ಶೀಘ್ರದಲ್ಲೇ ಸತ್ಯ ಹೊರ ಬರಲಿದೆ, ಸತ್ಯ ಎದುರಿಸುವ ಶಕ್ತಿ ಕಾಂಗ್ರೆಸ್ ಪಡೆದುಕೊಳ್ಳಲಿ; ಸಿಎಂ ಬೊಮ್ಮಾಯಿ
ಗದಗ, ಏಪ್ರಿಲ್ 16: ಕಾಂಗ್ರೆಸ್ನವರು ತಾವೇ ಶುದ್ಧಹಸ್ತರು ಎನ್ನುವಂತೆ ವರ್ತಿಸುತ್ತಿದ್ದಾರೆ, ಸ್ವಲ್ಪ ದಿನದಲ್ಲಿ ಅವರಿಗೆ ಸತ್ಯವನ್ನು ಎದುರಿಸುವ ಕಾಲ ಸನ್ನಿಹಿತವಾಗಲಿದೆ. ಆ ಸತ್ಯ ಎದುರಿಸುವ ಶಕ್ತಿಯನ್ನು ಕಾಂಗ್ರೆಸ್ನವರು ಪಡೆದುಕೊಳ್ಳಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆ.ಎಸ್. ಈಶ್ವರಪ್ಪ ಅವರ ಬಂಧನಕ್ಕೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ತಿರುಗೇಟು ನೀಡಿದರು.
ಗದಗ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ, ಲೂಟಿ ನಡೆದಿದೆ. ಇದಕ್ಕೆ ಇತಿಹಾಸದಲ್ಲಿ ಸಾಕ್ಷಿ ಇದೆ. ಕಾಂಗ್ರೆಸ್ ಸಾಮಾಜಿಕವಾಗಿ ಒಡೆದು ಆಳುವುದು ಹಾಗೂ ತುಷ್ಟೀಕರಣ ನೀತಿ ಪ್ರಾರಂಭಿಸಿತು. ಭ್ರಷ್ಟಾಚಾರ ಪರಂಪರೆಯನ್ನು ಪ್ರಾರಂಭಿಸಿದ್ದೇ ಕಾಂಗ್ರೆಸ್ ಎಂದು ಆರೋಪಿಸಿದರು.
ಬಿಜೆಪಿ ಪಕ್ಷಕ್ಕೆ ಮುಜುಗರವಾಗಬಾರದೆಂದು ಕೆ.ಎಸ್. ಈಶ್ವರಪ್ಪ ಅವರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದು, ಶೀಘ್ರ ಆರೋಪಮುಕ್ತರಾಗುವ ವಿಶ್ವಾಸವಿದೆ. ಅವರ ಬಂಧನಕ್ಕೆ ಆಗ್ರಹ ಮಾಡಲು ಕಾಂಗ್ರೆಸ್ಸಿಗರಿಗೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿದರು.
ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕರು ಇಂದು ಹತಾಶರಾಗಿ ನಮ್ಮ ಪಕ್ಷದ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಶುಭ್ರರು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ಗಮನಿಸಿದಂತೆ ರಾಜ್ಯದ ವಿರೋಧ ಪಕ್ಷದಲ್ಲಿ ಇಂದು ತೊಳಲಾಟ ಪ್ರಾರಂಭವಾಗಿದೆ. ಅದನ್ನು ಮುಚ್ಚಿಟ್ಟುಕೊಳ್ಳಲು ಕಾಂಗ್ರೆಸ್ನವರು ನಾಟಕ ಪ್ರಾರಂಭ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಜಾರ್ಜ್ರ
ಬಂಧನವಾಗಿತ್ತೇ?
ಕೆ.ಎಸ್.
ಈಶ್ವರಪ್ಪ
ಬಂಧನದ
ಬಗ್ಗೆ
ತನಿಖಾಧಿಕಾರಿಗಳು
ತೀರ್ಮಾನ
ಮಾಡುತ್ತಾರೆ.
ಡಿವೈಎಸ್ಪಿ
ಗಣಪತಿ
ಆತ್ಮಹತ್ಯೆ
ಕೇಸ್ನಲ್ಲೂ
ಗೃಹ
ಸಚಿವರಾಗಿದ್ದ
ಕೆ.ಜೆ.
ಜಾರ್ಜ್
ಅವರನ್ನು
ಬಂಧಿಸಿರಲಿಲ್ಲ.
ಕರ್ನಾಟಕ
ಪೊಲೀಸರು
ತನಿಖೆ
ಮಾಡುವಾಗಲೂ
ಬಂಧಿಸಿರಲಿಲ್ಲ.
ಕೇಸ್
ಸಿಬಿಐಗೆ
ವರ್ಗಾವಣೆಯಾದಾಗಲೂ
ಬಂಧನ
ಆಗಿಲ್ಲ.
ತನಿಖೆಯಾಗುವವರೆಗೂ
ಸುಮ್ಮನಿರಬೇಕು,
ಸತ್ಯ
ಹೊರಬರುತ್ತದೆ.
ಕಾಂಗ್ರೆಸ್ಸಿಗರು
ತನಿಖಾಧಿಕಾರಿಗಳು,
ನ್ಯಾಯಮೂರ್ತಿಗಳಾಗುವ
ಅವಶ್ಯಕತೆ
ಇಲ್ಲ.
ಸಂತೋಷ್
ಪಾಟೀಲ
ಆತ್ಮಹತ್ಯೆ
ಪ್ರಕರಣ
ಮುಕ್ತವಾಗಿ
ತನಿಖೆಯಾಗಲು
ಬಿಡಬೇಕು
ಎಂದು
ಹೇಳಿದರು.
ನಮ್ಮ ನಾಯಕ ಕೆ.ಎಸ್. ಈಶ್ವರಪ್ಪ ಮೇಲೆ ಕಾಂಗ್ರೆಸ್ ವಿನಾಕಾರಣ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಈಶ್ವರಪ್ಪ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ. ತನಿಖೆ ನಿಷ್ಠುರವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಯುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಹತ್ತಾರು ಹಗರಣಗಳನ್ನು ಮಾಡಿತ್ತು ಅಲ್ಲದೇ ಭ್ರಷ್ಟಾಚಾರವನ್ನು ಎಲ್ಲಾ ರಂಗಕ್ಕೂ ಹಬ್ಬಿಸಿತ್ತು. ಈ ಕಾರಣಕ್ಕಾಗಿಯೇ ಜನರು ಅವರನ್ನು ಇಂದು ಮನೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್ ನಾಯಕರು ನಾವು ಆ ಭಾಗ್ಯ, ಈ ಭಾಗ್ಯ ಕೊಟ್ಟಿದ್ದೇವೆ ಎಂದರು. ಆದರೆ ಅವೆಲ್ಲವೂ ಭಾಷಣದ ಭಾಗ್ಯಗಳಾಗಿದ್ದು, ರಾಜ್ಯದ ದೌರ್ಭಾಗ್ಯ ಎಂದು ವ್ಯಂಗ್ಯವಾಡಿದ ಸಿಎಂ ಬೊಮ್ಮಾಯಿ, ಅವರ ಯಾವ ಯೋಜನೆಗಳೂ ಜನರಿಗೆ ಮುಟ್ಟಲಿಲ್ಲ. ಬದಲಾಗಿ, ನಾಯಕರ ಮನೆಗಳಿಗೆ ಹಣ ತಲುಪಿತು ಎಂದು ಆರೋಪಿಸಿದರು.
ಸಾವಿನ
ಮನೆಯಲ್ಲಿ
ರಾಜಕೀಯ:
ಈಶ್ವರಪ್ಪ
ಮೇಲೆ
ಅನಗತ್ಯವಾಗಿ
ಗೂಬೆ
ಕೂರಿಸುವ
ಕೆಲಸ
ನಡೆಯುತ್ತಿದೆ.
ಕಾಂಗ್ರೆಸ್
ಪಕ್ಷದಲ್ಲಿ
ಆಗುತ್ತಿರುವ
ಬೆಳವಣಿಗೆಗಳನ್ನು
ಅರಗಿಸಿಕೊಳ್ಳಲು
ಆಗದೇ
ಈ
ರೀತಿಯ
ಗೊಂದಲ
ಸೃಷ್ಟಿಮಾಡುತ್ತಿದ್ದಾರೆ.
ಸಾವಿನ
ಮನೆಯಲ್ಲಿ
ರಾಜಕೀಯ
ಲಾಭದ
ಏಣಿಕೆ
ಮಾಡುವ
ಕೆಲಸ
ನಡೆಸಿದ್ದಾರೆ.
ಈಗಾಗಲೇ
ಜನರಿಂದ
ತಿರಸ್ಕಾರಗೊಂಡಿರುವ
ಅವರ
ವರ್ತನೆ
ಇದೇ
ರೀತಿ
ಮುಂದುವರಿದಲ್ಲಿ
ಕೇಂದ್ರದಂತೆ
ಕರ್ನಾಟಕದಲ್ಲಿಯೂ
ವಿರೋಧ
ಪಕ್ಷದ
ಸ್ಥಾನವನ್ನು
ಕಳೆದುಕೊಳ್ಳುವ
ಪರಿಸ್ಥಿತಿ
ಬರುತ್ತದೆ
ಎಂದು
ಲೇವಡಿ
ಮಾಡಿದರು.
ಈಶ್ವರಪ್ಪ
ವಿರುದ್ಧ
ಷಡ್ಯಂತ್ರ
ಗುತ್ತಿಗೆದಾರ
ಸಂತೋಷ್
ಪಾಟೀಲ
ಆತ್ಮಹತ್ಯೆ
ಪ್ರಕರಣದಲ್ಲಿ
ಸಚಿವ
ಈಶ್ವರಪ್ಪ
ವಿರುದ್ಧ
ಷಡ್ಯಂತ್ರ
ನಡೆದಿರುವುದೂ
ಸೇರಿದಂತೆ
ಆತ್ಮಹತ್ಯೆಗೆ
ಕಾರಣವಾದ
ಅಂಶಗಳು
ಯಾವುವು
ಎಂಬುದು
ತನಿಖೆಯ
ನಂತರ
ಬೆಳಕಿಗೆ
ಬರಲಿದೆ.
ಸಂತೋಷ್
ಆತ್ಮಹತ್ಯೆಗೆ
ಸಂಬಂಧಿಸಿದಂತೆ
ಅದಕ್ಕೆ
ಕಾರಣಗಳೇನು?
ಅದರ
ಹಿನ್ನೆಲೆ
ಏನು?
ಎಲ್ಲದರ
ಕುರಿತು
ತನಿಖೆಯಾಗಲಿದೆ.
ಈ
ಕುರಿತು
ಎಲ್ಲ
ಮೂಲಗಳಿಂದ
ಮಾಹಿತಿ
ಸಂಗ್ರಹಿಸಿ
ತನಿಖೆ
ಮಾಡಲಾಗುತ್ತದೆ
ಎಂದು
ಹೇಳಿದರು.
ಕಾಂಗ್ರೆಸ್ ನಾಯಕರು ಈಗಲಾದರೂ ಬುದ್ದಿ ಕಲಿಯಬೇಕು. ಲೋಕಸಭೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನವನ್ನು ಕಳೆದುಕೊಂಡಿದೆ. ಲೋಕಸಭೆಯಲ್ಲಿ ಆದಂತೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲೂ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.
Recommended Video
ಈ ವೇಳೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ಕೃಷಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್, ಸಂಸದ ಶಿವಕುಮಾರ ಉದಾಸಿ, ಶಾಸಕ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಎಸ್.ವಿ. ಸಂಕನೂರು, ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ಮೋಹನ್ ಮಾಳಶೆಟ್ಟಿ, ಶ್ರೀಪತಿ ಭಟ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.