ಕುರುಬರಿಗೂ ವೈಷ್ಣವ ದೀಕ್ಷೆ: ಪೇಜಾವರ ಶ್ರೀ
ಬಾಗಲಕೋಟೆ,ಅ.25: ಕುರುಬರು ವೈಷ್ಣವ ಧರ್ಮಕ್ಕೆ ಬರುವುದಾದರೆ ಸ್ವಾಗತ. ಅವರಿಗೂ ವೈಷ್ಣವ ದೀಕ್ಷೆ ನೀಡಲು ತಾವು ಸಿದ್ಧ ಎಂದು ಪೇಜಾವರ ಶ್ರೀಗಳು ಶುಕ್ರವಾರ ಹೇಳಿದ್ದಾರೆ.
ಕುರುಬರು ಹಾಗೂ ಬ್ರಾಹ್ಮಣರನ್ನು ಪ್ರತ್ಯೇಲಿಸಲು ಸಾಧ್ಯವಿಲ್ಲ. ಕನಕದಾಸರು ಕೃಷ್ಣನ ಭಕ್ತರಾಗಿದ್ದರು. ಅಲ್ಲದೆ ಅವರು ವೈಷ್ಣವ ಧರ್ಮ ಪಾಲಿಸುತ್ತಿದ್ದರು ಎಂದು ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು ಹೇಳಿದ್ದಾರೆ.
ಕನಕನ ಕಿಂಡಿ ಹಾಗೂ ನವಗ್ರಹ ಕಿಂಡೆ ಬೇರೆ ಬೇರೆಯಲ್ಲ. ಈ ಕುರಿತು ಕೆಲವು ಬುದ್ಧಿಜೀವಿಗಳು ಇಲ್ಲಸಲ್ಲದ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಪೇಜಾವರ ಶ್ರೀಗಳು, ಕುರುಬರು ವೈಷ್ಣವ ಧರ್ಮಕ್ಕೆ ಬಂದರೆ ಸ್ವಾಗತ, ಅವರಿಗೂ ತಾವು ವೈಷ್ಣವ ದೀಕ್ಷೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.
100 ನಿಮಿಷದಲ್ಲಿ 8 ಕಿಮೀ ಪಾದ ಬೆಳೆಸಿದ ಶ್ರೀಪಾದರು:

ಧಾರವಾಡದ ಮಂತ್ರಾಲಯ ಪಾದಯಾತ್ರೆ ಸಂಘದ ಗೌರವಾಧ್ಯಕ್ಷರಾದ ಪೇಜಾವರ ಶ್ರೀಗಳು ಸಂಘದ ವತಿಯಿಂದ ನಡೆಯುವ ವಾರ್ಷಿಕ ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅ. 24ರ ಬೆಳಗ್ಗೆ 7.40ರಿಂದ 9.20ರವರೆಗೆ ಗಂಗಾವತಿಯಿಂದ ಹೊರವಲಯದ ಪಂಚವಟಿವರೆಗೆ ಶ್ರೀಪಾದರು ಪಾದ ಬೆಳೆಸಿದರು.
ಸಂಘದ ಸದಸ್ಯರು ಪ್ರತಿವರ್ಷ ಮಂತ್ರಾಲಯಕ್ಕೆ ಪಾದಯಾತ್ರೆ ನಡೆಸುತ್ತಿದ್ದು ಪ್ರತಿ ವರ್ಷ ಶ್ರೀಪಾದರು ಸಾಂಕೇತಿಕವಾಗಿ ಹೆಜ್ಜೆಹಾಕಿ ಆಶೀರ್ವದಿಸುತ್ತಿದ್ದರು. ಆದರೆ ಈ ಬಾರಿ 8 ಕಿಮೀ ಸ್ವತಃ ತಾವೂ ಹೆಜ್ಜೆ ಹಾಕಿದರು. ಮರದ ಹಾವಿಗೆ (ಮರದ ಪಾದುಕೆ) ಹಾಕಿಕೊಂಡರೆ ವೇಗವಾಗಿ ನಡೆಯುವುದಕ್ಕೆ ತೊಡಕಾಗುತ್ತದೆ ಎಂದು ಬರಗಾಲಿನಲ್ಲಿ ಶ್ರೀಪಾದರು ನಡೆದರು. ಈ ವರ್ಷ 160 ಮಂದಿ ರಾಯರ ಭಕ್ತರು ಅ. 29ರಂದು ಮಂತ್ರಾಲಯಕ್ಕೆ ಹೋಗುತ್ತಿದ್ದಾರೆ. (ಚಿತ್ರ)












Click it and Unblock the Notifications