ಧರ್ಮಸ್ಥಳ ಹಿಂದೂ ದೇವಾಲಯವಾ? ಅಥವಾ ಜೈನ ದೇವಾಲಯವಾ?

ಭಾರತದ ಕರ್ನಾಟಕದ ಧರ್ಮಸ್ಥಳ ಎಂಬ ಪ್ರಶಾಂತ ಪಟ್ಟಣದಲ್ಲಿರುವ ಧರ್ಮಸ್ಥಳ ದೇವಾಲಯವು ಶಿವನ ಒಂದು ರೂಪವಾದ ಮಂಜುನಾಥನಿಗೆ ಅರ್ಪಿತವಾದ ಪೂಜ್ಯ ಯಾತ್ರಾ ಸ್ಥಳವಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಶಿವ ಭಕ್ತರು ಭೇಟಿ ನೀಡುವ ದೇಗುಲ ಎಂದರೆ ಅದು ಧರ್ಮಸ್ಥಳ. ಧರ್ಮಸ್ಥಳದ ಕುರಿತು ಸಾಕಷ್ಟು ನಂಬಿಕೆಯನ್ನ ಭಕ್ತಾಧಿಗಳು ಹೊಂದಿದ್ದಾರೆ. ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದರೆ ಜೀವನದಲ್ಲಿ ಧನಾತ್ಮಕ ಶಕ್ತಿ ಪ್ರಾಪ್ತಿಯಾಗುತ್ತದೆ. ಮುಂದಿನ ಜೀವನದಲ್ಲಿ ಸಕಾರಾತ್ಮಕ ಅಂಶಗಳೇ ಇರುತ್ತದೆ. ಎಷ್ಟೇ ಸಮಸ್ಯೆಗಳು ಬಂದರು ಎಲ್ಲಾವೂ ನಿವಾರಣೆಯಾಗುತ್ತದೆ ಎಂದು ಭಕ್ತರು ನಂಬಿದ್ದಾರೆ.

ರಾಜ್ಯದ ಅತ್ಯಂತ ಪುರಾತನ ದೇವಾಲಯ ಇದಾಗಿದ್ದು. . ಧರ್ಮಸ್ಥಳ ದೇಗುಲವವನ್ನು 800 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಜೈನ ಬಂಟ ಸಮುದಾಯವು ಈ ದೇಗುಲವನ್ನು ಆರಂಭಿಸಿದ್ದು,ಈ ಪುಣ್ಯ ಕ್ಷೇತ್ರ ಧರ್ಮಸ್ಥಳವನ್ನು ಧರ್ಮ ನೆಲೆಸಿದ ಸ್ಥಳವೆಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಸಾಕ್ಷಾತ್‌ ಪರಶಿವನೇ ನೆಲೆಸಿದ್ದಾನೆಂದು ಹೇಳಲಾಗುತ್ತದೆ. ಈ ದೇವಾಲಯದ ಗರ್ಭಗುಡಿಯ ಒಳಗೆ ವೈಷ್ಣವ ಪೂಜಾರಿಗಳನ್ನು ಹೊರತುಪಡಿಸಿ ಇನ್ಯಾರಿಗೂ ಅವಕಾಶವಿಲ್ಲ.

Dharmasthala Temple Hindu or Jain History Deity and Religious Significance

ಧರ್ಮಸ್ಥಳ ದೇವಾಲಯದ ಮೂಲವು 800 ವರ್ಷಗಳಷ್ಟು ಹಿಂದಿನದು. ಒಂದು ದಂತಕಥೆಯ ಪ್ರಕಾರ, ಈ ಪ್ರದೇಶವನ್ನು ಕುಡುಮ ಎಂದು ಕರೆಯಲಾಗುತ್ತಿತ್ತು ಮತ್ತು ಇದನ್ನು ಜೈನ ಮುಖ್ಯಸ್ಥರಾದ ಹೆಗ್ಗಡೆ ಕುಟುಂಬವು ಆಳುತ್ತಿತ್ತು. ಸ್ಥಳೀಯ ದೇವತೆ ಅಣ್ಣಪ್ಪ ಸ್ವಾಮಿ, ಮುಖ್ಯಸ್ಥನಿಗೆ ಶಿವಲಿಂಗವನ್ನು ಸ್ಥಾಪಿಸಲು ಮಾರ್ಗದರ್ಶನ ನೀಡಿದ್ದಾನೆಂದು ನಂಬಲಾಗಿದೆ. ಜೈನ ಆಡಳಿತದ ಹೊರತಾಗಿಯೂ, ದೇವಾಲಯವು ವೈದಿಕ ಹಿಂದೂ ಸಂಪ್ರದಾಯಗಳನ್ನು ಎತ್ತಿಹಿಡಿಯುತ್ತದೆ. ದೇವಾಲಯದ ವಾಸ್ತುಶಿಲ್ಪವು ಜೈನ ಮತ್ತು ದ್ರಾವಿಡ ಶೈಲಿಗಳ ಸಾಮರಸ್ಯದ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ.

ಇನ್ನೂ ಈ ಧರ್ಮಸ್ಥಳ ಹಿಂದೂ ದೇವಾಲಯವಾ ಅಥವಾ ಜೈನ ದೇವಾಲಯವಾ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದ್ದು, ಜೈನ ಬಂಟ ಸಮುದಾಯವು ಈ ದೇಗುಲವನ್ನು ಆರಂಭಿಸಿದ್ದು, ಈಗ ಹೆಗ್ಗಡೆ ಅವರ ಕುಟುಂಬವು ಈ ದೇವಸ್ಥಾನವನ್ನು ನಿರ್ವಹಿಸುತ್ತಿದೆ. ವೈಷ್ಣವ ಪೂಜಾರಿಗಳು ಶಿವನನ್ನು ಇಲ್ಲಿ ಪೂಜಿಸುವುದರಿಂದ ಇದು ಶಿವನ ಅಚ್ಚುಮೆಚ್ಚಿನ ಸ್ಥಳ ಎಂಬುದೂ ಭಕ್ತರ ನಂಬಿಕೆ.

ದಂತಕಥೆಯ ಪ್ರಕಾರ ಜೈನ ಧರ್ಮದ ಮುಖ್ಯಸ್ಥ ಬಿರ್ಮಣ್ಣ ಪೆರ್ಗಡೆ ಮತ್ತು ಅವರ ಪತ್ನಿ ಅಮ್ಮು ಬಲ್ಲತಿ ಅವರು ನೆಲ್ಲಾಡಿ ಬೀಡು ಎಂಬ ಮನೆಯಲ್ಲಿ ವಾಸಿಸುತ್ತಿದ್ದರು. ಪೆರ್ಗಡೆ ಅವರ ಕನಸಿನಲ್ಲಿ ಧರ್ಮ ದೈವಗಳು ಕಾಣಿಸಿಕೊಂಡರು ಮತ್ತು ನೆಲ್ಲಾಡಿ ಬೀಡುವಿನಲ್ಲಿ ಧರ್ಮ ದೈವಗಳನ್ನು ಸ್ಥಾಪಿಸುವಂತೆ ಸೂಚನೆ ನೀಡಿದರು. ಅದರಂತೆ ಪೆರ್ಗಡೆ ಅವರು ಸ್ಥಾಪಿಸಿದರು. ಧರ್ಮಸ್ಥಳವು ಪೆರ್ಗಡೆ ಕುಟುಂಬದ 20 ತಲೆಮಾರುಗಳಿಂದ ನಿರ್ವಹಿಸಲ್ಪಡುವ ಧರ್ಮ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಮೀಸಲಾದ ಸ್ಥಳವಾಯಿತು. ಪೆರ್ಗಡೆ ಕುಟುಂಬದ ಹಿರಿಯ ಸದಸ್ಯ ಧರ್ಮಾಧಿಕಾರಿಯ ಸ್ಥಾನವನ್ನು ವಹಿಸಿಕೊಂಡು ಹೆಗ್ಗಡೆ ಎಂಬ ಬಿರುದನ್ನು ಪಡೆಯುತ್ತಾರೆ. ಇದೀಗ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆಯವರಾಗಿದ್ದಾರೆ.

ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲೂಕಿನಲ್ಲಿರುವ ಶಿವನ ಕ್ಷೇತ್ರ ಅಂದಿನಿಂದ ಇಂದಿನವರೆಗೂ ಹೆಗ್ಗಡೆ ಕುಟುಂಬದವರೇ ದೇವಸ್ಥಾನದ ಜವಬ್ಧಾರಿಯನ್ನು ಹೊತ್ತುಕೊಂಡಿದ್ದಾರೆ. ಆದರೆ, ಸಾಕಷ್ಟು ಜನ ಭಕ್ತಾಧಿಗಳು ಧರ್ಮಸ್ಥಳವನ್ನ ಹಿಂದು ದೇವಾಲಯ ಎಂದು ನಂಬಿದ್ದರು. ಮೊದಲಿನಿಂದಲೂ ಜೈನರು ದೇವಾಲಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ, ಧರ್ಮಸ್ಥಳ ವಾರಸುದಾರಿಕೆ ಬಗ್ಗೆ ಇನ್ನೂ ಸಹ ಚರ್ಚೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+