ಕಮಿಷನ್ ಸರ್ಕಾರ ಎಂದ ಮೋದಿಗೆ ಕಾರ್ಟೂನ್ ತೋರಿಸಿದ ಸಿದ್ದರಾಮಯ್ಯ
Recommended Video
ಮೈಸೂರು, ಫೆಬ್ರವರಿ 20: ಇಲ್ಲಿ ನಡೆದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಸಿದ್ದರಾಮಯ್ಯ ಅವರ ಸರ್ಕಾರವನ್ನು ಕಮಿಷನ್ ಸರ್ಕಾರ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸಿದ್ದರಾಮಯ್ಯ ಅವರು ಕಾರ್ಟೂನ್ ವೊಂದನ್ನು ಟ್ವೀಟ್ ಮಾಡುವ ಮೂಲಕ ಉತ್ತರಿಸಿದ್ದಾರೆ.
ಕರೆಯದಿದ್ದರೂ ಮೋದಿ ಜೊತೆ ಉದ್ಘಾಟನೆಗೆ ಹೋಗಲಿರುವ ಸಿಎಂ
'ಕಳೆದ ಬಾರಿ ಬೆಂಗಳೂರಿಗೆ ಬಂದಾಗ ಇಲ್ಲಿ 10 ಪರ್ಸೆಂಟ್ ಸರ್ಕಾರ ಇದೆ ಎಂದು ಹೇಳಿದ್ದೆ. ಆನಂತರ ನನಗೆ ಸಾಕಷ್ಟು ಜನ ಕರೆ ಮಾಡಿ, ಎಸ್ಎಂಎಸ್ ಮೂಲಕ, ನೇರವಾಗಿ ಸಿಕ್ಕಾಗ 'ನಿಮ್ಮ ಮಾಹಿತಿ ಸರಿಯಿಲ್ಲ. ಶೇ.10 ಕಮಿಷನ್ ವ್ಯವಹಾರ ನಡೆಯುತ್ತಿಲ್ಲ, ಅದಕ್ಕಿಂತಲೂ ಹೆಚ್ಚು ಭ್ರಷ್ಟಾಚಾರವಿದೆ' ಎಂದು ಹೇಳಿದ್ದಾರೆ. ನಿಮಗೆ ಕಮಿಷನ್ ಸರ್ಕಾರ ಬೇಕೊ, ಮಿಷನ್ ಸರ್ಕಾರ ಬೇಕೊ? ಬಿಜೆಪಿ ಜನರ ಎಲ್ಲ ಕಾರ್ಯವನ್ನೂ ಮಿಷನ್ ರೀತಿ ನಡೆಸುತ್ತದೆ. ಎಂದು ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು.
ಇದಕ್ಕೆ
ಉತ್ತರಿಸಿರುವ
ಸಿದ್ದರಾಮಯ್ಯ
ಅವರು,ಪ್ರೀತಿಯ
ನರೇಂದ್ರ
ಮೋದಿ
ಅವರೇ
ನಿಮಗೆ
ಕಮಿಷನ್
ಬಗ್ಗೆ
ಮಾತನಾಡುವುದು
ಇಷ್ಟ
ಎಂಬುದು
ತಿಳಿಯಿತು.
ಹಾಗಾದರೆ ನನ್ನ ಪ್ರಶ್ನೆಗೆ ಉತ್ತರಿಸಿ- ನೀವು ಅಪನಗದೀಕರಣ ಮೂಲಕ ಸಾರ್ವಜನಿಕರು ಕ್ಯೂನಲ್ಲಿ ನಿಲ್ಲುವಂತೆ ಮಾಡಿದ್ರಿ. ಈಗ ನೀರವ್ ಮೋದಿ ಅವರನ್ನು ಓಡಿ ಹೋಗಲು ಬಿಟ್ಟಿದ್ದೀರಿ, 12,000 ಕೋಟಿ ರು ಇದು ಸಾರ್ವಜನಿಕರ ಹಣವಲ್ಲವೇ, ಎಷ್ಟು ಪರ್ಸಂಟೇಜ್ ಸಾರ್ವಜನಿಕರ ಹಣ ಇದು? ಎಂದು ಪ್ರಶ್ನಿಸಿದ್ದಾರೆ.
Dear PM @narendramodi ರವರೆ, since you are fond of talking about commission let me ask you-
— Siddaramaiah (@siddaramaiah) February 20, 2018
You made common people stand in queues to deposit their money in the Banks & then let #NiravModi run away with over 12,000 cr of people’s money.
What percent of people’s money is that? pic.twitter.com/whvsOIFYEi
ಈ ಬಗ್ಗೆ ಮಾತನಾಡುತ್ತಾ, ಮೋದಿ ಅವರನ್ನು ದೇಶದ ಅತ್ಯಂತ ಭ್ರಷ್ಟ ಪ್ರಧಾನಿ ಎಂದು ಜರೆದಿದ್ದಾರೆ. ನಾನಾಗಿದ್ದರೆ ನೀರವ್ ಮೋದಿ ಪರಾರಿಯಾಗಲು ಬಿಡುತ್ತಿರಲಿಲ್ಲ ಎಂದರು.