ಕಳ್ಳರಿಂದ ಹತ್ಯೆಯಾದ ಎಸ್ಐ ಜಗದೀಶ್ ಪರಿಚಯ
ಬೆಂಗಳೂರು, ಅಕ್ಟೋಬರ್ 16 : ಬೈಕ್ ಕದ್ದು ಪರಾರಿಯಾಗುತ್ತಿದ್ದ ಅಪ್ಪ-ಮಗನನ್ನು ಹಿಡಿಯಲು ಹೋದ ದೊಡ್ಡಬಳ್ಳಾಪುರದ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜಗದೀಶ್ ಅವರನ್ನು ಹತ್ಯೆ ಮಾಡಲಾಗಿದೆ. ನೆಲಮಂಗಲದ ಗ್ರಾಫೈಟ್ ಫ್ಯಾಕ್ಟರಿ ಬಳಿ ಶುಕ್ರವಾರ ಈ ಘಟನೆ ನಡೆದಿದೆ.
'ಮನೆಗೆ ಊಟಕ್ಕೆ ಬರುತ್ತೇನೆ' ಎಂದು ಅಮ್ಮನಿಗೆ ಕರೆ ಮಾಡಿದ್ದ ಜಗದೀಶ್ (33) ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಅಪ್ಪ-ಮಗ ಸೇರಿ ಡ್ರ್ಯಾಗರ್ನಿಂದ ಜಗದೀಶ್ ಅವರ ಎದೆಗೆ ಚುಚ್ಚಿ ಹತ್ಯೆ ಮಾಡಿದ್ದಾರೆ. ಕರ್ತವ್ಯದಲ್ಲಿದ್ದಾಗಲೇ ಕಳ್ಳರನ್ನು ಹಿಡಿಯುವ ಕಾರ್ಯಾಚರಣೆ ವೇಳೆ ಜಗದೀಶ್ ವೀರ ಮರಣವನ್ನಪ್ಪಿದ್ದಾರೆ. [ದೊಡ್ಡಬಳ್ಳಾಪುರ ಎಸ್ ಐ ಹತ್ಯೆ]
ಪೇದೆಯಾಗಿ
ಪೊಲೀಸ್
ಇಲಾಖೆಗೆ
ಸೇರಿದ್ದ
ಜಗದೀಶ್
ಅವರು
ಸೂಲಿಬೆಲೆ
ಠಾಣೆಯಲ್ಲಿ
ಕರ್ತವ್ಯವನ್ನು
ಆರಂಭಿಸಿದ್ದರು.
2009ರಲ್ಲಿ
ಸಬ್
ಇನ್ಸ್ಪೆಕ್ಟರ್
ಪರೀಕ್ಷೆ
ಬರೆದು
ಉತ್ತೀರ್ಣಗೊಂಡಿದ್ದರು.
ಜಗದೀಶ್
ಅವರ
ಕಿರು
ಪರಿಚಯ
ಇಲ್ಲಿದೆ.
*
1982
ಫೆಬ್ರವರಿ
10ರಂದು
ಜನನ
*
ನೆಲಮಂಗಲ
ತಾಲೂಕಿನ
ಮಲ್ಲಾಪುರದವರು
*
ಪೊಲೀಸ್
ಪೇದೆಯಾಗಿ
ಇಲಾಖೆಗೆ
ಸೇರ್ಪಡೆ
*
ಸೂಲಿಬೆಲೆ
ಠಾಣೆಯಲ್ಲಿ
ಪೇದೆಯಾಗಿ
ಕಾರ್ಯ
ನಿರ್ವಹಣೆ
*
2009ರಲ್ಲಿ
ಸಬ್
ಇನ್ಸ್ಪೆಕ್ಟರ್
ಪರೀಕ್ಷೆ
ಬರೆದು
ಉತ್ತೀರ್ಣ
*
2012ರಲ್ಲಿ
ಕೋಲಾರ
ಮೂಲದ
ರಮ್ಯಾ
ಅವರೊಂದಿಗೆ
ವಿವಾಹ
*
ಜಗದೀಶ್,
ರಮ್ಯಾ
ದಂಪತಿಗೆ
ಇಬ್ಬರು
ಮಕ್ಕಳು
*
ಪೀಣ್ಯ
ದಾಸರಹಳ್ಳಿಯಲ್ಲಿ
ವಾಸವಾಗಿದ್ದ
ಜಗದೀಶ್