕೆಗೆ ಮಾದರಿಯನ್ನಾಗಿ ಮಾಡಿದೆ.

ಡಾ. ಸುರೇಶ್ ಅವರು ಕರುಣಾಮಯಿ ವೈದ್ಯರಾಗಿ ಗುರುತಿಸಿಕೊಂಡಿದ್ದಾರೆ. ರೋಗಿಗಳಿಗೆ ಉಚಿತ ಸಮಾಲೋಚನೆಗಳು ಮತ್ತು ಸೇವೆಗಳನ್ನು ಒದಗಿಸುತ್ತಿದ್ದಾರೆ. ವ್ಯಾಪಕವಾದ ಸಂಶೋಧನೆ ಮತ್ತು ಜಾಗೃತಿ ಅಭಿಯಾನಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಮುಖಾಂಶ

ಕ್ಷೇತ್ರ: ವೈದ್ಯಕೀಯ (ರೋಗಶಾಸ್ತ್ರ), ಸಮಾಜ ಸೇವೆ, ಸಾಹಿತ್ಯ

ವಿಶೇಷ ಸಾಧನೆ: ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಸ್ಥಾಪನೆ (1989)

ಪ್ರಶಸ್ತಿಗಳು: ಪದ್ಮಶ್ರೀ (2026), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಮೂಲ ಊರು: ಹನಗವಾಡಿ, ದಾವಣಗೆರೆ ಜಿಲ್ಲೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+