'ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಳಂಬ'
ಬೆಂಗಳೂರು, ಏಪ್ರಿಲ್ 18 : ದ್ವಿತೀಯ ಪಿಯುಸಿ ಮೌಲ್ಯಮಾಪನ ಗೊಂದಲ ಇನ್ನೂ ಬಗೆಹರಿದಿಲ್ಲ. 'ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕಾರ ಮಾಡಿರುವ ಕಾರಣ ಮೇ ಮೊದಲ ವಾರದಲ್ಲಿ ಫಲಿತಾಂಶ ನೀಡುವುದು ಕಷ್ಟವಾಗಬಹುದು. ಎಷ್ಟು ದಿನ ವಿಳಂಬ ಆಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ' ಎಂದು ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ
ಭಾನುವಾರ
ಪತ್ರಿಕಾಗೋಷ್ಠಿ
ನಡೆಸಿದ
ಪ್ರಾಥಮಿಕ
ಮತ್ತು
ಪ್ರೌಢ
ಶಿಕ್ಷಣ
ಸಚಿವ
ಕಿಮ್ಮನೆ
ರತ್ನಾಕರ್
ಅವರು,
'ಮೌಲ್ಯಮಾಪನಕ್ಕೆ
ಪರ್ಯಾಯ
ವ್ಯವಸ್ಥೆ
ಮಾಡಿಕೊಳ್ಳಲಾಗಿದೆ.
ಸ್ನಾತಕೋತ್ತರ
ಪದವಿ
ಪೂರ್ಣಗೊಳಿಸಿರುವ
4
ಸಾವಿರ
ಪ್ರೌಢಶಾಲಾ
ಶಿಕ್ಷಕರನ್ನು
ಗುರುತಿಸಲಾಗಿದ್ದು,
ಮೌಲ್ಯಮಾಪನದಲ್ಲಿ
ಪಾಲ್ಗೊಳ್ಳುವಂತೆ
ಅವರಿಗೆ
ಆದೇಶ
ಕಳುಹಿಸಲಾಗುವುದು'
ಎಂದು
ಹೇಳಿದರು.
[ಪಿಯು
ಮೌಲ್ಯಮಾಪನಕ್ಕೆ
ಹೊಸ
ಸೂತ್ರ]
'ಮಾದರಿ ಉತ್ತರ ಪತ್ರಿಕೆಗಳನ್ನು ನೀಡಿ ಸಮರ್ಥರಿಂದಲೇ ಮೌಲ್ಯಮಾಪನ ಮಾಡಿಸುತ್ತೇವೆ. ಯಾರು ಯಾವ ವಿಷಯದಲ್ಲಿ ಉಪನ್ಯಾಸ ಮಾಡುತ್ತಿದ್ದಾರೋ ಅಂತಹವರಿಗೆ ಅದೇ ವಿಷಯದ ಉತ್ತರ ಪತ್ರಿಕೆ ನೀಡಲಾಗುವುದು. ಎಲ್ಲಿಯೂ ತಪ್ಪು ಆಗುವುದಿಲ್ಲ' ಎಂದು ಸಚಿವರು ಭರವಸೆ ನೀಡಿದರು. [ಪತ್ರಿಕೆ ಸೋರಿಕೆ, 11 ಖಾಸಗಿ ಕಾಲೇಜುಗಳ ಮೇಲೆ ಸಿಐಡಿ ದಾಳಿ]
ಫಲಿತಾಂಶ ವಿಳಂಬವಾಗಲಿದೆ : 'ಮೌಲ್ಯಮಾಪನವನ್ನು ಉಪನ್ಯಾಸಕರು ಬಹಿಷ್ಕಾರ ಮಾಡಿರುವ ಕಾರಣ ಮೇ ಮೊದಲ ವಾರದಲ್ಲಿ ಫಲಿತಾಂಶ ನೀಡುವುದು ಕಷ್ಟವಾಗಬಹುದು. ಫಲಿತಾಂಶ ನೀಡುವುದು ಎಷ್ಟು ದಿನ ವಿಳಂಬ ಆಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ' ಎಂದು ಸಚಿವರು ಹೇಳಿದರು. [ಶುರುವಾಗದ ಮೌಲ್ಯಮಾಪನ: ವಿದ್ಯಾರ್ಥಿಗಳ ಭವಿಷ್ಯ ಅಯೋಮಯ]
ಮುಖ್ಯಮಂತ್ರಿಗಳ ಸಹಮತ : 'ಮೌಲ್ಯಮಾಪನ ಬಹಿಷ್ಕಾರ ಮಾಡಿರುವ ಉಪನ್ಯಾಸಕರ ಬೇಡಿಕೆಗಳನ್ನು ತಕ್ಷಣ ಪೂರ್ಣ ಪ್ರಮಾಣದಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಜೂನ್ನಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸಮಸ್ಯೆ ಬಗೆಹರಿಸುತ್ತೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಉಪನ್ಯಾಸಕರು ಮುಷ್ಕರ ಕೈ ಬಿಡಬೇಕು' ಎಂದು ಸಚಿವರು ಕರೆ ನೀಡಿದರು.
ಬಹಿಷ್ಕಾರ ಏಕೆ? : ಶಿಕ್ಷಕರು ಮತ್ತು ಉಪನ್ಯಾಸಕರ ವೇತನಕ್ಕೆ ಸಂಬಂಧಿಸಿದಂತೆ ಕುಮಾರ ನಾಯಕ್ ಅವರು ನೀಡಿದ್ದ ವರದಿಯನ್ನು ಜಾರಿಗೊಳಿಸಲು ಆಗ್ರಹಿಸಿ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕಾರ ಮಾಡಿ ಮುಷ್ಕರ ನಡೆಸುತ್ತಿದ್ದಾರೆ. ಸರ್ಕಾರ ಉಪನ್ಯಾಸಕರ ಜೊತೆ ನಡೆಸಿದ ಐದು ಸುತ್ತಿನ ಸಂಧಾನ ಸಭೆ ವಿಫಲವಾಗಿದೆ.