ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್-ಜೆಡಿಎಸ್ ಸರ್ಕಾರ: ಕಗ್ಗಂಟಾಗಲಿದೆಯೇ ಖಾತೆ ಹಂಚಿಕೆ?

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ 23ರಂದು ಪ್ರಮಾಣವಚನ ಸ್ವೀಕಾರ | ನಂತರ ಖಾತೆ ಹಂಚಿಕೆ ಬಗ್ಗೆ ನಿರ್ಧಾರ | Oneindia Kannada

ಬೆಂಗಳೂರು, ಮೇ 21: ಬುಧವಾರ ನಡೆಯಲಿರುವ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಕಾಂಗ್ರೆಸ್ ಮುಖಂಡರು ನಂತರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಸಂಪುಟ ರಚನೆಯ ಅಂತಿಮ ತೀರ್ಮಾನವು ಕಾಂಗ್ರೆಸ್ ಮುಖಂಡರೊಂದಿಗಿನ ಅವರ ಸಭೆಯ ಬಳಿಕ ಹೊರಬೀಳುವ ನಿರೀಕ್ಷೆಯಿದೆ.

ಉಪಮುಖ್ಯಮಂತ್ರಿ ಆಯ್ಕೆಯ ಮಹತ್ವದ ನಿರ್ಧಾರವೂ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರೊಂದಿಗಿನ ಈ ಭೇಟಿ ವೇಳೆ ಅಂತಿಗೊಳ್ಳಲಿದೆ.

ಖಾತೆ ಹಂಚಿಕೆ ಅನುಪಾತದ ಬಗ್ಗೆ ಹೈಕಮಾಂಡ್‌ ನಿರ್ಣಯ: ಖರ್ಗೆಖಾತೆ ಹಂಚಿಕೆ ಅನುಪಾತದ ಬಗ್ಗೆ ಹೈಕಮಾಂಡ್‌ ನಿರ್ಣಯ: ಖರ್ಗೆ

'ಕಾಂಗ್ರೆಸ್ ಮುಖಂಡರೊಂದಿಗಿನ ಸಭೆಯ ಬಳಿಕ ಬುಧವಾರ ನಡೆಯಲಿರುವ ಸಮಾರಂಭದಲ್ಲಿ ನನ್ನ ಜತೆ ಯಾರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂಬುದನ್ನು ನಾನು ನಿರ್ಧರಿಸಲಿದ್ದೇನೆ' ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Congress-JDS yet to iron out differences on portfolios in Karnataka government

ಕುಮಾರಸ್ವಾಮಿ ಅವರು ಮಾತ್ರ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮರು ದಿನ ಸಮ್ಮಿಶ್ರ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಲಿದೆ. ಶುಕ್ರವಾರದಂದು ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದ್ದರು.

ಸೋನಿಯಾ ಭೇಟಿಗೂ ಮುನ್ನ ಹಾಸನದಲ್ಲಿ ಎಚ್‌ಡಿಕೆ ಸಾಲು ಸಾಲು ಪೂಜೆ ಸೋನಿಯಾ ಭೇಟಿಗೂ ಮುನ್ನ ಹಾಸನದಲ್ಲಿ ಎಚ್‌ಡಿಕೆ ಸಾಲು ಸಾಲು ಪೂಜೆ

ಮುಖ್ಯಮಂತ್ರಿ ಸೇರಿದಂತೆ 34 ಖಾತೆಗಳಿರುವ ಸಂಪುಟದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸಚಿವರ ಪಾಲನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ 20 ಮತ್ತು ಜೆಡಿಎಸ್ 14 ಸಚಿವ ಸ್ಥಾನಗಳನ್ನು ಹಂಚಿಕೊಳ್ಳುಬಹುದು ಎಂದು ಮೂಲಗಳು ತಿಳಿಸಿವೆ.

ಸಂಭಾವ್ಯ : ಕೈ-ತೆನೆ ಮೈತ್ರಿ ಸರ್ಕಾರದಲ್ಲಿ ಸಚಿವರು ಹಾಗೂ ಖಾತೆಗಳುಸಂಭಾವ್ಯ : ಕೈ-ತೆನೆ ಮೈತ್ರಿ ಸರ್ಕಾರದಲ್ಲಿ ಸಚಿವರು ಹಾಗೂ ಖಾತೆಗಳು

ಒಟ್ಟಾರೆ ಶಾಸಕರ ಬಲಾಬಲದಲ್ಲಿ ಕಾಂಗ್ರೆಸ್, ಜೆಡಿಎಸ್‌ಗಿಂತ ದುಪ್ಪಟ್ಟು ಸ್ಥಾನ ಹೊಂದಿದೆ. ಕಾಂಗ್ರೆಸ್ 78 ಶಾಸಕರ ಬಲ ಹೊಂದಿದ್ದು, ಜೆಡಿಎಸ್ 37 ಶಾಸಕರನ್ನು ಹೊಂದಿದೆ. ಈಗಾಗಲೇ ತಮ್ಮೊಂದಿಗೆ ಕೈಜೋಡಿಸಿರುವ ಇಬ್ಬರು ಶಾಸಕರಿಗೆ ಯಾವ ಸ್ಥಾನ ನೀಡುವುದು ಎಂಬ ಬಗ್ಗೆ ಉಭಯ ಪಕ್ಷಗಳನ್ನು ಇನ್ನೂ ನಿರ್ಧಾರ ಕೈಗೊಂಡಿಲ್ಲ.

ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಸಂಪುಟದಲ್ಲಿ ಸಿಂಹಪಾಲನ್ನು ತನಗೆ ನೀಡಬೇಕೆಂದು ಕಾಂಗ್ರೆಸ್ ಬೇಡಿಕೆ ಸಲ್ಲಿಸಿದೆ. ಜೆಡಿಎಸ್‌ಗೆ ನೀಡಲಾಗುವ 14 ಸಚಿವ ಸ್ಥಾನಗಳಲ್ಲಿ ಪಕ್ಷೇತರರನ್ನೂ ಪರಿಗಣಿಸಬೇಕು ಎಂದು ಕಾಂಗ್ರೆಸ್ ಅನಿಸಿಕೆ ವ್ಯಕ್ತಪಡಿಸಿದೆ.

ಅಲ್ಲದೆ, ಆಡಳಿತ ನಡೆಸಲು ತನಗೂ ಸಮಾನ ಅವಕಾಶ ನೀಡಬೇಕು ಎಂದು ಅಧಿಕಾರ ಹಂಚಿಕೆಯ ಸೂತ್ರವನ್ನು ಕಾಂಗ್ರೆಸ್ ಮುಂದಿರಿಸುತ್ತಿದೆ.

ಅಲ್ಲದೆ ಪ್ರಮುಖ ಸ್ಥಾನಗಳನ್ನು ತನಗೇ ನೀಡಬೇಕು ಎಂದು ಕಾಂಗ್ರೆಸ್ ಬಯಸಿದ್ದರೆ, ಸ್ಪೀಕರ್ ಸ್ಥಾನಕ್ಕೆ ಜೆಡಿಎಸ್ ಬೇಡಿಕೆ ಸಲ್ಲಿಸಿದೆ.

English summary
H D Kumaraswamy is likely to take oath as Karnataka Chief Minister alone on Wednesday while the Congress leaders will join in later. Sources say that the Congress is likely to get the bigger share in the ministry. The party would get 20 berths while the JD(S), 14. The Council of Ministers will have 34 members, including the chief minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X