ಭುಸ್ಸೆಂದ ನಾಗಪ್ಪ, ಮನೆಯೊಡತಿ ಲೀಲಾವತಿ ಉಸ್ಸಪ್ಪ!
ಮಡಿಕೇರಿ, ಮೇ 17 : ಹಾವೆಂದರೆ ಸಾಕು ಬೆಚ್ಚಿ ಬೀಳುವ ಜನರ ನಡುವೆ ಮನೆಯ ದೇವರಕೋಣೆಯಲ್ಲಿ ಶ್ರೀಮಂಜುನಾಥನ ಫೋಟೋದ ಮುಂದೆ ಹೆಡೆಬಿಚ್ಚಿ ಭುಸ್ ಎಂದರೆ ಮನೆ ಮಂದಿಗೆ ಹೇಗಾಗಬೇಡ? ಈ ಅಪರೂಪದ ದೃಶ್ಯವನ್ನು ನೋಡಿ ಕೆಲವರು ಬೆಚ್ಚಿಬಿದ್ದರೆ ಮತ್ತೆ ಕೆಲವರು ಶ್ರದ್ಧೆಯಿಂದ ನಮನ ಸಲ್ಲಿಸಿದರು.
ಇದೆಲ್ಲವೂ ನಡೆದಿದ್ದು ಕುಶಾಲನಗರ ಬಳಿಯ ಗುಡ್ಡೆಹೊಸೂರು ಗ್ರಾಮದ ನಿವಾಸಿ ಲೀಲಾವತಿ ಎಂಬುವರ ಮನೆಯಲ್ಲಿ. ಎಂದಿನಂತೆ ದೇವರ ಕೋಣೆಗೆ ತೆರಳಿದ ಲೀಲಾವತಿಯವರಿಗೆ ಅಚ್ಚರಿ ಕಾದಿತ್ತು. ಇದ್ದಕ್ಕಿದ್ದಂತೆ ಭುಸ್ ಎಂಬ ಶಬ್ದ ಬಂದಿತ್ತು. ಎಚ್ಚೆತ್ತು ನೋಡಿದ ಅವರಿಗೆ ದೇವರ ಕೋಣೆಯ ದೀಪ ಹಚ್ಚುವ ಸ್ಥಳದಲ್ಲಿ ದೊಡ್ಡಗಾತ್ರದ ಹೆಡೆಬಿಚ್ಚಿ ನಿಂತು ಭುಸುಗುಡುತ್ತಿದ್ದ ನಾಗರಹಾವಿನ ದರ್ಶನವಾಗಿತ್ತು. [ಮಂತ್ರವಾದಿ ಮಾತು ಕೇಳಿ ಹಾವು ಕೊಂದ ವ್ಯಕ್ತಿ]

ಕೊಠಡಿಯಿಂದ ಹೊರಗೆ ಬಂದ ಅವರು ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಹತ್ತಿರದವರು ಬಂದು ನೋಡಿದಾಗ ದೇವರ ಫೋಟೋ ಬಳಿ ತೆಕ್ಕೆ ಹಾಕಿ ಹೆಡೆಬಿಚ್ಚಿ ನಿಂತ ನಾಗರ ಹಾವು ಕಂಡಿದೆ. ಕೆಲವರು ದೈವಸ್ವರೂಪಿ ಹಾವೆಂದು ಕೈಮುಗಿದಿದ್ದೂ ಆಯಿತು. ಆದರೆ ಕೊಠಡಿಯ ಒಳಗೆ ಹೋಗಿ ಅದನ್ನು ಅಲ್ಲಿಂದ ಓಡಿಸುವ ಧೈರ್ಯ ಮಾತ್ರ ಯಾರಿಗೂ ಬರಲಿಲ್ಲ.
ಮನಯೊಡತಿ ಲೀಲಾವತಿಯವರ ತಾಯಿ ಪುಟ್ಟಬಸಮ್ಮ ದೈವಭಕ್ತೆ. ಅವರು 80ನೇ ವರ್ಷ ಪ್ರಾಯದಲ್ಲೂ ಎರಡು ಬಾರಿ ಶಬರಿಮಲೆಗೆ ಹೋಗಿ ಬಂದಿದ್ದರು. ಕಳೆದ ವರ್ಷವಷ್ಟೇ ತೀರಿಕೊಂಡಿದ್ದರು. ಅವರೇ ನಾಗರ ಹಾವಿನ ರೂಪದಲ್ಲಿ ಬಂದಿದ್ದಾರೆ, ಮನೆಗೆ ಒಳ್ಳೆಯದಾಗುತ್ತೆ.. ಹೀಗೆ ಕಥೆಯನ್ನೂ ಸ್ಥಳದಲ್ಲಿದ್ದವರು ಪೋಣಿಸಿದರು. [ಕರ್ನಾಟಕಕ್ಕೆ ಮತ್ತೊಬ್ಬ ಹಾವಾಡಗಿತ್ತಿ ಪ್ರಾಪ್ತಿ]

ಇಷ್ಟೆಲ್ಲಾ ಆದರೂ ಮನೆಯಲ್ಲಿ ಹಾವನ್ನು ಬಿಟ್ಟುಕೊಂಡು ಇರಲು ಸಾಧ್ಯವಿಲ್ಲ, ಅಲ್ವೆ? ಏನು ಮಾಡೋದು ಎಂದು ಯೋಚಿಸುತ್ತಿದ್ದಾಗ ಹಾವು ಹಿಡಿಯುವುದರಲ್ಲಿ ನಿಸ್ಸೀಮರಾಗಿರುವ ಸ್ಥಳೀಯ ಉಧ್ಘಮ್ ಶಾಲೆಯ ನೌಕರ ಶಿವು ವಿಶ್ವನಾಥ್ ಎಂಬವರು ಬಂದರು. ನೇರವಾಗಿ ದೇವರ ಕೋಣೆಗೆ ಹೋದವರೇ ಅಲ್ಲಿದ್ದ ನಾಗರಹಾವನ್ನು ಹಿಡಿದರು. ಬಳಿಕ ಪಕ್ಕದಲ್ಲಿರುವ ಆನೆಕಾಡಿನ ಅರಣ್ಯಕ್ಕೆ ಬಿಡಲಾಯಿತು. ಸದ್ಯ ಮನೆಯೊಡತಿ ಲೀಲಾವತಿ ನೆಮ್ಮದಿಯುಸಿರು ಬಿಟ್ಟಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications