ವ್ಯಾಕ್ಸಿನ್ ಅಭಾವ: ಲಸಿಕೆ ಅಭಿಯಾನಕ್ಕೆ ಹುಳಿ ಹಿಂಡಿದ್ದೇ ಸಿದ್ದರಾಮಯ್ಯ
ಬೆಂಗಳೂರು, ಮೇ 12: ಈಗ ದೇಶಾದ್ಯಂತ ಎದ್ದಿರುವ ಲಸಿಕೆ ಅಭಾವಕ್ಕೆ ಕರ್ನಾಟಕ ಬಿಜೆಪಿ ಘಟಕ, ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರೇ ಕಾರಣ ಎಂದು ದೂರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ನಿರಾತಂಕವಾಗಿ ನಡೆಯುತ್ತಿದ್ದ ಲಸಿಕೆ ಅಭಿಯಾನಕ್ಕೆ ಹುಳಿ ಹಿಂಡಿದ್ದೇ ಕಾಂಗ್ರೆಸ್. ಜನರ ಮನಸಿನಲ್ಲಿ ಹುಳಿ ಹಿಂಡಿದ #ಬುರುಡೆರಾಮಯ್ಯ, ಸಮಾಜದಲ್ಲಿ ಅನುಮಾನದ ಹಾವು ಬಿಟ್ಟರು. ಜನರಿಗೆ ಆತ್ಮ ಸ್ಥೈರ್ಯ ತುಂಬುವ ಒಂದು ಕೆಲಸವನ್ನಾದರೂ @INCKarnataka ಮಾಡಿದೆಯೇ?"ಎಂದು ಬಿಜೆಪಿ ಪ್ರಶ್ನಿಸಿದೆ.
ಕೋವಿಶೀಲ್ಡ್ 1, 2ನೇ ಡೋಸ್ ನಂತರ ಎಷ್ಟು ಪರಿಣಾಮಕಾರಿ: ಸ್ಟಡಿ ರಿಪೋರ್ಟ್
"ನಾನು ಅಕ್ಕಿ ಕೊಟ್ಟೆ, ಇಂದಿರಾ ಕ್ಯಾಂಟೀನಲ್ಲಿ ಊಟ ಕೊಟ್ಟೆ ನಾನು, ನಾನು, ನಾನು..! ಏನು ನಿಮ್ಮ ಪಿತ್ರಾರ್ಜಿತ ಆಸ್ತಿಯ ದುಡ್ಡಿನಲ್ಲಿ ಕೊಟ್ಟಿದ್ದೇ @siddaramaiah? ಎಲ್ಲದಕ್ಕೂ ನಾನು ಎನ್ನುವ @INCKarnataka ಪಕ್ಷದ ನಾಯಕರು ಕೋವಿಡ್ ಸಂದರ್ಭದಲ್ಲಿ ರಾಜ್ಯದ ಜನತೆಗೆ ಮಾಡಿದ್ದೇನು" ಎಂದು ಬಿಜೆಪಿ ಪ್ರಶ್ನಿಸಿದೆ.
"ವ್ಯಾಕ್ಸಿನ್ ಬಾಕ್ಸ್ ಮೇಲೆ ಪ್ರಧಾನಿ ಚಿತ್ರ ಏಕೆ, ಕೋವಿಡ್ ಕಿಟ್ ಮೇಲೆ ಬಿಜೆಪಿ ಚಿಹ್ನೆ ಏಕೆ ಎಂದು ಪ್ರಶ್ನಿಸಿದ್ದ @siddaramaiah ಮಾಡಿದ್ದೇನು? ಬಡವರಿಗೆ ಕೊಡುವ ದಿನಸಿ ಚೀಲದ ಮೇಲೆ ಪುತ್ರನ ಚಿತ್ರ ಹಾಕಿದ್ದು ಎಷ್ಟು ಸರಿ? ಆಚಾರ ಹೇಳುವುದಕ್ಕೆ, ಬದನೆಕಾಯಿ ತಿನ್ನುವುದಕ್ಕೆ ಅಲ್ವೇ #ಬುರುಡೆರಾಮಯ್ಯ?"ಎಂದು ಬಿಜೆಪಿ, ಕಾಂಗ್ರೆಸ್ ಅನ್ನು ದೂಷಿಸಿದೆ.
"ಲಸಿಕೆ ಹಾಕುವುದು ಎಂದರೆ, ಭ್ರಷ್ಟಾಚಾರ ಮಾಡಿ ದುಡ್ಡು ಹೊಡೆದಷ್ಟು ಸುಲಭ ಎಂದುಕೊಂಡಿರಾ @DKShivakumar? ಲಸಿಕಾಕರಣ ಎನ್ನುವುದೊಂದು ಬೃಹತ್ ಅಭಿಯಾನ. ನೀವು ಕೇಳಿದ ತಕ್ಷಣ ಬ್ಲೂ ಪ್ರಿಂಟ್ ಕೊಟ್ಟು ಬಿಡುವುದಕ್ಕೆ ಇದೇನು ನಿಮ್ಮ ರಾಜಕೀಯ ಪೂರ್ವದ ವೃತ್ತಿ ಅಂದುಕೊಂಡಿದ್ದೀರಾ?" ಎಂದು ಕೆಪಿಸಿಸಿ ಅಧ್ಯಕ್ಷರನ್ನು ಬಿಜೆಪಿ ಟೀಕಿಸಿದೆ.
ಕೊರೊನಾ ನಿಯಂತ್ರಣಕ್ಕೆ ದೇಶಕ್ಕೆ ಮಾದರಿ: ಏನಿದು 'ಮುಂಬೈ ಮಾಡೆಲ್', ಯಾರಿದರ ನಾಯಕ?
"ಅಪಪ್ರಚಾರ ಮತ್ತು ಸುಳ್ಳು ಮಾಹಿತಿಗಳ ಮೂಲಕ, ಕೋವಿಡ್ ವಿರುದ್ಧ ಹೋರಾಡುತ್ತಿರುವ ದೇಶದ ಒಗ್ಗಟ್ಟನ್ನು ಕಾಂಗ್ರೆಸ್ ಹಳಿ ತಪ್ಪಿಸುತ್ತಿದೆ. ಬಿಜೆಪಿ ಅಧ್ಯಕ್ಷರಾದ ಶ್ರೀ @JPNadda ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ನ ಕುತಂತ್ರವನ್ನು ಬಟಾಬಯಲಾಗಿಸಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡಾ ಕಾಂಗ್ರೆಸ್ ವಿರುದ್ದ ತಿರುಗಿ ಬಿದ್ದಿದ್ದಾರೆ.
Recommended Video